ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಭಾರತೀಯ ಜೈನ್ ಮಿಲನ್ ಜೋನ್ -8 , ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಜೈನಧರ್ಮ ಪೇಸ್ಬುಕ್ ಪುಟದ ಸಹಭಾಗಿತ್ವದೊಂದಿಗೆ ನಡೆಯುವ ಅಂತರಾಷ್ಟ್ರೀಯ ಮಟ್ಟದ ಜಿನ ಸಮ್ಮಿಲನ -2020 ಕಾರ್ಯಕ್ರಮ ನಡೆಯಲಿದೆ.
“ಜಗತ್ತಿನಲ್ಲಿ ಪ್ರಸ್ತುತ ಹಿಂಸೆ ತಾಂಡವವಾಡುತ್ತಿದೆ. ಇಂದಿನ ಹಿಂಸಾತ್ಮಕ ಜಗತ್ತಿಗೆ ಅಹಿಂಸೆಯ ಅಗತ್ಯವಿದೆ” . ಈ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಉದ್ದೇಶದಿಂದ. ಡಿಸೆಂಬರ್ 13 ಕ್ಕೆ ರಾತ್ರಿ 8.00 ರಿಂದ ಅನ್ ಲೈನ್ ಮೂಲಕ ಅಹಿಂಸಾ ಸಮ್ಮಿಲನ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿದೆ.
ಅತಿಶಯ ಶ್ರೀ ಕ್ಷೇತ್ರ ಎನ್. ಆರ್. ಪುರ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಪಾವನ ಸಾನಿಧ್ಯ ಮತ್ತು ಆಶೀರ್ವಚನ ನೀಡಲಿದ್ದಾರೆ.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ . ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ., ವಿಧಾನ ಪರಿಷತ್ತಿನ ಮಾಜಿ ಸದಸ್ಯರು, ಮಾಜಿ ಸೈನಿಕರು, ಖ್ಯಾತ ವಾಗ್ಮಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್., ಯುವ ಬ್ರಿಗೇಡ್ ನ ಸ್ಥಾಪಕರು , ಯುವಕರ ಕಣ್ಮಣಿ , ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ., ಹೈಕೋರ್ಟ್ ನ್ಯಾಯವಾದಿ, ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ನ ಅಧ್ಯಕ್ಷರು, ಖ್ಯಾತ ವಾಗ್ಮಿ ಪಿ. ಪಿ ಹೆಗ್ಡೆ ಭಾಗವಹಿಸಲಿದ್ದಾರೆ .
ಹಾಗೂ ಸಂಜೆ 7.00 ರಿಂದ ವಿಶೇಷ ಆಕರ್ಷಣೆ : ಸ್ಯಾಕ್ಸೋಫೋನ್ ನಲ್ಲಿ ಅರಳುವ ಪ್ರತಿಭೆಗಳು ಶ್ರೀಜಾ, ತುಳಸಿ, ಜ್ಯೋತಿ ಬೆಳ್ತಂಗಡಿ ಸಹೋದರಿಯರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ನಡೆಯಲಿದೆ.
✍️ಸುದೇಶ್ ಜೈನ್ ಮಕ್ಕಿಮನೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.