ಚಿಕ್ಕಬಳ್ಳಾಪುರ (www.vknews.com) : ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಹಾಗೂ ನಿಯಂತ್ರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ರಾಜ್ಯ ಸರ್ಕಾರದ ಆದೇಶದಂತೆ ಲಾಕ್ಡೌನ್ ಅವಧಿಯನ್ನು ಮೇ 04 ರಿಂದ ಮೇ 17ರ ವರೆಗೆ ವಿಸ್ತರಿಸಿ ಲಾಕ್ಡೌನ್ ಕ್ರಮಗಳ ಕುರಿತು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮೇ 04 ರಿಂದ ಎರಡು ವಾರಗಳ ಅವಧಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸೂಚಿಸಿರುವ ಮೇರೆಗೆ ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಜಿಲ್ಲೆಯಲ್ಲಿ ಮೇ 04 ರಿಂದ ಮೇ 17 ರವರೆಗೆ ಸಂಜೆ 7:00 ಗಂಟೆಯಿಂದ ಬೆಳಿಗ್ಗೆ 7:00 ಗಂಟೆಯ ನಡುವಿನ ರಾತ್ರಿಯ ಅವಧಿಯನ್ನು ಕರ್ಫ್ಯೂ (ನಿಷೇಧಾಜ್ಞೆ) ಎಂದು ಘೋಷಿಸಿದ್ದು, ಈ ಸಂದರ್ಭದಲ್ಲಿ ಈ ಹಿಂದೆ ಅಗತ್ಯ ಚಟುವಟಿಕೆಗಳಿಗೆ ನೀಡಿದ ಪಾಸ್ಗಳು ಮಾತ್ರ ಮಾನ್ಯತೆ ಹೊಂದಿರುತ್ತವೆ ಎಂದು ಮಾನ್ಯ ಜಿಲ್ಲಾಧಿಕಾರಿಗಳಾದ ಆರ್.ಲತಾ ರವರು ಆದೇಶವನ್ನು ಹೊರಡಿಸಿದ್ದಾರೆ.
ಆದರೆ ಈ ಆದೇಶವನ್ನು ಲೆಕ್ಕಿಸದೆ ಸುಖಾಸುಮ್ಮನೆ ನೆಪವೊಡ್ಡಿ ಓಡಾಡುವವರನ್ನು ನಗರಸಭೆ ಕಮೀಷನರ್ ಡಿ. ಲೋಹಿತ್ ರವರು ಮಾಸ್ಕ್ ಹಾಗೂ ಇಬ್ಬರು, ಮೂವರು ದ್ವಿಚಕ್ರ ವಾಹನದಲ್ಲಿ ಓಡಾಡುವವರನ್ನು ತಡೆದು ದಂಡ ವಸೂಲಿ ಮಾಡುತ್ತಿದ್ದರು, ಹಾಗೂ ಸಂಜೆ 7.00 ಗಂಟೆಯಿಂದ ಪಾಸ್ ಹೊಂದಿರುವವರನ್ನು ಹೊರತು ಪಡಿಸಿ, ಬೇರೆ ಯಾರೂ ಓಡಾಡದಂತೆ ಎಚ್ಚರಿಸಿದರು, ಇದೇ ರೀತಿ ಮಾಡಿದರೆ ದಂಡ ವಸೂಲಾತಿ ಜೊತೆಗೆ ಗಾಡಿಗಳನ್ನು ಸೀಜ್ ಮಾಡಲಾಗುವುದು ಎಂದು ತಿಳಿಸಿದರು.
– ವಿ. ಅರ್ಪಿತ್ ಕುಮಾರ್, ಚಿಕ್ಕಬಳ್ಳಾಪುರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.