ಮಂಗಳೂರು(ವಿಶ್ವಕನ್ನಡುಗ ನ್ಯೂಸ್): ದೇಶವನ್ನೇ ಲಾಕ್ಡೌನ್ ನಲ್ಲಿರಿಸಿ ಕೋರೋನದ ವಿರುದ್ಧ ಹೋರಾಟ ನಡೆಸಬೇಕಾದ ಕೇಂದ್ರ ಸರ್ಕಾರವು ಇಂದು ಈ ಲಾಕ್ಡೌನ್ ನ ಲಾಭ ಪಡೆಯುತ್ತಿರುವುದು ಕಂಡುಬರುತ್ತಿದೆ.
NRC,CAA,NPR ವಿರುದ್ಧ ಧ್ವನಿಯೆತ್ತಿದ ದೆಹಲಿಯ ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿ ಹೋರಾಟಗಾರರನ್ನು ಕರಾಳ ಕಾನೂನುಗಳನ್ನು ಹಾಕಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಬಂಧಿಸುತ್ತಿರುವುದು ಖಂಡನೀಯವಾಗಿದೆ. ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ನೆಪದಲ್ಲಿ 27 ವರ್ಷದ ಗರ್ಭಿಣಿಯಾದ ಸಫೂರ ಝರ್ಗಾರ್ ಎಂಬ ಹೋರಾಟಗಾರ್ತಿಯನ್ನು ಬಂಧಿಸಿ ಜೈಲಿನಲ್ಲಿಟ್ಟು ಹಿಂಸೆ ನೀಡುತ್ತಿದ್ದಾರೆ, ಲಾಕ್ಡೌನ್ ಕಾರಣದಿಂದ ಇದರ ವಿರುದ್ಧ ಹೋರಾಟ ನಡೆಸಲು ಇವರಿಗೆ ಸಾಧ್ಯವಿಲ್ಲ ಎಂಬ ಕಾರಣದಿಂದ ಕೇಂದ್ರ ಸರ್ಕಾರವು ಹೋರಾಟಗಾರರನ್ನು ಬೇಟೆಯಾಡುವ ಮೂಲಕ ಲಾಭ ಪಡೆಯುತ್ತಿದೆ.
ಇನ್ನೊಂದು ಕಡೆ ನೋಡುವುದಾದರೆ ಕಾರ್ಪೊರೇಟ್ ಉದ್ಯಮಿಗಳ ಸಾವಿರ ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದ್ದನ್ನು ನೋಡಿದರೆ ಲಾಕ್ಡೌನ್ನ ಲಾಭ ಬಿ.ಜೆ.ಪಿ ಕೇಂದ್ರ ಸರಕಾರವು ಪಡೆಯುತ್ತಿದೆ ಎಂದು ಸ್ಪಷ್ಟವಾಗಿ ದೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಜನ ಸಾಮಾನ್ಯರಿಂದ ಕ್ರಾಂತಿಕಾರಿ ಹೋರಾಟ ನಡೆಯಲಿದೆ.
ಸವಾದ್ ಕಲ್ಲರ್ಪೆ ಜಿಲ್ಲಾ ಸಮಿತಿ ಸದಸ್ಯರು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.