ಯಾ ದೇವಿ ಸರ್ವ ಭೂತೇಷು! ಮಾ ರೂಪೇಣ ಸಂಷಿತಾ! ನಮಸ್ತುಂ ನಮಸ್ತುಂ ನಮಸ್ತುಂ ನಮ:! ಎಂದು ಶಾರದೆಯಯನ್ನು ಮಂತ್ರ ಮೂಲಕದಲ್ಲಿ ಸ್ತುತಿಸಿ ಲೋಕಾರ್ಪಣೆ ಮಾಡಿದ ನೀಲಾವರ ದೇಗುಲದ ಅಧ್ಯಕ್ಷರು ಹಾಗು ವೇದಮೂರ್ತಿ ರಘುರಾಮ ಮಧ್ಯಸ್ಥರು, ಸಹಸ್ರಾರು ಶತಮಾನಗಳ ಹಿಂದಿನ ದೇವಾನು ದೇವತೆಗಳ, ಮಹಾಭಾರತ, ರಾಮಾಯಣ, ಭಾಗವತ ಪುರಾಣಗಳ, ಯಕ್ಷಗಾನ ಪ್ರಸಂಗದಲ್ಲಿ ಪಾತ್ರದ ಮೂಲಕ ತೋರಿಸುವ, ಆ ಪಾತ್ರಗಳನ್ನು ಮಾನವ ಜೀವನಕ್ಕೆ ಅಳವಳಿಸಿಕೊಂಡರೆ, ನಮ್ಮ ಜೀವನದ ಮೌಲ್ಯವನ್ನು ಹೆಚ್ಚಿಸಬಹುದು. ಅಂತಹ ಶ್ರೇಷ್ಟಕಲೆ ಯಕ್ಷಗಾನವಾಗಿದೆ. ಎಂದು ಶ್ರೀಯುತ ಹರೀಶ ಪೂಜಾರಿ ಆಸನಬೇರು ಕಥೆಯ ಹಂದರವನ್ನು ಕವಿಗಳು ಲೇಖಕರಾದ ಶ್ರೀ ಚಾರ ಪ್ರದೀಪ ಹೆಬ್ಬಾರ್ ರವರ ಕಾವ್ಯಪುಂಜದಲ್ಲಿ ಅರಳಿದ “ನಾಗಚಂದ್ರಿಕೆ” ಯಕ್ಷಗಾನ ಪ್ರಸಂಗವನ್ನು ದಿನಾಂಕ 09-01-2021ನೇ ಶನಿವಾರ ರಾತ್ರಿ ನೀಲಾವರ ಕ್ರಾಸ್ ಬಳಿ ನೀಲಾವರ ಮೇಳದ ರಂಗವೇದಿಕೆಯಲ್ಲಿ ಯಕ್ಷಗಾನ ಪ್ರಸಂಗವನ್ನು ಲೋಕಾರ್ಪಣೆ ಮಾಡಿದ ಶ್ರೀಯುತ ವೇದಮೂರ್ತಿ ರಘರಾಮ್ ಮಧ್ಯಸ್ಥರು ಶ್ರೀ ಕ್ಷೇತ್ರ ನೀಲಾವರ ಮಹಿಷಮರ್ದಿನೀ ದೇವಸ್ಥಾನ ಧರ್ಮದರ್ಶಿಗಳು ನುಡಿದರು.
ಶುದ್ಧ ಕನ್ನಡ ಮಾತಾಡುವ ಹಾಗು ಜನರಿಗೆ ಸರಳವಾಗಿ ಮನಮುಟ್ಟುವ ಕಲೆ ಯಕ್ಷಗಾನ ಹಾಗು ದೇಶದ ಸಂಸ್ಕೃತಿಯನ್ನು ಉಳಿಸುವ ಏಕೈಕ ಗಂಡು ಕಲೆ, ಹಾಗು ಇಂದು ವಿಶ್ವದಲ್ಲೇ ಮಾನ್ಯತೆ ಪಡೆದ ಕರಾವಳಿಯ ಈ ಯಕ್ಷಗಾನ ಗಂಡುಕಲೆ ಹಾಗು ಇಂದಿನ “ನಾಗಚಂದ್ರಿಕೆ” ಪ್ರಸಂಗದ ಕಥೆಯನ್ನು ಹೇಳಿದ ಲೇಖಕರು, ಹಾಗು ಕವಿಗಳಾದ, ಇಂದಿನ ಯಕ್ಷಗಾನ ಪ್ರಸಂಗದ ಪದ್ಯ ರಚಿಸಿದ ಶ್ರೀಯುತ ಚಾರ ಪ್ರದೀಪ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತಾಡಿದರು. ಸಭೆಯಲ್ಲಿ ಪ್ರಸಂಗಕರ್ತರಾದ ಹರೀಶ ಪೂಜಾರಿ ಆಸನಬೇರು, ಮೇಳದ ಸಂಚಾಲಕರಾದ ರಮೇಶ ಪೂಜಾರಿ, ರಘು ನಾಯ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಹಾಗು ನಾರಾಯಣ ನಾಯ್ಕರು ನಿರೂಪಿಸಿ ವಂದನಾರ್ಪಣೆಗೈದರು. ಈ “ನಾಗಚಂದ್ರಿಕೆ” ಯಕ್ಷಗಾನ ಪ್ರಸಂಗವು ಶ್ರೀ ಕ್ಷೇತ್ರ ನೀಲಾವರ ಮೇಳದ ಕಲಾವಿದರಿಂದ ಮೊದಲ ಪ್ರದರ್ಶನ ಜನಮನ ಸೂರೆಗೊಳ್ಳುವಂತೆ ನಡೆಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.