ಕಾಪು(ವಿಶ್ವಕನ್ನಡಿಗ ನ್ಯೂಸ್): ಕಾಪು ತಾಲೂಕಿನ ಮಲ್ಲಾರ್ ಗ್ರಾಮದ ಕೊಂಬಗುಡ್ಡೆಯ ಜಾಮಿಯಾ ಮಸ್ಜಿದ್ ಜದೀದ್ ಕಲಾನ್ ನಲ್ಲಿ ಇದೇ ಬರುವ 12.06.2020 ರ ಶುಕ್ರವಾರ ಜುಮಾ ನಮಾಜ್ ಗಾಗಿ ಮುಸಲ್ಲಿ ಗಳಿಗೆ ತೆರೆಯಲಾಗುವುದು.
ಸರಕಾರದ ವತಿಯಿಂದ ಹಾಗೂ ಉಲೇಮಾ ಗಳಿಂದ ವಿಧಿಸಲ್ಪಟ್ಟ ನಿಬಂಧನೆಗನ್ನು ಸಂಪೂರ್ಣವಾಗಿ ಪಾಲಿಸುವ ನಿಟ್ಟಿನಲ್ಲಿ 17 ಪಾಯಿಂಟ್ ಗಳ ಸೂಚನಾ ಫಲಕವನ್ನು ಮಸ್ಜಿದ್ ಕಂಪೌಂಡ್ ನಲ್ಲಿ ಅಳವಡಿಸಲಾಗಿರುತ್ತದೆ.
ಪ್ರಾಮುಖ್ಯವಾಗಿ ಕೊರೊನ ವೈರಸ್ ನೊಂದಿಗೆ ನಾವು ಜೀವಿಸಬೇಕಾಗಿದ್ದು , ಅದನ್ನು ಮೈಮೇಲೆ ಎಳೆದು ಕೊಂಡು, ಸಮಾಜದಲ್ಲಿ ಹರಡದಂತೆ ಅತೀ ಹೆಚ್ಚಿನ ಜಾಗ್ರತಿಯನ್ನು ವಹಿಸಿಕೊಳ್ಳುವ ಸಲುವಾಗಿ ಸೂಚನಾ ಫಲಕದಲ್ಲಿರುವ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುವ ಹೊಣೆಗಾರಿಕೆ ಮಸ್ಜಿದ್ ಕಮಿಟಿ ಮೇಲೆ ಇರುತ್ತದೆ ಎಂಬ ಅಂಶ, ಶಭಿ ಅಹಮದ್ ಕಾಝಿ ಯವರ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಸ್ಜಿದ್ ಕಮಿಟಿಯು ಅಂಗೀಕರಿಸಿತು ಎಂದು ಮಸ್ಜಿದ್ ನ ಪ್ರಧಾನ ಕಾರ್ಯದರ್ಶಿ, ಅನ್ವರ್ ಅಲಿ ಕಾಪು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.