ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ವಲಸೆ ಕಾರ್ಮಿಕರನ್ನು ತಮ್ಮ ತವರು ರಾಜ್ಯಗಳಿಗೆ ಸಾಗಿಸಲು ಕರ್ನಾಟಕ ಸರ್ಕಾರ ರೈಲು ಸೇವೆಗಳನ್ನು ಇಂದು (ಶುಕ್ರವಾರ) ಪುನರಾರಂಭಿಸಲಿದೆ ಎಂದು ರಾಜ್ಯ ಆಡಳಿತದ ಉನ್ನತ ಮೂಲಗಳು ದೃಡಪಡಿಸಿವೆ.
ವಲಸೆ ಕಾರ್ಮಿಕರನ್ನು ಮತ್ತು ಇತರ ರಾಜ್ಯಗಳಾದ ಪಶ್ಚಿಮ ಬಂಗಾಳ, ತ್ರಿಪುರ, ಜಾರ್ಕಾಂಡ್, ಉತ್ತರಪ್ರದೇಶದ ವಲಸಿಗರನ್ನು ಸಾಗಿಸುವ ಪ್ರಸ್ತಾವನೆಯನ್ನು ಬಿಹಾರ ಸರ್ಕಾರ ಮಾತ್ರ ಒಪ್ಪಿಕೊಂಡಿದೆ ಎಂದು ಐಎಎಸ್ ಅಧಿಕಾರಿ ಖಚಿತಪಡಿಸಿದ್ದಾರೆ.
ರೈಲು ಸೇವೆಯು ವಲಸೆ ಕಾರ್ಮಿಕರಿಗೆ ಉಚಿತವಾಗುವ ಸಾಧ್ಯತೆಯಿದೆ. ಆದಾಗ್ಯೂ, ಒಂದು ನಿರ್ದಿಷ್ಟ ನಿರ್ಧಾರವನ್ನು ನಿರೀಕ್ಷಿಸಲಾಗಿದೆ. ಈ ಹಿಂದೆ, ವಿಶೇಷ ರೈಲುಗಳಿಗೆ ಸಾಮಾನ್ಯ ಬೆಲೆಗಿಂತ ಹೆಚ್ಚಿನದನ್ನು ಪಾವತಿಸಲು ವಲಸೆ ಕಾರ್ಮಿಕರನ್ನು ಕೇಳಿದ ನಂತರ ವಿವಾದ ಭುಗಿಲೆದ್ದವು.
ಕರ್ನಾಟಕ ಸರ್ಕಾರವು ಮೇ 3 ಮತ್ತು 4 ರಂದು ಎಂಟು ವಿಶೇಷ ರೈಲುಗಳಿಗೆ ಅನುಕೂಲ ಮಾಡಿಕೊಟ್ಟಿದ್ದು, ಪ್ರತಿ ರೈಲಿನಲ್ಲಿ ಸುಮಾರು 1200 ವಲಸೆ ಕಾರ್ಮಿಕರು ಇದ್ದರು. ಆದರೆ, ಇದನ್ನು ಮೇ 5 ರಿಂದ ನಿಲ್ಲಿಸಲಾಯಿತು.
ರಾಜ್ಯದ ಮುಖ್ಯಮಂತ್ರಿಯವರು ಅವರು ಮೇ 5 ರಂದು ವಲಸೆ ಕಾರ್ಮಿಕರಿಗೆ ತಮ್ಮ ತವರಿಗೆ ತೆರಳದಂತೆ ಮನವಿ ಮಾಡಿದ್ದರು,
ಬದಲಾಗಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಕೆಲಸ ಸಿಗುತ್ತದೆ ಎಂದು ಭರವಸೆಯನ್ನು ನೀಡಿದ್ದರು. ಇದನ್ನು ನೋಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಹಾಗೂ ಹೋಗುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಇಲ್ಲಿಯೇ ಕೆಲಸ ಮಾಡಿ ಎಂದಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.