ವಿಶಾಖಪಟ್ಟಣ(ವಿಶ್ವಕನ್ನಡಿಗ ನ್ಯೂಸ್): ಆಂಧ್ರಪ್ರದೇಶದ ಕರಾವಳಿ ಪ್ರದೇಶವಾದ ವಿಶಾಖಪಟ್ಟಣದ ಎಲ್ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ನಿನ್ನೆ ಮುಂಜಾನೆ ವಿಷಾನಿಲ ಸೋರಿಕೆಯಾಗಿ ನಡೆಯ ಬಾರದ ಮಹಾ ದುರಂತವೊಂದಕ್ಕೆ ನಿನ್ನೆಯ ದಿನ ಸಾಕ್ಷಿಯಾಯಿತು.
ಈ ದುರಂತವು ಮಧ್ಯಪ್ರದೇಶದ ಭೂಪಾಲ್ನ ಕಾರ್ಖಾನೆಯಲ್ಲಿ 1984 ರ ಡಿಸೆಂಬರ್ 2 ರ ಮಧ್ಯರಾತ್ರಿ ಜನತೆ ನಿದ್ದೆಗೆ ಶರಣಾಗಿದ್ದ ವೇಳೆ ಸೋರಿಕೆಗೊಂಡ ವಿಷಾನಿಲ ದುರಂತವನ್ನು ನೆನೆಪಿಸಿದೆ. ಅಂದು ನಡೆದ ವಿಷಾನಿಲ ದುರಂತದಿಂದ15 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಆರು ಲಕ್ಷಕ್ಕೂ ಅಧಿಕ ಜನರು ಅದರ ದುಷ್ಪರಿಣಾಮಕ್ಕೆ ಒಳಗಾಗಿದ್ದರು ಭೋಪಾಲ್ ದುರಂತವು 20 ನೇ ಶತಮಾನದಲ್ಲಿ ಜಗತ್ತಿನಲ್ಲಿ ನಡೆದಿರುವ ಭೀಕರ ಕೈಗಾರಿಕಾ ದುರಂತಗಳಲ್ಲಿ ಒಂದಾಗಿತ್ತು.
ನಿನ್ನೆ ವಿಶಾಖಪಟ್ಟದ ಕಾರ್ಖಾನೆಯೊಂದರಿಂದ ಗಾಳಿಯಲ್ಲಿ ವಿಷಾನಿಲ ಸುತ್ತಮುತ್ತಲ ಪ್ರದೇಶಗಳಿಗೆ ಹರಡುತ್ತಿದ್ದಂತೆ ಬೆಳಗ್ಗೆ ವಾಯುವಿಹಾರ ಮತ್ತು ಇತರೆ ಕಾರ್ಯಗಳಿಗೆ ಮನೆಯಿಂದ ಹೊರ ಬಂದವರು ವಿಷಾನಿಲವನ್ನು ಉಸಿರಾಡಿ ಕೂಡಲೇ ಅಸ್ವಸ್ಥರಾಗಿದ್ದಾರೆ. ಈ ದುರ್ಘಟನೆಯಲ್ಲಿ ಈ ವರೆಗೆ ಸಾವನ್ನಪ್ಪಿದವರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ,ನೂರಾರು ಜನರು ಕಣ್ಣು ಉರಿ,ಉಸಿರಾಟದ ತೊಂದರೆಯಿಂದ ನಿಂತಲ್ಲಿಯೇ ಕುಸಿದು ಬೀಳುತ್ತಿರುವುದನ್ನು ನೋಡುವಾಗ ಮನುಷ್ಯರು ಮಾತ್ರವಲ್ಲದೆ ಮೂಖ ಪ್ರಾಣಿಗಳು ಕೂಡ ಆಂತರಿಕ ರಕ್ತಸ್ರಾವದಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಈ ದುರಂತವು ಅತ್ಯಂತ ದುಃಖಕರವಾಗಿದೆ. ಪವಿತ್ರ ರಮಳಾನ್ ಆಚರಣೆಯಲ್ಲಿರುವ ಸರ್ವ ಭಾರತೀಯ ಮುಸ್ಲಿಮರು ವಿಷಾನಿಲ ದುರಂತದಿಂದ ಅಸ್ವಸ್ಥರಾದವರು ಶೀಘ್ರದಲ್ಲಿ ಗುಣಮುಖರಾಗಲು ವಿಶೇಷ ಪ್ರಾರ್ಥನೆ ಮಾಡಬೇಕಾಗಿ ಈ ಮೂಲಕ ಮನವಿ ಮಾಡುತ್ತಿದ್ದೇನೆ. ಮೃತರ ಕುಟುಂಬಕ್ಕೆ ಸಹನೆಯನ್ನು ಹಾಗೂ ಅಸ್ವಸ್ಥರಾದವರಿಗೆ ಅತೀ ಶೀಘ್ರದಲ್ಲಿ ಸದೃಡಮಾನಸಿಕ ಆರೋಗ್ಯವನ್ನು ಅಲ್ಲಾಹನು ದಯಪಾಲಿಸಲಿ…(ಅಮೀನ್)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.