ಸರಕಾರ ಮದ್ಯೆ ಪ್ರವೇಶಿಸ ಬೇಕು – ರಾಜ್ಯ ದಾರಿಮಿ ಉಲಮಾ ಒಕ್ಕೂಟ ಅಭಿಮತ
(www.vknews.com) : ಮರಣಹೊಂದಿದವರ ಶರೀರವನ್ನು ಗೌರವಿಸುವುದು ಈತನಕ ನಾಗರಿಕ ಸಮಾಜ ಅನುಸರಿಸಿಕೊಂಡು ಬಂದ ಕ್ರಮವಾಗಿದೆ. ಶತ್ರು ಸೈನ್ಯದ ವ್ಯಕ್ತಿ ಯಾದರೂ ಕೂಡಾ ಮರಣಾನಂತರ ವಿಶೇಷವಾದ ಗೌರವ ತೋರುವುದು ಜಗತ್ತು ಒಪ್ಪಿಕೊಂಡ ನಿಯಮವಾಗಿರುತ್ತದೆ. ಕೋವಿಡ್ -19 ಬಾಧಿಸಿ ಮರಣ ಹೊಂದಿದ ವ್ಯಕ್ತಿ ಯೊಂದಿಗೂ ಕೂಡಾ ಅಷ್ಟೇ ಗೌರವದಿಂದ ವರ್ತಿಸುವುದು ಪ್ರಜ್ಞಾವಂತ ಸಮಾಜದ ಕರ್ತವ್ಯ ವಾಗಿದೆ. ಆದರೆ ಕೆಲವು ಕಡೆ ಶವವನ್ನು ಮಣ್ಣು ಮಾಡುವಾಗ ಅನಾಗರಿಕವಾಗಿ ವರ್ತಿಸುವ ವೀಡಿಯೋ ಗಳು ಸೋಷಿಯಲ್ ಮೀಡಿಯಾ ದಲ್ಲಿ ರವಾನೆ ಯಾಗುತ್ತಿದೆ.
ಆಸ್ಪತ್ರೆಯಲ್ಲಿರುವ ಸಂಧರ್ದಲ್ಲಿ ಬೇಕಾದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಚಿಕಿತ್ಸೆ ನೀಡಲಾಗುತ್ತದೆ. ನಂತರ ಬೇಕಾದ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಶವವನ್ನು ಕವರ್ ಮಾಡಲಾಗುತ್ತದೆ. ಮಾತ್ರವಲ್ಲದೇ ಶವವನ್ನು ಸಾಗಿಸುವವರು ಕೂಡಾ ಎಲ್ಲಾ ರೀತಿಯಲ್ಲಿ ಸಿದ್ದರಾಗಿರುತ್ತಾರೆ. ಹೀಗಿರುವಾಗ ಗುಂಡಿಯ ತನಕ ಬಂದವರು ನಂತರ ಕಳೇಬರವನ್ನು ಯಾಕೆ ಎತ್ತಿ ಬಿಸಾಡುವ ರೀತಿಯಲ್ಲಿ ವರ್ತಿಸುವುದು.? ಇದು ಅನಾಗರಿಕತೆಯ ಪರಮಾವಧಿ ಯಾಗಿದೆ.
ಅದೂ ಅಲ್ಲದೇ ಆ ಕ್ರೌರ್ಯ ವನ್ನು ಸಾಮಾಜಿಕ ಜಾಲತಾಣ ದಲ್ಲಿ ಹರಿದು ಬಿಡುವುದು ಮಾನವತೆಯೊಂದಿಗೆ ತೋರುವ ಅನ್ಯಾಯ ವಾಗಿದೆ. ಈ ಬಗ್ಗೆ ಅಯಾ ಊರಿನ ಜಿಲ್ಲಾಡಳಿತ ಬೇಕಾದ ತುರ್ತು ಕ್ರಮವನ್ನು ಜರಗಿಸಿ ಮೃತರ ಕುಟುಂಬಕ್ಕೆ ಆಗುವ ಸಂಕಟ ಮತ್ತು ನೋವನ್ನು ತಡೆಯುವ ಪ್ರಯತ್ನ ಮಾಡಲು ಸರಕಾರ ಆದೇಶ ನೀಡಬೇಕೆಂದು ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟ ಸರಕಾರವನ್ನು ಒತ್ತಾಯಿಸುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.