ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಸುಳ್ಯ ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶವಾದ ಸಂಪಾಜೆ ಗ್ರಾಮದ ಗೂನಡ್ಕ ಎಂಬಲ್ಲಿ ಹುಟ್ಟಿ ಬೇರೆ ಬೇರೆ ಊರಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಜನೆ ಗೈದು ಇವತ್ತು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ತನ್ನಲ್ಲಿರುವ ಅಪಾರವಾದ ಪ್ರತಿಭೆಯನ್ನು ಜಗತ್ತಿಗೆ ಪಸರಿಸಿದ್ದಾರೆ.
ವಿದ್ಯೆಗೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ಸಲ್ಲಿಸಿ ಎಲ್ಲರಿಂದಲೂ ಗೌರವಾದರಕ್ಕೆ ಪಾತ್ರರಾದ ನಮ್ಮ ಉಮ್ಮರ್ ಇಂದು ಈ ಗೂನಡ್ಕ ಎಂಬ ಈ ಪುಟ್ಟ ಪ್ರದೇಶದಲ್ಲಿ ಒಂದು ಸುಸಜ್ಜಿತವಾದ ಸಭಾ ಭವನ ತೆರೆಯುವುದರ ಮೂಲಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಅನನ್ಯವಾದ ಕೊಡುಗೆಯನ್ನು ನೀಡುವ ಸಂದರ್ಭದಲ್ಲಿ ಸಜ್ಜನ ಉತ್ಸವ ಎನ್ನುವಂತಹ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡು ತನಗೆ ಶಿಕ್ಷಣವನ್ನು ಧಾರೆಯೆರೆದ ಶಿಕ್ಷಕರು ಗಳನ್ನು ತನ್ನೆಲ್ಲ ಕಾರ್ಯಚಟುವಟಿಕೆಗಳಿಗೆ ಸಹಕಾರ ನೀಡಿದ ಎಲ್ಲರನ್ನೂ ಪ್ರೀತಿ ಆದರಗಳಿಂದ ಸ್ಮರಿಸಿಕೊಳ್ಳುವ ಮತ್ತು ಎಲ್ಲಾ ಧರ್ಮದ ಎಲ್ಲಾ ವರ್ಗದ ಜನರ ಒಂದು ಸಂಗಮವನ್ನು ಏರ್ಪಡಿಸುವುದರ ಮೂಲಕ ಇಡೀ ಸಮುದಾಯಕ್ಕೆ ಮತ್ತು ಸಮಾಜಕ್ಕೆ ಮಾದರಿಯಾಗಿದ್ದಾರೆ.
ತನ್ನ ನಿರಂತರವಾದ ಕಠಿಣ ಪರಿಶ್ರಮದ ಫಲವಾಗಿ ಇವತ್ತು ನಮ್ಮ ಉಮ್ಮರ್ ಇಷ್ಟೊಂದು ಉತ್ತುಂಗಕ್ಕೆ ಏರಿದ್ದಾರೆ ಎನ್ನುವುದು ಕುಟುಂಬದ ಸದಸ್ಯನಾಗಿ ನನಗೆ ಅತೀವ ಹೆಮ್ಮೆಯೆನಿಸುತ್ತದೆ ಈ ಒಂದು ಕಾರ್ಯಕ್ರಮದ ಆಮಂತ್ರಣವನ್ನು ಕುಟುಂಬದ ಎಲ್ಲಾ ಸದಸ್ಯರ ಮನೆಗಳಿಗೆ ತೆರಳಿ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡ ಪರಿ ಅದ್ಭುತ ಅತ್ಯಂತ ಕಿರಿಯ ವಯಸ್ಸಿನಲ್ಲೇ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡ ನಮ್ಮ ಉಮ್ಮರ್ ಇಂದು ನಮ್ಮ ಕುಟುಂಬಕ್ಕೆ ಆಸರೆಯಾಗಿದ್ದಾರೆ.
ಉಮರ್ ಅವರ ದೂರದೃಷ್ಟಿ ಮತ್ತು ಅವರ ದೃಷ್ಟಿಕೋನ ಎಲ್ಲವೂ ಅನನ್ಯವಾದದ್ದು ಮುಂದಕ್ಕೆ ಬಹಳಷ್ಟು ಯೋಚನೆಗಳು ಯೋಜನೆಗಳಾಗಿ ರೂಪುಗೊಳ್ಳಲಿ ಸಾಹಿತ್ಯಕ್ಷೇತ್ರಕ್ಕೆ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಕುಟುಂಬ ವರ್ಗದವರಿಗೆ ಮತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಇವರ ಸೇವೆಯು ಸದಾ ದೊರಕಲಿ ಅದಕ್ಕಾಗಿ ಅಲ್ಲಾಹು ಅವರಿಗೆ ಸರ್ವಶಕ್ತಿಯನ್ನು ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತಾ ತಮ್ಮ ಸಜ್ಜನ ಸಭಾ ವೇದಿಕೆಯಲ್ಲಿ ಮೊಟ್ಟ ಮೊದಲ ಕಾರ್ಯಕ್ರಮ ವಾಗಿ ನಮ್ಮ ಕುಟುಂಬ ಸಮ್ಮಿಲನ ಕಾರ್ಯಕ್ರಮ ಒಂದನ್ನು ಆಯೋಜಿಸಿ ನಮ್ಮ ಕುಟುಂಬದ ಸದಸ್ಯರ ಸಂಬಂಧವನ್ನು ಬೆಸೆಯಲು ಅದು ಪ್ರೇರಣೆಯಾಗಲಿ ಎಂದು ಆಶಿಸುತ್ತಾ…
ನಿಮ್ಮ ಹಿತೈಷಿ ಅಭಿಮಾನಿ ಸಹೋದರ
✍️ಮಜೀದ್ ಕೆ. ಬಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.