ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪಟ್ಟಣ್ಣದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಮಾಲೂರು ಯೋಜನಾ ಪ್ರಾಧಿಕಾರದ ಕಚೇರಿ ಕಟ್ಟಡದ ಉದ್ಘಾಟನೆಯನ್ನು ಮಾಡಲಾಯಿತು.
ಮಾಲೂರು ಯೋಜನಾ ಪ್ರಾಧಿಕಾರದ ನೂತನ ಕಟ್ಟಡ ಉದ್ಘಾಟನೆಯನ್ನು ಮಾಡಿದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತೋಟಗಾರಿಕೆ ಸಚಿವರಾದ ಮುನಿರತ್ನಂ ರವರು ಮಾತನಾಡಿ “ಯೋಜನಾ ಪ್ರಾಧಿಕಾರಕ್ಕೆ ಒಂದು ಸ್ವಂತ ಕಟ್ಟಡ ಒದಗಿಸಿ ಉದ್ಘಾಟಿಸಿರುವುದು ಬಹಳ ಸಂತೋಷ. ಮಾಲೂರು ಪಟ್ಟಣ್ಣದ ಸಾರ್ವಜನಿಕ ಆಸ್ಪತ್ರೆಯನ್ನು ಮೆಲ್ದರ್ಜೆಗೆ ಏರಿಸುವ, ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಿಸುವ ಕಾರ್ಯದ ಜೊತೆಗೆ ಮಾಲೂರು ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆ ಮಾಡುವುದಾಗಿ ಹೇಳಿದರು, ಕರೋನಾ ಸಮಯದಲ್ಲಿ ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸುವ ಕಡೆ ಹೆಚ್ಚು ಗಮನ ನೀಡಿ, ಚಿನ್ನದ ಜಿಲ್ಲೆಯ ಕಡೆ ವಿಶೇಷ ಗಮನಹರಿಸುವ ಮೂಲಕ ಅಭಿವೃದ್ದಿ ಮಾಡುವುದಾಗಿ” ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ರವರು ಮಾತನಾಡಿ “ನಾವೆಲ್ಲರೂ ಪಕ್ಷಭೇದ ಬಿಟ್ಟು ಜೊತೆಗೂಡಿ ಅಭಿವೃದ್ದಿ ಪಥದ ಕಡೆ ನಮ್ಮ ನಡೆ ಸಾಗಬೇಕು, ಕೊರೋನಾ ಮೂರನೇ ಅಲೆಗೆ ಸಂಬಂಧಿಸಿದಂತೆ ನಾವು ಜಾಗೃತಿ ವಹಿಸಬೇಕಾಗಿದೆ.ಯೋಜನಾ ಪ್ರಾಧಿಕಾರದ ನೂತನ ಕಟ್ಟಡದ ಉದ್ಘಾಟನೆ ಆಗಿರುವುದು ಸಂತಸದ ವಿಚಾರ. 8 ಕೋಟಿ ವೆಚ್ಚದಲ್ಲಿ ಮಾಲೂರು ಕೆರೆಯ ಅಭಿವೃದ್ದಿ ಬಗ್ಗೆ ನಾನೂ ಕೇವಲ ಅರ್ಧ ಗಂಟೆಯಲ್ಲಿ ಸ್ಪಂದಿಸುದಾಗಿ” ಹೇಳಿದರು.
ಕೋಲಾರದ ಸಂಸದರಾದ ಮುನಿಶಾಮಿ ರವರು ಮಾತನಾಡಿ “ನಮ್ಮ ಜಿಲ್ಲೆಯ ಸಂಪೂರ್ಣ ಅಭಿವೃದ್ದಿಗೆ ಎಲ್ಲಾ ರೀತಿಯಲ್ಲೂ ಸದಾ ಕಾಲ ನಾನು ಹಾಗೂ ನಮ್ಮ ಎಲ್ಲಾ ಸಚಿವರು ಸ್ಪಂದಿಸುವರು, ಮಾಲೂರು ಕೆರೆ ಅಭಿವೃದ್ದಿ ಬಗ್ಗೆ ಈಗಾಗಲೇ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ರವರು ನಮಗೆ ಸೂಕ್ತ ಸ್ಪಂದನೆ ನೀಡಿದ್ದಾರೆ, ಅಭಿವೃದ್ದಿ ವಿಚಾರದಲ್ಲಿ ನಾವು ಸದಾ ಮುಂದು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಲೂರು ಕ್ಷೇತ್ರದ ಶಾಸಕರಾದ ಕೆ.ವೈ.ನಂಜೇಗೌಡ ರವರು ಮಾತನಾಡಿ “ಇಂದಿನ ಸಚಿವರಾದ ಬೈರತಿ ಬಸವರಾಜ್, ಮುನಿರತ್ನಂ, ಸೋಮಶೇಖರ್ ರವರ ನಡುವಿನ ಸ್ನೇಹ ಸಂಬಂಧ ಮರೆಯಲಾರದ್ದು, ಯೋಜನಾ ಪ್ರಾಧಿಕಾರದ ನೂತನ ಕಟ್ಟಡದ ಉದ್ಘಾಟನೆ ಮಾಡಿರುವುದು ಸಂತಸ ತಂದಿದೆ. ಮಾಲೂರು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಅಭಿವೃದ್ದಿಗೆ ಆದ್ಯತೆ ನೀಡಿರುವುದು ನಿಜಕ್ಕೂ ನಾವು ಧನ್ಯ, ಹೊರ ರಾಜ್ಯ ತಮಿಳುನಾಡು ಮಾರ್ಗವಾಗಿ ನೂತನ ರಿಂಗ್ ರೋಡ್ ಮಾಡಲು ತಾವು ಶೀಘ್ರವಾಗಿ ಸ್ಪಂದಿಸಿ, ಅಭಿವೃದ್ದಿಯ ಹಾದಿಗೆ ಕೈ ಜೋಡಿಸಿ” ಎಂದರು.
ಹೀಗೆ ಮಾಲೂರು ಶಾಸಕರಾದ ಕೆ.ವೈ.ನಂಜೇಗೌಡ ರವರು ತಾಲ್ಲೂಕಿನ ಅಭಿವೃದ್ದಿ, ಕಾಂಗ್ರೆಸ್ ಸರ್ಕಾರದಲ್ಲಿದ್ದ ಮುನಿರತ್ನಂ, ಬೈರತಿ ಬಸವರಾಜ್, ಸೋಮಶೇಖರ್ ರವರ ಸ್ನೇಹದ ಬಗ್ಗೆ ಮಾತನಾಡುತ್ತಿರುವಾಗ ವೇದಿಕೆಯ ಮೇಲೆ ಆಸೀನರಾಗಿದ್ದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತೋಟಗಾರಿಕಾ ಸಚಿವರು ಕೆ.ವೈ.ನಂಜೇಗೌಡ ರವರಿಗೆ ನೇರ ಬಿ.ಜೆ.ಪಿ ಗೆ ಆಹ್ವಾನ ನೀಡಿ ಕಿರುನಗೆ ಬೀರಿದ್ದು ಕಾರ್ಯಕ್ರಮದಲ್ಲಿದ್ದ ಎಲ್ಲಾರ ಗಮನ ಸೆಳೆದಿದ್ದು ವಿಶೇಷ ಅನ್ನಿಸಿತು.
ಕಾರ್ಯಕ್ರಮದಲ್ಲಿ ಕೋಲಾರದ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಮಾಲೂರು ಪುರಸಭಾ ಅಧ್ಯಕ್ಷ ಮುರಳೀಧರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಸತೀಶ್ ಆರಾಧ್ಯ, ಎಟ್ಟಕೋಡಿ ಕೃಷ್ಣರೆಡ್ಡಿ, ಸಮಾಜ ಸೇವಕ ಹೂಡಿ ವಿಜಯ್ ಕುಮಾರ್, ಆರ್.ಪ್ರಭಾಕರ್, ಅಂಜನಿ ಸೋಮಣ್ಣ, ಎಸ್.ಪಿ.ಕಿಶೋರ್ ಬಾಬು, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅಮರವಾತಿ, ಹಾಗೂ ಬಿಜೆಪಿ ಮುಖಂಡರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.