ಅಮ್ಮುಂಜೆ(ವಿಶ್ವಕನ್ನಡಿಗ ನ್ಯೂಸ್): GCC ಹೆಲ್ಪ್ ಲೈನ್ ಅಮ್ಮುಂಜೆ-ಅಡ್ಡೂರು ಇದರ 3ನೇ ಅವಧಿಯ ವಾರ್ಷಿಕ ಮಹಾಸಭೆಯು ತಾ:15-05-2020ರಂದು ಅಧ್ಯಕ್ಷರಾದ ಸಿರಾಜ್ ಗೋಳಿಕಟ್ಟೆಯವರ ನೇತೃತ್ವದಲ್ಲಿ ಆನ್ ಲೈನ್ ಮೂಲಕ ನಡೆಯಿತು.
2020-2021ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹಮ್ಮದ್(ಮೋನು)ದೊಂಪ, ಗೌರವಾಧ್ಯಕ್ಷರಾಗಿ ಅಬ್ದುಲ್ ಬಶೀರ್ ದೊಂಪ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಕನಿಯೂರು, ಕಾರ್ಯದರ್ಶಿಯಾಗಿ ಶಾಪಿ ಗೋಳಿಕಟ್ಟೆ ಸಹ ಕಾರ್ಯದರ್ಶಿಯಾಗಿ ತಾಜುದ್ದೀನ್, ಕೋಶಾಧಿಕಾರಿಯಾಗಿ ಬದ್ರುದ್ದೀನ್ ಬಾಕಿಮಾರ್, ಕಾರ್ಯಕ್ರಮ ವಿನಿಯೋಜಕರರಾಗಿ ಸಿರಾಜ್ ಗೋಳಿಕಟ್ಟೆ ಹಾಗೂ ಸಲಹೆಗಾರರಾಗಿ ನವಾಝ್ ಕೆ ಎಚ್, ಮಹಮ್ಮದ್ ಹಪರ್ ಅಲ್ ಬಾತಿನ್, ಮುಹೀಯುದ್ದೀನ್ ಸಆದಿ, ಇದ್ದಿನಬ್ಬ ದೊಂಪ ಆಯ್ಕೆಯಾದರು.
ಗ್ರೂಪ್ ಪ್ರವರ್ತಕರಾಗಿ ಶರೀಪ್ ವಿದ್ಯಾನಗರ, ಆಶೀಪ್ ಎ ಎಚ್, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶ್ರಫ್.ಜೆ, ನಿಸಾರ್.ಕೆ, ಮಜೀದ್ ಕಣಿಯೂರ್, ಹಕೀಮ್ ಎಂ.ಕೆ,ಅಸ್ಫಕ್ ಅಚು, ರಿಯಾಜ್.ಕೆ ಮತ್ತು ಇಕ್ಬಾಲ್ ಜಂಪಾಲ್ ಇವರು ಆಯ್ಕೆಯಾದರು.
ಅಲ್ಲಾಹನ ಅಪಾರ ಅನುಗ್ರಹದಿಂದ ಜಿ.ಸಿ.ಸಿ ಹೆಲ್ಪ್ ಲೈನ್ ಕಮಿಟಿಯು ಅಮ್ಮುಂಜೆ ಜಮಾಅತ್ತಿನ ಅನಾಥ, ಬಡ ಮತ್ತು ನಿರ್ಗತಿಕರ ಹೆಣ್ಣು ಮಕ್ಕಳ ಮದುವೆಗೆ ಸಹಾಯ, ರಂಜಾನ್ ತಿಂಗಳಲ್ಲಿ ಆಯ್ದ ಕುಟುಂಬಕ್ಕೆ ಕಿಟ್ ವಿತರಣೆ, ಮನೆ ನಿರ್ಮಾಣಕ್ಕೆ ಸಹಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಧನ ಸಹಾಯ, ಮದರಸದ ಮಕ್ಕಳ ಪುಸ್ತಕ ವಿಸ್ತರಣೆ,ಕೊರೊನ ಲಾಕ್ ಡೌನ್ ಸಮಯದಲ್ಲಿ ತುರ್ತು ವ್ಯವಸ್ಥೆ ಹಾಗೂ ಇನ್ನೂ ಹಲವಾರು ಸಹಾಯ ಕಾರ್ಯವನ್ನು ಮಾಡಿದೆ. ಇದುವರೆಗೂ 3 ವರ್ಷದಲ್ಲಿ ಸುಮಾರು 18ಲಕ್ಷಕ್ಕಿಂತಲೂ ಅಧಿಕ ಸಹಾಯವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಂಕ್ರಮಿಕ ಪಿಡುಗು ವಿಶ್ವ ವ್ಯಾಪ್ತಿ ದೈನಂದಿನ ಕಾರ್ಯಗಳನ್ನು ಬುಡಮೇಲು ಗೊಳಿಸಿದೆ. ಅನಿವಾಸಿಗಳೂ ಕೂಡಾ ಕೆಲಸಕಾರ್ಯವಿಲ್ಲದೆ ಕೊಲ್ಲಿ ರಾಷ್ಟ್ರದಲ್ಲಿ ದಿನಗಳೆಯುತ್ತಿದ್ದಾರೆ. ಆದರೂ ಅಲ್ಲಾಹನು ನೀಡಿದ ಅನುಗ್ರಹದಲ್ಲಿ ಒಂದು ಸಣ್ಣ ಪಾಲು ಎಂಬಂತೆ ನಮ್ಮೂರಿನ ಹಲವು ಕಡೆ ಅರ್ಹರನ್ನು ಹುಡುಕಿ ಕಿಟ್ ತಲುಪಿಸುವ ಪ್ರಯತ್ನವನ್ನು ಈ ಸಂಸ್ಥೆ ಮಾಡಿದೆ.
ಹಲ್ ಹಂದುಲಿಲ್ಲಾಹ್ ನಮ್ಮ ಮನವಿಗೆ ಸ್ಪಂದಿಸಿ ನಮ್ಮ ಸಂಸ್ಥೆಯ ಮೇಲೆ ದಾನಿಗಳು ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಧನ್ಯವಾದಗಳು ಹಾಗೂ ನಾವು ಆಭಾರಿಗಳು. ನೀವು ನೀಡಿದ ದಾನವನ್ನು ಸರ್ವಶಕ್ತನಾದ ಅಲ್ಲಾಹನು ಸ್ವೀಕರಿಸಲಿ, ಇನ್ನೂ ಇಂತಹಾ ಉತ್ತಮ ಕೆಲಸಗಳನ್ನು ಮಾಡಲು ಅಲ್ಲಾಹನು ನಮಗೆಲ್ಲರಿಗೂ ಪರಿಪೂರ್ಣ ಆಫಿಯತ್, ಧೀರ್ಘಾಯುಷ್ಯ ನೀಡಲಿ ಎಂದು ಸಂಘಟಕರು ಹಾರೈಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.