ಚಿಕ್ಕಬಳ್ಳಾಪುರ (www.vknews.com) : ಕೊರೋನಾ ಲಾಕ್ ಡೌನ್ ನಿಂದಾಗಿ ಎಲ್ಲಾ ಸಭೆ, ಸಮಾರಂಭಗಳು, ಹಾಗೂ ಜಯಂತಿಯ ಆಚರಣೆಗಳು ಮಾಡಲಾಗುವಂತಿಲ್ಲ. ಆದರೆ ಚಿಕ್ಕಬಳ್ಳಾಪುರದ ಆರ್ಯ ವೈಶ್ಯ ಮಂಡಳಿ(ರಿ) ಅವರ ಸಹಭಾಗಿತ್ವದ ವಾಸವಿ ಯುವಜನ ಸಂಘದ ವತಿಯಿಂದ ವಾಸವಿ ಜಯಂತಿ ಪ್ರಯುಕ್ತ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರಾದ ಡಿ.ಎಸ್.ನಂಜುಂಡರಾಮಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಕೋತಿ ಮತ್ತು ನಾಯಿಗಳಿಗೆ ನಂದಿ ಬೆಟ್ಟದಲ್ಲಿ ಬಾಳೆಹಣ್ಣು, ಸೌತೆಕಾಯಿ, ಬಿಸ್ಕೆಟ್, ದ್ರಾಕ್ಷಿ, ಹಾಕಲಾಯಿತು.
ಈ ಸಂದರ್ಭದಲ್ಲಿ ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಬಿ.ವಿ. ಗಣೇಶ್, ಉಪಾಧ್ಯಕ್ಷರಾದ ಸ್ವರೂಪ ರಾಜ್, ಕಾರ್ಯದರ್ಶಿ ಐ.ಇ .ಶ್ರೀಕಾಂತ್, ವಿ.ಕೆ.ಅರ್ಜುನ್, ರಾಜೀವ್, ಅಂಕಿತ್, ರವಿ, ಡಿ.ಎಸ್. ವೆಂಕಟೇಶ್ ಬಾಬು ಇನ್ನಿತರರು ಹಾಜರಿದ್ದರು.
– ವಿ. ಅರ್ಪಿತ್ ಕುಮಾರ್, ವರದಿಗಾರರು, ಚಿಕ್ಕಬಳ್ಳಾಪುರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.