ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೂಫ್ ಶರೀಫ್ ರ ಈಡಿ ಬಂಧನದ ವಿರುದ್ಧ ಸಿ ಎಫ್ ಐ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಮುಂಖಂಡರಾದ ಸವಾದ್ ಕಲ್ಲರ್ಪೆ ರವೂಫ್ ಷರೀಫ್ ಬಂಧನವು ಎನ್.ಆರ್.ಸಿ ಸಿಎಎ ಹೋರಾಟದಲ್ಲಿ ಮುಂಚೂನಿಯಲ್ಲಿದ್ದ ಹೋರಾಟಗಾರರ ಬಂಧನದ ಮುಂದವರಿದ ಭಾಗವಾಗಿದೆ, ನೀವು ED ಯನ್ನು ತೋರಿಸಿ ನಮ್ಮನ್ನು ಬೆದರಿಸುವುದಾದರೆ ನಾವು ಬೆದರುವ ಸಂಘಟನೆ ಕ್ಯಾಂಪಸ್ ಫ್ರಂಟ್ ಅಲ್ಲ ಎಂದು ಹೇಳಿದರು.
ಜಿಲ್ಲಾಧ್ಯಕ್ಷರಾದ ರಿಯಾಝ್ ಅಂಕತ್ತಡ್ಕ ಮಾತನಾಡಿ ED ಯ ಮೂಲಕ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ನಮ್ಮ ಕಟ್ಟಕಡೆಯ ಸದಸ್ಯನಿರುವವರೆಗೂ ಅನ್ಯಾಯದ ವಿರುದ್ಧ ಹೋರಾಡಲಿದ್ದೇವೆ. ಬಂಧಿಸಿದ ನಮ್ಮ ನಾಯಕನನ್ನು ಬಿಡುಗಡೆ ಮಾಡದಿದ್ದರೆ ಪುತ್ತೂರಿನಲ್ಲಿ ವಿದ್ಯಾರ್ಥಿ ಚರಿತ್ರೆಯನ್ನು ಸೃಷ್ಟಿಸಲಿದ್ದೇವೆ ಎಂದು ಎಚ್ಚರಿಸಿದರು.
ಕ್ಯಾಂಪಸ್ ಫ್ರಂಟ್ ಜಿಲ್ಲಾ ಸಮಿತಿ ಸದಸ್ಯರಾದ ಶಬೀರ್ ಕಲ್ಲರ್ಪೆ, ಇಮ್ರಾನ್, ಅರ್ಫಿದ್, ರಿಹಾಲ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಅನ್ಸಾರ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.