(www.vknews.com) : ವಿಶ್ವವೇ ಕೋವಿಡ್ 19 ವೈರಸಿನಿಂದ ಸಂಕಷ್ಟದಲ್ಲಿರುವುದನ್ನು ಕಂಡಿರುತ್ತೇವೆ.ಈ ಸಮಯದಲ್ಲಿ ನಮ್ಮ ರಾಷ್ಟ್ರದಲ್ಲಿ ಸಮಾರು 60,000 ದಷ್ಟು ಸೋಂಕಿತರು ಬಳಲುತ್ತಿದ್ದು ಹಲವರು ಚೇತರಿಕೆಗೊಳ್ಳುತ್ತಿದ್ದರೆ ಇನ್ನು ಸುಮಾರು 2000 ಮಂದಿಯಷ್ಟು ಜನರು ಕೋವಿಡ್ ನಿಂದ ಸಾವನ್ನಪ್ಪಿರುವುದು ಬಹಳ ಬೇಸರದ ವಿಷಯ.ಸುಮಾರು 40 ದಿನಗಳು ದೇಶದೆಲ್ಲೆಡೆ ಲಾಕ್ ಡೌನ್ ಕಠಿಣವಾಗಿ ಅಳವಡಿಕೆಯಲ್ಲಿತ್ತು. ಆದರೆ ಕೇಂದ್ರ ಸರ್ಕಾರ ಇದೀಗ ಲಾಕ್ ಡೌನ್ ಸಡಿಲಿಕೆ ಮಾಡಿದ್ದು ಇದರಿಂದ ಜನರು ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದು ಹಲವು ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಜೊತೆಗೆ ರಂಝಾನ್ ತಿಂಗಳು ಚಾಲ್ತಿಯಲ್ಲಿದ್ದು ಇನ್ನೇನು ಕೆಲವು ದಿನಗಳಲ್ಲಿ ಮುಸ್ಲಿಮರು ಬಹಳ ಸಡಗರದಿಂದ ಆಚರಿಸುವ ಈದ್ ಹಬ್ಬ ಬರುತ್ತಿದೆ.
ಅಬ್ದುಲ್ ಮಜೀದ್ ಸಖಾಫಿ (ಮಲ್ಲಿ ಸಖಾಫಿ)
ಮುಸಲ್ಮಾನರು ವಿಜೃಂಭಣೆಯಿಂದ ಆಚರಿಸುವ ಎರಡು ಹಬ್ಬಗಳಲ್ಲಿ ಇದು ಒಂದು.ಈದ್ ಹಬ್ಬಕ್ಕೆ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಹೊಸ ಬಟ್ಟೆಗಳನ್ನು ಖರೀದಿಸುವುದು ವಾಡಿಕೆ.ಆದರೆ ಈ ಕೋವಿಡ್ ಎಂಬುವುದು ಜನರಿಂದ ಜನರಿಗೆ ಹರಡು ವೈರಸ್ ಆಗಿರುತ್ತದೆ.ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕೊಂದರೆ ಆತ ಇಡೀ ಮಾನವಕುಲವನ್ನೆ ಕೊಂದ ಹಾಗೆ ಎಂದು ಕಲಿಸಿಕೊಟ್ಟ ವಿಶ್ವ ವಿಮೋಚಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ)ರ ವಚನದ ಪ್ರಕಾರ ನಾವು ಶಾಪಿಂಗ್ ಮಾಡುವ ಸಂದರ್ಭದಲ್ಲಿ ಯಾರಿಂದಲೂ ನಮ್ಮ ದೇಹಕ್ಕೆ ಸೋಂಕು ತಗುಲಿ ತದನಂತರ ನಮ್ಮಿಂದ ಇತರರಿಗೆ ಸೋಂಕು ತಗುಲಿ ಯಾರಾದರೂ ಮರಣ ಹೊಂದಿದರೆ ಪ್ರವಾದಿ ವಚನದ ಪ್ರಕಾರ ನಾವು ಇಡೀ ಮಾನವಕುಲವನ್ನು ಕೊಂದಂತೆ ಆಗುವುದಿಲ್ಲವೇ?
ಅಬ್ದುಲ್ ಮಜೀದ್ ಸಖಾಫಿ (ಮಲ್ಲಿ ಸಖಾಫಿ) ಖತೀಬರು ಬದ್ರಿಯಾ ಜುಮಾ ಮಸ್ಜಿದ್ ಬನ್ನೂರು ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.