ಅಮ್ಮೆಂಬಳ(ವಿಶ್ವಕನ್ನಡಿಗ ನ್ಯೂಸ್): ನೊಂದವರಿಗೆ ಬೆಳಕ್ಕಾಗಿ ಮುನ್ನುಗುತ್ತಿರುವ ಹೆಲ್ಪ್ ಲೈನ್ ಅಮ್ಮೆಂಬಳದ ವಾರ್ಷಿಕ ಮಹಾ ಸಭೆಯು ದಿನಾಂಕ 15-6-2020ರ ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ 8ಕ್ಕೆ ಉಬೈದ್ ಬಿ.ಹೆಚ್ ರವರ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಿರಾಜುದ್ದೀನ್ ಅಮ್ಮೆಂಬಳ ದುಆ ನೆರೆವೇರಿಸಿದರು.ಸೇರಿದ ಜನರಿಗೆ ತಂಜೀದ್ ಅಮ್ಮೆಂಬಳ ಸ್ವಾಗತ ಮಾಡಿದರು.ನಂತರ ವಾರ್ಷಿಕ ವರದಿಯನ್ನು, ಮಾಡಿದ ಸಾಂತ್ವನ ಸೇವೆಯನ್ನು ಹೆಲ್ಪ್ ಲೈನ್ ಸಂಚಾಲಕರಾದ ಸಿರಾಜುದ್ದೀನ್ ಅಮ್ಮೆಂಬಳ* ಸದಸ್ಯರ ಮುಂದಿಟ್ಟರು.
ನಂತರ ಮಾತನಾಡಿದ ಹೆಲ್ಪ್ ಲೈನ್ ಸಂಚಾಲಕರಲ್ಲಿ ಒಬ್ಬರಾದ ಉಬೈದ್ ಬಿ.ಹೆಚ್ ನೊಂದವರ ಪಾಲಿಗೆ ಬೆಳಕಾದ ನಮ್ಮ ಸಂಸ್ಥೆಯನ್ನು ಹಾಡಿ ಹೊಗಳಿದರು.ಮುಂದೆ ಇದೇ ರೀತಿಯ ಯೋಜನೆಗಳನ್ನು ಹಾಕಿ ನಮ್ಮ ಸಂಸ್ಥೆಯನ್ನು ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಇದೇ ರೀತಿ ಕೆಲಸ ಕಾರ್ಯಗಳನ್ನು ಮಾಡಿ ನಮ್ಮ ಸಂಸ್ಥೆ ಬಾನೆತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ನಂತರ ನೂತನ ಪದಾಧಿಕಾರಿಗನ್ನು ಆಯ್ಕೆ ಮಾಡಲಾಯಿತು. ಆಧ್ಯಕ್ಷರಾಗಿ ಉಬೈದ್ ಬಿ.ಹೆಚ್,ಉಫಾಧ್ಯಕ್ಷರಾಗಿ ಅಬ್ದುಲ್ ಖಾದರ್ (ಪುತ್ತ), ಪ್ರ ಕಾರ್ಯದರ್ಶಿಯಾಗಿ ಎಂ.ಎಸ್.ಎ. ಸಿರಾಜುದ್ದೀನ್ ಅಮ್ಮೆಂಬಳ,* ಜೊತೆ ಕಾರ್ಯದರ್ಶಿಯಾಗಿ ಪರ್ವೀಝ್ ಅಮ್ಮೆಂಬಳ, ಕೋಶಧಿಕಾರಿಯಾಗಿ ಲತೀಫ್ ಟಿ, ಮೀಡಿಯಾ ಕನ್ವೀನರ್ ಆಗಿ ತಂಜೀದ್ ಅಮ್ಮೆಂಬಳ, ಸ್ವಯಂ ಸೇವಕರಾಗಿ ಅಶ್ರಫ್ B ಹಾಗೂ ಮಂಸೂರು ಅಮ್ಮೆಂಬಳ, ಸಮಾಜ ಸೇವಕರಾಗಿ ನಿಝಾಂ ಹಾಗೂ ನೆಬೀಲ್ ಮುಖ್ಯ ಸದಸ್ಯರಾಗಿ ಶಬೀರ್ ಕೋಟೆ ಹಾಗೂ ರಿಯಾಝ್ ಟಿ ಯವರನ್ನು ಆಯ್ಕೆ ಮಾಡಲಾಯಿತು.
ಕೊನೆಗೆ ಸಂಸ್ಥೆಯ ಸಂಪೂರ್ಣ ಜವಬ್ದಾರಿಯನ್ನು ನೂತನ ಆಡಳಿತದ ಕೈಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ನಮ್ಮೂರಿನ ದಾನಿಯು ಆದ ನಿಶಾರ್ ಕೋಟೆ ಹಾಗೂ ಫಾರೂಕ್ ಕೋಟೆ ಹೆಲ್ಪ್ ಲೈನ್ ಸಂಚಾಲಕರು,ಸದಸ್ಯರು ಭಾಗವಹಿಸಿದ್ದರು.
ಮೀಡಿಯಾ ಹೆಲ್ಪ್ ಲೈನ್ ಅಮ್ಮೆಂಬಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.