ಬೆಂಗಳೂರು (www.vknews.com) : ಕೊವೀಡ್ ನಿರ್ವಹಣೆಯಲ್ಲಿ ರಾಜ್ಯ ಸರಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಸಂಸದ ತೇಜಸ್ವಿ ಸೂರ್ಯ ಕೋಮು ದ್ವೇಷ ರಾಜಕೀಯ ಮಾಡುತ್ತಿದ್ದಾರೆ.
ಕೇಂದ್ರ ,ರಾಜ್ಯ, ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ಕೋವಿಡ್ ವಾರ್ ರೂಮಿನ ನೇತೃತ್ವ ವಹಿಸಿದ್ದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ, ಆರೋಗ್ಯ ಸಚಿವ ಡಾ| ಸುಧಾಕರ್, ಕಂದಾಯ ಸಚಿವ ಆರ್. ಅಶೋಕ್ ಬೆಡ್ ದಂಧೆಗೆ ನೇರ ಹೊಣೆ, ಈ ಎಲ್ಲ ಸಚಿವರು ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕೆಂದು ವೆಲ್ಫೇರ್ ಪಕ್ಷವು ಒತ್ತಾಯಿಸುತ್ತದೆ. ಬಿಜೆಪಿಯ ಕೋಮು ವೈರಸ್ ಕೊರೋನ ವೈರಸ್ ಕ್ಕಿಂತ ಮಾರಕವಾಗಿದೆ. ಕೋಮು ದ್ರುವಿಕರಣ ನಡೆಸಿ ಸಾವಿನ ಮನೆಯಲ್ಲಿ ಸಂಸದರು ರಾಜಕೀಯ ಮಾಡುತ್ತಿದ್ದಾರೆ.
ಸರಕಾರ ಈ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಧ್ಯಕ್ಷರು ತಾಹೀರ್ ಹುಸೇನ್ ಆಗ್ರಹಿಸುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.