ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಬೆಂಗಳೂರಿನ ಜೀವನ್ ಭೀಮಾ ನಗರದಲ್ಲಿ ಕೊರೋನ ಮಾರಿಯ ವಿರುದ್ದ ಹೋರಾಡಿದ ಆಶಾ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಹೋರಾಡಿದ ಆಶಾ ಕಾರ್ಯಕರ್ತರಾದ ಶ್ರೀಮತಿ ಆನಂದಿ, ಕೋಕಿಲ, ದೀಪಾ, ವಿಧ್ಯಾ ಹಾಗೂ ಕೃಷ್ಣವೇಣಿಯವರ ಮೇಲೆ ಸ್ಥಳೀಯರು ಹೂವಿನ ಮಳೆಗೈದು ಕೊಂಡಾಡಿ, ಆಶಾ ಕಾರ್ಯಕರ್ತರಿಗೆ ಜೈ ಎನ್ನುತ್ತ ಜೈಕಾರ ಹಾಕಿದರು. ಇಷ್ಟು ದಿನ ತಾವು ಇಡೀ ದೇಶ ಹೆಮ್ಮೆಪಡುವಂತಹ ಕಾರ್ಯ ಮಾಡಿದ್ದೀರೆಂದು ಸ್ಥಳೀಯ ಕಾಂಗ್ರಸ್ ಮುಖಂಡರಾದ ಶ್ರೀಮತಿ ಮಂಜುಳ ಮುನಿರಾಜು ರವರು ಇವರನ್ನು ಫಲ ಪುಷ್ಪಗಳೊಂದಿಗೆ ಗೌರವಿಸಿದರು.
ಸದರಿ ಕಾರ್ಯಕ್ರಮದಲ್ಲಿ ಹೆಚ್. ಎ .ಎಲ್. ಏರೋಸ್ಪೇಸ್ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಮು.ನಂ.ಗಜೇಂದ್ರರವರು ಉಪಸ್ಥಿತರಿದ್ದು, ಆಶಾ ಕಾರ್ಯಕರ್ತರ ಸೇವೆಯನ್ನು ಪ್ರಶಂಸಿಸಿದರು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.