ನೆಲ್ಯಾಡಿ, ಕೊಕ್ಕಡ (www.vknews.com) : ಗ್ರೀನ್ ಗೈಸ್ ಬದ್ರಿಯಾ ನಗರ ಕೊಕ್ಕಡ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಸಹಬಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 07 ಜೂನ್ 2020 ನೇ ಆದಿತ್ಯವಾರದಂದು ಕೊಕ್ಕಡದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಕೊರೋನಾ ಭೀತಿಯ ನಡುವೆಯೂ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 54 ಮಂದಿ ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಬಹು| ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಕೊಕ್ಕಡ ಇವರ ಭಕ್ತಿ ನಿರ್ಭಲವಾದ ಪ್ರಾರ್ಥನೆ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಷರೀಫ್ ಬದ್ರಿಯಾ ನಗರ,ಹೇಮಂತ್ ಕುಮಾರ್ ಜಿ.ಎನ್,ಡಾ| ಬಿ ಮೋಹನ್ ದಾಸ್ ಗೌಡ,ಟೀಮ್ ಚಕ್ರವರ್ತಿ ಕರ್ವೆಲ್ ಇದರ ಅದ್ಯಕ್ಷರಾದ ಪಾರೂಕ್ ಪೆರ್ನೆ,ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ನಿರ್ವಾಹಕರಾದ ಅಶ್ರಪ್ ಅರಬಿ ಕಲ್ಲಡ್ಕ,ಕೊಕ್ಕಡ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿಯಾದ ಮನೋರಮ,ಯೂಸುಫ್ ಬೈಲಂಗಡಿ. ಉಮೇಶ್ ಸಪ್ತಗಿರಿ,ಲಕ್ಷ್ಮೀ ನಾರಾಯಣ,ಮ್ಯಾಕ್ಸಿಮ್ ಲೋಬೊ ಕೊಕ್ಕಡ,ಅಶ್ರಪ್ ಚಕ್ರವರ್ತಿ ಕರ್ವೆಲ್,ಇಸ್ಮಾಯಿಲ್ ಜೋಡುಮಾರ್ಗ,ಹರೀಶ್.ಪಿ. ಅಲ್ಲದೇ ಕೊಕ್ಕಡ ಊರಿನ ಹಿರಿಯರು,ಸಾಮಾಜಿಕ ಕಾರ್ಯಕರ್ತರು,ಗ್ರೀನ್ ಗೈಸ್ ಬದ್ರಿಯಾ ನಗರ ಕೊಕ್ಕಡ ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಖಲಂದರ್ MH ಸ್ವಾಗತಿಸಿದರೆ,ಅನ್ಸಾರ್ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.
ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿ ಕಾರ್ಯಕ್ರಮದ ಯಶಸ್ವಿಗಾಗಿ ಹಗಳಿರುಲು ದುಡಿದ ಗ್ರೀನ್ ಗೈಸ್ ಬದ್ರಿಯಾ ನಗರ ಕೊಕ್ಕಡ ಇದರ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.
ಪ್ರಕಟಣೆ: ಮಾಧ್ಯಮ ವಿಭಾಗ: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.