(www.vknews.com) : KCF ಸಾಂತ್ವನ ಇಲಾಖೆಯ ನಾಯಕರಿಗೆ ಮೊನ್ನೆ ಒಂದು ಕರೆ ಬಂತು. ಜುಬೈಲ್’ನ ಕ್ಯಾಂಪ್ ಒಂದರಲ್ಲಿ ಭಾರತ, ಪಾಕಿಸ್ತಾನ, ಜೋರ್ಡನ್, ಫಿಲಿಪ್ಪಿನ್, ಆಫ್ರಿಕಾ ದೇಶಗಳ ಹಲವಾರು ಕಾರ್ಮಿಕರು ಆಹಾರವಿಲ್ಲದೆ ಸಮಸ್ಯೆಯಲ್ಲಿದ್ದಾರೆ ಎಂದು. ಮರುದಿನವೇ ನಮ್ಮ KCF ದಮ್ಮಾಮ್ ಝೋನ್ ಅಧೀನದ ಜುಬೈಲ್ ಸಾಂತ್ವನ ಇಲಾಖೆಯ ತಂಡ ಅಲ್ಲಿಗೆ ಭೇಟಿ ನೀಡಿದಾಗ ಅಲ್ಲಿಯ ಕಾರ್ಮಿಕರ ಅಳಲು ಈ ರೀತಿಯಾಗಿತ್ತು.. “ಅತ್ತ ನಾಲ್ಕೈದು ತಿಂಗಳಿಂದ ಸಂಬಳವೂ ಇಲ್ಲ, ಇತ್ತ ತಿನ್ನಲು ಯಾವುದೇ ಆಹಾರವೂ ಇಲ್ಲ, ಎಲ್ಲಿಯವರೆಗೆಂದರೆ? ಒಂದು ಕುಬ್ಬೂಸ್ ತೆಗೆದು ತಿನ್ನಲು ಕೂಡಾ ಗತಿಯಿಲ್ಲ, ಯಾವುದಾದರೂ ಮಸೀದಿಯ ಬಳಿ ಯಾರಾದರೂ ಏನನ್ನಾದರೂ ಕೊಟ್ಟಾರು ಎಂದು ಭಾವಿಸಿ ಅಲ್ಲಿ ನಿಂತರೆ ಸೌದಿಗಳು ಬಂದು ಏನಾದರೂ ಕೊಟ್ಟರೆ ನಮಗೆ ಅದೇ ಅಂದಿನ ಆಹಾರ. ನಮಗೆ ತಿನ್ನಲು ಸ್ವಲ್ಪ ಆಹಾರ ಕೊಡಿ ಇಲ್ಲವೇ ನಮ್ಮನ್ನು ಒಮ್ಮೆ ನಮ್ಮ ದೇಶಗಳಿಗೆ ಕಳುಹಿಸಿ ಕೊಡಲು ಸಹಾಯ ಮಾಡಿ” ಎಲ್ಲಾ ಮಾಹಿತಿ ಪಡೆದು ನಮ್ಮ ಸಾಂತ್ವನ ಇಲಾಖೆ ಆ ಕಾರ್ಮಿಕರ ಕಂಪೆನಿಯ ಹೆಚ್.ಆರ್. ವಿಭಾಗವನ್ನು ಸಂಪರ್ಕಿಸಿದಾಗ ಅಲ್ಲಿಂದ ಯಾವುದೇ ರೀತಿಯ ಧನಾತ್ಮಕ ಪ್ರತಿಕ್ರಿಯೆ ಬರಲಿಲ್ಲ.
ಅಲ್ ಹಮ್ದು ಲಿಲ್ಲಾಹ್ KCF ಜುಬೈಲ್ ನಲ್ಲಿರುವ ಸಿಟಿ ಮತ್ತು ಶೋಲ ಸೆಕ್ಟರ್’ಗಳು ಜಂಟಿಯಾಗಿ ಕೆಲವು ದಾನಿಗಳ ಸಹಕಾರದೊಂದಿಗೆ ಸುಮಾರು ಇಪ್ಪತ್ತಕ್ಕಿಂತಲೂ ಅಧಿಕ ಕಾರ್ಮಿಕರಿಗೆ ಇಫ್ತಾರ್ ಗೆ ಮತ್ತು ಸುಮಾರು ಒಂದು ತಿಂಗಳಿಗೆ ಸಾಕಾಗುವಷ್ಟು ಆಹಾರ ಸಾಮಾಗ್ರಿಗಳನ್ನು ಇಂದು ನೀಡಿತು. ಜುಬೈಲ್ ಕೆಸಿಎಫ್’ನ ನೌಫಲ್ ಮುಲ್ಕಿ, ಸಫ್ವಾನ್ ಮುಕ್ಕ, ಹಮೀದ್ ಕೃಷ್ಣಾಪುರ, ಮುಸ್ತಫಾ ಕುದ್ರಡ್ಕ, ಕಲಂದರ್ ಮುಕ್ಕ ಮುಂತಾದ ಕೆಲವು ನಾಯಕರು ಉಪಸ್ಥಿತರಿದ್ದರು. ಆಹಾರ ವಸ್ತುಗಳ ಖರೀದಿ ಮತ್ತು ಪ್ಯಾಕಿಂಗ್ ವ್ಯವಸ್ಥೆ ಮಾಡಿ ಕೊಟ್ಟ ತಾಜ್ ಹೋಟೆಲ್ (ಸೌದಿ ಏರ್ಲೈನ್ಸ್) ನ ಹಕೀಮ್ ನೆಕ್ಕಿಲಾಡಿ ಮತ್ತು ತಂಡ ವನ್ನೂ ಇಲ್ಲಿ ಸ್ಮರಿಸುತ್ತಿದ್ದೇವೆ.
ಮುಂದಕ್ಕೆ ಈ ಕಾರ್ಮಿಕರನ್ನು ಅವರ ಎಂಬಸ್ಸಿಗಳ ಮುಖಾಂತರ ಊರಿಗೆ ಕಳುಹಿಸುವ ಪ್ರಯತ್ನವನ್ನು ಮಾಡುವ ಭರವಸೆಯನ್ನೂ ನೀಡಿದ್ದೇವೆ. ಕೆಸಿಎಫ್ ಗೆ ಈ ರೀತಿ ಹತ್ತು ಹಲವು ಯೋಜನೆಗಳು ನಮ್ಮಲ್ಲಿದೆ. ನಿಮ್ಮೆಲ್ಲರ ಸಹಕಾರ ಇನ್ನೂ ನಮ್ಮೊಂದಿಗಿರಬೇಕೆಂದು ಬೇಡಿಕೊಳ್ಳುತ್ತಿದ್ದೇವೆ. ಅಲ್ಲಾಹು ಎಲ್ಲವನ್ನೂ ಖಬೂಲ್ ಮಾಡಲಿ, ಸಹಕರಿಸಿದ ಎಲ್ಲರಿಗೂ ಅಲ್ಲಾಹು ತಕ್ಕ ಪ್ರತಿಫಲ ನೀಡಲಿ ಆಮೀನ್.
ಕೆಸಿಎಫ್ ಜುಬೈಲ್ ಸಾಂತ್ವನ ಇಲಾಖೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.