(www.vknews.com) : ಮಾನವ ಅಪೇಕ್ಷೆಗಳು ಅನಿಯಮಿತವಾಗಿವೆ(Human Wants Are Unlimited) ಎಂಬುದು ಅರ್ಥ ಶಾಸ್ತ್ರಜ್ಞ’ರ ವಿವರಣೆ ‘ಮನುಷ್ಯ ತನ್ನ ಆರ್ಥಿಕ ಪರಿಸ್ಥಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಉತ್ತಮ ದರ್ಜೆಗೆ ತಲುಪಿಸಲು ಹಗಲು-ರಾತ್ರಿ ಪ್ರಯತ್ನ ಪಡುತ್ತಾ ಇರುತ್ತಾನೆ, ಇದರಲ್ಲಿ ಕೆಲವೊಂದು ಹೃದಯವಂತಿಕೆಯ ಜನರು ತಾವು ಹಾದು ಬಂದ ದಾರಿಯನ್ನು ಮರೆತಿರುದಿಲ್ಲ,,ಮಾತ್ರವಲ್ಲ ಕಷ್ಟದ ಪರಿಸ್ಥಿಯನ್ನು ಇನ್ನೊಬ್ಬರಲ್ಲಿ ಕಂಡಾಗ ತನಗಾದ ಕಷ್ಟ ಎಂಬಂತೆ ಅವರ ಸಹಾಯಕ್ಕೆ ಧಾವಿಸುತ್ತಾರೆ…
ಈ ನಿಟ್ಟಿನಲ್ಲಿ ಅಬ್ದುಲ್ ರಝಕ್ ಉಜಿರೆ, ತನ್ನ ತಾಯಿಯ ಮಮತೆ ಸಣ್ಣದರಲ್ಲಿಯೇ ಕಳಕೊಂಡರು, ಅಲ್ಲಿಂದಲೇ ಅವರ ನೋವಿನ ಪಾಠ ಆರಂಭವಾಯಿತು ಆದರೆ ತಾನೊಬ್ಬ ವಿದ್ಯಾವಂತನಾಗಬೇಕು ಎಂಬ ಅವರ ಹಂಬಲಕ್ಕೆ ತಂದೆಯ ಕೂಲಿ ಕೆಲಸ ಅಡ್ಡಿಯಾಗಲಿಲ್ಲ, ಸ್ವತಃ ತಾನು ಕೂಡ ವಿದ್ಯಾರ್ಥಿ ಜೀವನದ’ದ್ದುಕ್ಕೂ, ರಜಾ ದಿನಗಳಲ್ಲಿ ಕೂಲಿ – ಗಾರೆ ಕೆಲಸವನ್ನು ಮಾಡುತ್ತಾ , ಕಷ್ಟ – ಕಾರ್ಪಣ್ಯಗಳನ್ನು ಎದುರಿಸಿ ಎಸ್.ಡಿ. ಎಂ ಕಾಲೇಜು ಉಜಿರೆಯಲ್ಲಿ ವಾಣಿಜ್ಯ ಪಧವಿ ಗಳಿಸಿದರು, ಕಾಲೇಜಿನ ಸುಂದರ ಕ್ಯಾಂಪಸ್, ಆಟದ ಮೈದಾನ , ಮತ್ತು ಸಹ ವಿದ್ಯಾರ್ಥಿಗಳ ಒಡನಾಟ , ಇವರ ಕಷ್ಟಗಳನ್ನು ದೂರೀಕರಿಸಿತ್ತು .
ಇವರದೊಂದು ಜ್ಯಾತ್ಯಾತೀತ ಬದುಕು , ಕಾಲೇಜು ದಿನದಲ್ಲೇ ಅಮರ್ – ಅಕ್ಬರ್ – ಅಂತೋನಿ ಎಂಬಂತೆ – ಅಮರ್ – ರೋಷನ್ ಆತ್ಮೀಯ ಗೆಳೆಯರು , ಸೂರ್ಯ ಎಂಬ ಮುಗುಳ್’ನಗುವಿನ ನಾಯಕನ ಹಿಂದೆ ಇವರ ಸುಂದರ ನಡೆತ, ಪಧವಿ’ದರರಾಗಿ ನಂತರ ಕೆಲಸಕ್ಕಾಗಿ ದುಬೈಯನ್ನು ಆಶ್ರಯಿಸಿದ ರಝಕ್ , ಸೇಲ್ಸ್’ಕ್ಷೆತ್ರವನ್ನು ಆಯ್ದುಕೊಂಡರು , ಇದರೊಂದಿಗೆ ಇತರ ಸಣ್ಣ -ಪುಟ್ಟ ಸಾಮಾಜಿಕ ಸಂಘ ಸಂಸ್ಥೆಯೊಂದಿಗೆ ಸಂಪರ್ಕವಿಟ್ಟು , ಕೆಲಸದಷ್ಟೇ ಸಮಯವನ್ನು ಸಾಮಾಜಿಕ ಸೇವೆಗೆ ಮುಡಿಪಾಗಿಡಲು ಆರಂಭಿಸಿದರು, ಇವರ ಸಾಮಾಜಿಕ ಸೇವೆ ತುಂಬಾ ವಿಶಿಷ್ಟತೆ’ಯಿಂದ ಕೂಡಿದೆ , ಸಾಮಾಜಿಕ ಸೇವೆ ಅಂದರೆ ಆರ್ಥಿಕ ಮತ್ತು ಆಹಾರ ಕಿಟ್ ಅಷ್ಟಕ್ಕೆ ಸೀಮಿತವಾಗದೆ ಪ್ರಸಕ್ತ ಸಮಯದಲ್ಲಿ ಇವರ ಸಾಮಜಿಕ ಸೇವೆಯ ಯೋಜನೆ – ಆಲೋಚನೆ , ಎಲ್ಲವೂ – ಎಲ್ಲರಿಗೂ, ಎಂಬ ವಿಭಿನ್ನದಿಂದ ಕೂಡಿದೆ. ತಾನು ಮಾಡುತ್ತಿರುವ ಈ ವಿಶಿಷ್ಟ ಸಾಮಜಿಕ ಸೇವೆಯ ಶೈಲಿಯನ್ನು ತನ್ನ ಕಾಲೇಜು ದಿನ’ದ , ಇನ್ನೊಂದು ಗೆಳಯರ ತಂಡದಲ್ಲಿ ಹೇಳಿಕೊಂಡಾಗ, ಅವರು ಕೂಡ ಉತ್ಸುಕತೆಯಿಂದ ಇದನ್ನು ಒಂದು ಹೆಸರಿನಲ್ಲಿ ಮುಂದುವರಿಸಿ ರಝಕ್ ರಿಗೆ ನೆರವಾಗಲು ತೀರ್ಮಾನಿಸಿದರು. ಅದರ ಹೆಸರೇ – “ರಕ್ಷ ಹೆಲ್ಪ್ ಲೈನ್” ಇದರ ಅಡಿಯಲ್ಲಿ ಕೆಲಸ ಹುಡುಕಲು ವಿವಿಧ ದೇಶಗಳಿಗೆ ಬಂದವರಿಗೆ ಸಹಾಯವಾಗುವ ವಾಟ್ಸ್ ಆಪ್ ಗ್ರೂಪ್ ಕೂಡ ಇದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.