ಬೆಂಗಳೂರು (www.vknews.com) : ಯಡಿಯೂರಪ್ಪ ನವರು ತಮ್ಮ ವಿಶೇಷ ಪ್ಯಾಕೇಜ್ ನಲ್ಲಿ ಈ ರಾಜ್ಯದ ಗ್ರಾಮಿಣ ಭಾಗ ಸೇರಿದಂತೆ ಎಲ್ಲಾ ವಲಯದ ದಿನಗೂಲಿ ಮಾಡುವ ಜನರನ್ನು, ಕೃಷಿ ಕೂಲಿಕಾರರು, ಗ್ಯಾರೆಜ್, ಪಂಕ್ಚರ್ ಶಾಪ್, ಡಬ್ಬಾ ಅಂಗಡಿ ಸೇರಿ ಇತರ ಸಣ್ಣ ಪುಟ್ಟ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಅಸಂಖ್ಯಾತ ಜನ ಸಮುದಾಯವನ್ನು ಕಡೆಗಣಿಸಿದ್ದಾರೆ. ಹಾಗೂ ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ತೆರಳಲು ರಾಜ್ಯದಲ್ಲಿ ನಿಗದಿಯಾಗಿದ್ದ ವಿಶೇಷ ರೈಲುಗಳನ್ನು ರದ್ದು ಮಾಡಿದ್ದಾರೆ. ತಾರತಮ್ಯ ಮೆರೆದು ಬಿಲ್ಡರ್ಸ್ ಗಳಿಗೆ ಮಣೆ ಹಾಕಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ಆರೋಪಿಸಿದರು.
ಈ ಪ್ಯಾಕೇಜ್ ನಲ್ಲಿ ಪೂರ್ಣ ಪ್ರಮಾಣದಲ್ಲಿ ಜನ ಹಿತ ಕಾಪಾಡುವಂತ ವಿಶೇಷತೆ ಏನು ಇಲ್ಲ. ಕೆಲವರ ಹಿತಾಸಕ್ತಿಯನ್ನು ಮಾತ್ರ, ಅದು ಅಲ್ಪಪ್ರಮಾಣದಲ್ಲಿ ಕಾಪಾಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ತನ್ನ ಮೂಲಭೂತ ವಾದ ಜವಾಬ್ದಾರಿ ಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದೆ. ಈ ಸಂಕಷ್ಟದ ಸಮಯದಲ್ಲಿ ಎಲ್ಲರನ್ನೂ ದೃಷ್ಟಿಕೋನದಲ್ಲಿ ಇಟ್ಟುಕೊಳ್ಳಬೇಕಿತ್ತು. ಆದರೆ, ಆ ಕೆಲಸ ಇಲ್ಲಿ ಆಗದಿರುವುದು ದುರಂತ ವೆಂದು ಹಬೀಬುಲ್ಲಾ ಖಾನ್ ವಿಷಾದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.