(www.vknews.in) : ಅಖಿಲ ಭಾರತೀಯ ಪಂಚಾಯತ್ ಪರಿಷತ್ (AIPP ) ಪಂಚಾಯತ್ ರಾಜ್ ಇಲಾಖೆಗಳ ಮಾನ್ಯತೆ ಪಡೆದ ಸ್ವಾಯತ್ತ ಅಫೆಕ್ಷ್ ಫೆಡರೇಷನ್. ಗ್ರಾಮೀಣ ಭಾರತದ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನೊಂದಿ, ಪಂಚಾಯತ್ ರಾಜ್ ಇಲಾಖೆಯ ಅಧೀನ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಲವಂತ್ ರಾಯಿ ಮೆಹ್ತಾ, ಭಾರತ ರತ್ನ ಲೋಕ ನಾಯಕ್ ಜಯಪ್ರಕಾಶ್ ನಾರಾಯಣ್ ಸ್ಥಾಪಕಾಧ್ಯಕ್ಷರಾಗಿ ೧೯೫೮ ರಲ್ಲಿ ಸ್ಥಾಪನೆಗೊಂಡ ಆಲ್ ಇಂಡಿಯಾ ಪಂಚಾಯತ್ ಪರಿಷತ್ (AIPP) ಇದರ ಕರ್ನಾಟಕ ರಾಜ್ಯ ಪಂಚಾಯತ್ ಪರಿಷತ್ ನ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬರಹಗಾರರೂ, ಚಿಂತಕರೂ, ಗಡಿನಾಡಿನ ಅಭೀವೃಧ್ಧಿಯ ಹರಿಕಾರರೂ ಆಗಿರುವ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು ಇವರನ್ನು ನವ ದೆಹಲಿ ಯಲ್ಲಿ ಕೇಂದ್ರ ಕಛೇರಿಯನ್ನೊಂದಿರುವ ಆಲ್ ಇಂಡಿಯಾ ಪಂಚಾಯತ್ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ರುದ್ರಾ ಭಾನು ಇವರು ನಾಮ ನಿರ್ದೇಶಿತ ಗೊಳಿಸಿ ಆದೇಶಿಸಿರುತ್ತಾರೆ. ಪ್ರಸಕ್ತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪರಿಷತ್ನ ಕಾರ್ಯ ವೈಖರಿಯ ಬಗ್ಗೆ ತಿಳಿಯಪಡಿಸಿ ಬಲಪಡಿಸುವ ಮಹತ್ತರ ಜವಾಬ್ದಾರಿಯನ್ನೂ ನೀಡಿರುತ್ತಾರೆ.
ಡಾ.ಹಾಜಿ.ಯಸ್ ಅಬೂಬಕ್ಕರ್ ಆರ್ಲಪದವು ಇವರು ಭಾರತೀಯ ಪತ್ರಕಾರ್ ಕಲ್ಯಾಣ ಮಂಚ್ ಇದರ ಕರ್ನಾಟಕ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿಯಾಗಿಯೂ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾಧ್ಯಕ್ಷರಾಗಿ , ದಕ್ಷಿಣ ಕನ್ನಡ ಜಿಲ್ಲಾ ಸಿಎಸ್ಸಿ ವಿಎಲ್ಇ ಸೊಸೈಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಕರ್ನಾಟಕ ಮುಸ್ಲಿಂ ಜಮಾತ್ ತಾಲೂಕು ಸಮಿತಿ ಕಾರ್ಯದರ್ಶಿಯಾಗಿಯೂ ತಾಲೂಕು ಕಾನೂನು ಪ್ರಾಧಿಕಾರದ ಪ್ಯಾರಾ ಲೀಗಲ್ ವ್ಯಾಲೆಂಟರಿಯಾಗಿಯೂ, ವಿದ್ಯಾಸಂಸ್ಥೆಗಳ ಅಧ್ಯಕ್ಷರು ಗಳಾಗಿಯೂ, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾಗಿಯೂ ಗಡಿನಾಡ ಧ್ವನಿ ಪತ್ರಿಕೆ ಸಂಪಾದಕರಾಗಿಯೂ,ಅಲ್ಲದೆ ಹಲವಾರು ಸಂಘ-ಸಂಸ್ಥೆಗಳ ಪ್ರಮುಖ ಪದಾಧಿಕಾರಿಗಳಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ .
ಇವರು ಗೌರವ ಡಾಕ್ಟರೇಟ್ , ಭಾರತ ವಿಕಾಸ ರತ್ನ , ಕರ್ನಾಟಕ ಜ್ಞಾನ ಚಕ್ರವರ್ತಿ ರಾಷ್ಟ್ರೀಯ ಪ್ರಶಸ್ತಿ , ಕನ್ನಡ ಶ್ರೀ ರಾಷ್ಟ್ರಪ್ರಶಸ್ತಿ, ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನುಗ್ರಹ ಪ್ರಶಸ್ತಿ , ಡಾ ಬಿ ಆರ್ ಅಂಬೇಡ್ಕರ್ ರಾಜ್ಯಪ್ರಶಸ್ತಿ, ಡಾ ಶಿವರಾಮ ಕಾರಂತ ರಾಷ್ಟ್ರಪ್ರಶಸ್ತಿ , ಆರ್ಯಭಟ್ಟ ರಾಷ್ಟ್ರಪ್ರಶಸ್ತಿ , ಕರ್ನಾಟಕ ಜ್ಯೋತಿ ರಾಜ್ಯಪ್ರಶಸ್ತಿ , ಸೇರಿದಂತೆ ಸುಮಾರು 160 ಕ್ಕಿಂತ ಮಿಕ್ಕಿದ ಪ್ರಶಸ್ತಿಗಳನ್ನು ಪಡೆದುಕೊಂಡಿರುವರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.