ಚಿಕ್ಕಬಳ್ಳಾಪುರ (www.vknews.com) : ಕೊರೋನಾ ದಿಂದಾಗಿ ದೇಶವೇ ಲಾಕ್ ಡೌನ್ ಆಗಿದ್ದು, ಇದರಿಂದ ಯಾವುದೇ ಕಾರಣಕ್ಕೂ ಜನರು ಮನೆಯಿಂದ ಹೊರಗಡೆ ಬರಬಾರದೆಂದು, ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದೆಂದು ಆದೇಶ ಹೊರಡಿಸಲಾಗಿತ್ತು.
ಆದರೆ ಲಾಕ್ ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ, ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳನ್ನು ಇಂದಿನಿಂದ ಬೆಳಿಗ್ಗೆ 7:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ತೆರೆಯಲು ಅನುಮತಿ ನೀಡಿದ್ದರಿಂದ ಇಂದು ಚಿಕ್ಕಬಳ್ಳಾಪುರ ನಗರದಲ್ಲಿ ಅಂಗಡಿಗಳನ್ನು ತೆರೆದು ಗಿರಾಕಿಗಳಿಗಾಗಿ ಕಾಯುತ್ತಿದ್ದ ದೃಶ್ಯ ಕಂಡು ಬಂದಿತು.
ನಗರದ ಗಂಗಮ್ಮ ಗುಡಿ ರಸ್ತೆಯಲ್ಲಿ ಬಂಗಾರದ ಅಂಗಡಿಗಳೇ ಹೆಚ್ಚಾಗಿದ್ದು, ಸುಮಾರು ಒಂದು ತಿಂಗಳ ಕಾಲ ಬಂಗಾರದ ಅಂಗಡಿಗಳನ್ನು ತೆರೆಯದೇ, ಗಂಗಮ್ಮ ಗುಡಿ ರಸ್ತೆಯಲ್ಲಿ, ಬಜಾರ್ ರಸ್ತೆಯಲ್ಲಿ, ಬಿ.ಬಿ. ರಸ್ತೆ, ಹಾಗೂ ಹೆಚ್ಚಾಗಿ ಜನಗಳು ಸೇರುತ್ತಿದ್ದ ಜಾಗವೆಲ್ಲಾ ಓಡಾಡಲು ಜನರಿಲ್ಲದೇ ರಸ್ತೆಗಳೆಲ್ಲ ಬಿಕೋ ಎನ್ನುತ್ತಾ ಸೂತಕದ ವಾತಾವರಣ ಆವರಿಸಿದಂತಿತ್ತು.
ಆದರೆ ನೆನ್ನೆ ಯಿಂದ ಲಾಕ್ ಡೌನ್ ಸಡಿಲಕೆಯಿದ್ದರೂ, ಇಂದಿನಿಂದ ಅಂಗಡಿಗಳನ್ನು ತೆರೆದಿದ್ದು, ಹಾಗೂ ಜನರ ಓಡಾಟವೂ ಎಂದಿನಂತಿತ್ತು.
ಕೊರೋನಾ ಲಾಕ್ ಡೌನ್ ನಿಂದಾಗಿ ಬಾಗಿಲು ಮುಚ್ಚಿದ ವಿರಾಟ್ ಜ್ಯೂಯಲರ್ಸ್ ಅಂಗಡಿಯವರು ಇಂದು ಬಾಗಿಲನ್ನು ತೆರೆದು, ಕೋರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಂಗಡಿಗೆ ಬರುವವರಿಗೆ ಮಾಸ್ಕ್ ಅನ್ನು ವಿತರಿಸಿದರು ಹಾಗೂ ಅವರ ಮೊಬೈಲ್ ಫೋನ್ ಗೆ ಆರೋಗ್ಯ ಸೇತು ಆಪ್ ಅನ್ನು Install ಮಾಡಿಕೊಡುತ್ತಿದ್ದರು.
ಕೆಲವರು ಅಂಗಡಿಗಳನ್ನು ತೆರೆದು ಸುಮ್ಮನೆ ಕುಳಿತು ಕೊಂಡಿದ್ದರೆ, ಇನ್ನು ಕೆಲವು ಅಂಗಡಿಯವರು ಕೊರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದರು.
– ವಿ. ಅರ್ಪಿತ್ ಕುಮಾರ್, ವರದಿಗಾರರು, ಚಿಕ್ಕಬಳ್ಳಾಪುರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.