(www.vknews.com) : ಸರಕಾರಿ ಶಾಲೆಯ ಉಳಿಸಿ ಬೆಳೆಸುವ ಮತ್ತು ಶಾಲೆಯ ಆರಂಬೋತ್ಸವವನ್ನು ಸ್ವಾಗತಿಸುವ ನಿಟ್ಟಿನಲ್ಲಿ,, ಉತ್ತಮ ಕ್ಯಾಂಪಸ್ ನಿರ್ಮಾಣಕ್ಕಾಗಿ ಸತತ ನಾಲ್ಕು ದಿನಗಳಿಂದ ದ .ಜಿ .ಪಂ .ಹಿರಿಯ .ಉನ್ನತ ಪ್ರಾಥಮಿಕ ಶಾಲೆ ಕೆಮ್ಮಾರ ಇದರ ಪರಿಸರ ಸ್ವಚ್ಚತೆ ಮತ್ತು ಹೂದೋಟ ನಿರ್ಮಾಣದ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
1953 ರಲ್ಲಿ ಪ್ರಾರಂಭಗೊಂಡ ಕೆಮ್ಮಾರ ಶಾಲೆಯ ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಶಾಲೆಯಲ್ಲಿ ಓದಿದ ಲಕ್ಷಾಂತರ ವಿದ್ಯಾವಂತರನ್ನು ನೀಡಿದ ಹೆಗ್ಗಳಿಕೆ ನಮ್ಮೂರ ಕೆಮ್ಮಾರ ಶಾಲೆಗೆ ಇದೆ.
ಇಂದು ಖಾಸಾಗಿ ಶಾಲೆಗಳು ಅಲ್ಲಲ್ಲಿ ತಲೆಯೆತ್ತುವುದು ಮಾತ್ರವಲ್ಲದೇ ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಂಡು ಸರಕಾರಿ ಶಾಲೆಯಲ್ಲಿ ಸಿಗುವ ಶಿಕ್ಷಣದ ಮೌಲ್ಯವನ್ನು ಕುಗ್ಗಿಸುವಂತೆ ಮಾಡುತ್ತಿರುವುದು ಷಡ್ಯಂತ್ರದ ಭಾಗವಾಗಿದೆ.
ಈ ನಿಟ್ಟಿನಲ್ಲಿ ಉತ್ತಮ ಕ್ಯಾಂಪಸ್ ಮತ್ತು ಒಳ್ಳೆಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ಅವಧಿಯಲ್ಲಿ ಕೆಮ್ಮಾರ ಶಾಲೆಯಲ್ಲಿ ಹೆಚ್ಚಿನ ಮಕ್ಕಳು ಓದುವಂತಾಗಲಿ ಎಂಬ ಆಶಯದೊಂದಿಗೆ ನಾಗರಿಕ ಹಿತರಕ್ಷಣಾ ವೇದಿಕೆಯು ಸತತ ನಾಲ್ಕು ದಿನದಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಒಂದು ಕಾರ್ಯದಲ್ಲಿ ಊರಿನ ಹೆಚ್ಚಿನ ಯುವಕರು ಪಾಲ್ಗೊಂಡಿದ್ದು ವಿಶೇಷವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.