(www.vknews.com) : ದಿನಾಂಕ: 09-06-2020 ರಂದು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಕೊರೋನಾ ಮಹಾಮಾರಿಯ ವಿರುದ್ಧ ನಮ್ಮನ್ನು ರಕ್ಷಿಸಲು ಕೈಗಳನ್ನು ಸ್ವಚ್ಛತೆಯಿಂದ ಇಡಲು ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ದಳ ಸಿಬ್ಬಂದಿಗಳಿಗೆ ನಿರ್ದೇಶಕರು ಕೆ. ಪ್ರಭಾಕರ ಇವರ ನಿರ್ದೇಶನದಲ್ಲಿ ಎಂ.ಸಿ.ಎಫ್. ಲಿಮಿಟೆಡ್ ಪಣಂಬೂರು ಮಂಗಳೂರು ಇವರ ವತಿಯಿಂದ 300 ಸ್ಯಾನಿಟೈಸರ್ಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು, ವೈದ್ಯಾಧಿಕಾರಿಗಳು ಎಂ.ಸಿ.ಎಫ್, ಚೀಫ್ ಸೆಕ್ಯೂರಿಟಿ ಅಶೋಕ್ ಪ್ರಭು ಹಾಗೂ ಡಾ|| ಯೋಗೀಶ್ ಭಟ್ ಇವರುಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗೃಹರಕ್ಷಕ/ಗೃಹರಕ್ಷಕಿಯರು ಮತ್ತು ಜಿಲ್ಲಾ ಕಛೇರಿಯ ಕಛೇರಿ ಅಧೀಕ್ಷಕರಾದ ಶ್ರೀ ರತ್ನಾಕರ ರವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.