ಉಪ್ಪಳ(ವಿಶ್ವಕನ್ನಡಿಗ ನ್ಯೂಸ್): ಮಂಗಲ್ಪಾಡಿ ಪಂಚಾಯತಿನ 5- ನೇ ವಾರ್ಡಿನಲ್ಲಿ ಈ ಬಾರಿ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಮುಸ್ಲಿಂ ಲೀಗಿನ ಸಿಟ್ಟಿಂಗ್ ಸೀಟ್ ಆದ ಐದನೇ ವಾರ್ಡ್ ಕೈತಪ್ಪುವುದು ಖಚಿತವಾದ್ದರಿಂದ ಎಸ್.ಡಿ.ಪಿ.ಐ ಗೆಲುವು ಬಹುತೇಕ ಸುನಿಶ್ಚಿತವಾಗಿದೆ.
ಜನತೆಗೆ ನಾಡಿನ ಸ್ಥಿತಿಗತಿಗಳನ್ನು ಸ್ಪಷ್ಟವಾಗಿ ವಿವರಿಸಿ, ಆ ಮೂಲಕ ಅಪಾರವಾದ ಜನ ಬೆಂಬಲವನ್ನು ಎಸ್.ಡಿ.ಪಿ.ಐ ಅಭ್ಯರ್ಥಿ ನನ್ಯಾಸ್ ಈಗಾಗಲೇ ಗಳಿಸಿಕೊಂಡಿದ್ದಾರೆ. ಲೀಗ್ ಹೊರತಾಗಿ ಎಲ್.ಡಿ.ಎಫ್, ಸ್ವತಂತ್ರರು ಸೇರಿಂದಂತೆ ಐದು ಮಂದಿ ಈಗಾಗಲೇ ಸ್ಪರ್ಧಾ ಕಣದಲ್ಲಿದ್ದಾರಾದರೂ ನನ್ಯಾಸ್ ರಂತೆ ಬೇರಾರಿಗೂ ಜನತೆಯ ಹೃದಯ ಗೆಲ್ಲಲಾಗಿಲ್ಲ.
ಎಸ್.ಡಿ.ಪಿ.ಐ ಗೆ ಲಭಿಸುತ್ತಿರುವ ಜನ ಬೆಂಬಲ ಮತ್ತು ಅಭ್ಯರ್ಥಿಯ ಜನಪ್ರಿಯತೆ ಅನುಕೂಲಕರವಾದುದರಿಂದ ಐದನೇ ವಾರ್ಡಿನಲ್ಲಿ ಗೆಲುವಿನ ಪತಾಕೆ ಹಾರಿಸಲು ಸಾಧ್ಯವೆಂಬ ಆತ್ಮವಿಶ್ವಾಸ ಕಾರ್ಯಕರ್ತರು ಮತ್ತು ನೇತಾರರದ್ದು.
ಕಳೆದ ಚುನಾವಣೆಯಲ್ಲಿಯೇ ಎಸ್.ಡಿ.ಪಿ.ಐ ಗೆ ಅಭೂತಪೂರ್ವ ಜನ ಬೆಂಬಲ ದೊರಕಿತ್ತು. ಅವಗಣಿಸಲಾಗದ ನಿರ್ಣಾಯಕ ಸ್ಥಾನ ಅವತ್ತು ಪಕ್ಷ ಪಡೆದಿತ್ತು.
ಈ ಬಾರಿ ಎಸ್.ಡಿ.ಪಿ.ಐ ಯನ್ನು ಸೋಲಿಸಲು ಯು.ಡಿ.ಎಫ್ ನೇತಾರರು ಸಕ್ರಿಯವಾಗಿ ರಂಗದಲ್ಲಿದ್ದರೂ, ಹಲವು ಕುತಂತ್ರ ಹೆಣೆದರೂ ಅದಕ್ಕೆ ಮನ್ನಣೆ ದೂರೆತಿಲ್ಲ. ಯು.ಡಿ.ಎಫ್ ಕಾರ್ಯಕರ್ತರ ನಿಷ್ಕ್ರಿಯತೆ; ನೇತಾರರು ಮತ್ತು ಕಾರ್ಯಕರ್ತರೆಡೆಯಲ್ಲಿನ ಅಸಂತೃಪ್ತಿಯನ್ನು ಎದ್ದು ತೋರಿಸುತ್ತಿದೆ.
ಲಾಕ್ ಡೌನ್ ವೇಳೆಯಲ್ಲಿ ಸಮರ್ಪಕ ಸಹಕಾರ ನೀಡದಿರುವುದೂ, ಪಕ್ಷಪಾತಿ ಧೋರಣೆಯ ಆಢಳಿತ ಸಮಿತಿಯ ಪ್ರವೃತ್ತಿಗಳೂ, ಕಳೆದ ಬಾರಿ ಓಟು ಕೇಳಲು ಹೋದ ಯು.ಡಿ.ಎಫ್ ಕಾರ್ಯಕರ್ತರೇ ಈ ಬಾರಿ ಯು.ಡಿ.ಎಫ್ ವಿರುದ್ಧ ತಿರುಗಿ ನಿಂತಿರುವುದೂ ಈ ಬಾರಿ ಎಸ್.ಡಿ.ಪಿ.ಐ ಯ ಗೆಲುವಿಗೆ ಪುಷ್ಠಿ ನೀಡುತ್ತಿದೆ.
ಕಳೆದ ಹನ್ನೊಂದು ವರ್ಷಗಳಲ್ಲಿ ಶಿಸ್ತು ಬದ್ಧವಾದ ರಾಜಕೀಯ ಸೇವೆ, ಲಾಕ್ ಡೌನ್ ಕಾಲದಲ್ಲಿ ಸಕ್ರಿಯ ಸಮಾಜ ಸೇವೆ, ದಾರಿಗಳನ್ನು ಶ್ರಮಧಾನದ ಮೂಲಕ ಸಂಚಾರಯೋಗ್ಯಗೊಳಿಸುವಿಕೆ, ಇನ್ನೂ ಹಲವಾರು ರೀತಿಯಲ್ಲಿ ನಡೆಸಿದ ಜನಸೇವೆಗಳನ್ನು ಮುಂದಿರಿಸಿ ಎಸ್.ಡಿ.ಪಿ.ಐ ಈ ಬಾರಿ ಚುನಾವಣೆಯನ್ನೆದುರಿಸುತ್ತಿದೆ. ಈ ಬಾರಿ ಜಯ ಪತಾಕೆ ಹಾರಿಸುವ ಹುಮ್ಮಸ್ಸು ಊರವರಲ್ಲಿ ಎದ್ದುಕಾಣುತ್ತಿದೆ.
ಅಭಿವೃದ್ಧಿ ಎಂಬುದು ಕಾಗದಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಕಟುಸತ್ಯವೂ ಐದನೇ ವಾರ್ಡಿನಲ್ಲಿ ಎಸ್.ಡಿ.ಪಿ.ಐ ಗೆಲುವಿಗೆ ಇನ್ನಷ್ಟು ಬಲವೊದಗಿಸುತ್ತಿದೆ.
ಎಸ್.ಡಿ.ಪಿ.ಐ ಮಂಗಲ್ಪಾಡಿ ಪಂಚಾಯತಿನಲ್ಲಿ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಲಿದೆಯೆಂದೂ, ಗೆಲ್ಲುವ ವಾರ್ಡುಗಳಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವೊದಗಿಸುವುದರ ಮೂಲಕ ಅಭಿವೃದ್ದಿ ಪ್ರಕ್ರಿಯೆಗಳಿಗೆ ರೂಪುರೇಷೆ ತಯಾರಿಸಲಾಗುವುದೆಂದೂ ಎಸ್.ಡಿ.ಪಿ.ಐ ವಲಯಗಳು ತಿಳಿಸಿವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.