ಅಮ್ಚಿನಡ್ಕ (www.vknews.com) : ಎಸ್.ಎಸ್.ಎಫ್ ಮತ್ತು ಎಸ್.ವೈ.ಎಸ್ ಹಾಗೂ ಲಯನ್ಸ್ ಕ್ಲಬ್ ಕಾವು-ಪುತ್ತೂರು ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಆಯುಷ್ಮಾನ್ ಕಾರ್ಡ್” ವಿತರಣಾ ಶಿಬಿರವು ದಿನಾಂಕ 24 ಆಗಸ್ಟ್ 2020 ರಂದು ಅಮ್ಚಿನಡ್ಕ ಬಸ್ ನಿಲ್ದಾಣದ ಮುಂಭಾಗದಲ್ಲಿ ಯಶಸ್ವಿಯಾಗಿ ನಡೆಯಿತು.
ಶಿಬಿರದ ಸಭಾ ಕಾರ್ಯಕ್ರಮವನ್ನು SSF ಕುಂಬ್ರ ಸೆಕ್ಟರ್ ನಾಯಕರಾದ ಹಾಫಿಳ್ ರಂಶೀದ್ ಸಖಾಫಿ ಯವರು ದುಆದೊಂದಿಗೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್ ಪುತ್ತೂರು ವಲಯ ಅಧ್ಯಕ್ಷರಾದ ಶ್ರೀ ರಮೇಶ್ ರೈ ಸಾಂತ್ಯ ಇವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಲಯನ್ಸ್ ಕ್ಲಬ್ ಕಾವು ವಲಯ ಅಧ್ಯಕ್ಷರಾದ ಶ್ರೀ ಹೇಮನಾಥ ಶೆಟ್ಟಿಯವರು ಮಾತನಾಡುತ್ತಾ ಆಯುಷ್ಮಾನ್ ಕಾರ್ಡ್ ಬಗ್ಗೆ ವಿವರಣೆ ನೀಡುವುದರೊಂದಿಗೆ ಲಯನ್ಸ್ ಕ್ಲಬ್ ಹಾಗೂ SSF, SYS ಸಂಘಟನೆಗಳ ಕಾರ್ಯ ಸಾಧನೆಗಳನ್ನು ಚುಟುಕಾಗಿ ಮನದಾಳದಿಂದ ನೆನಪಿಸುತ್ತಾ ಸಂಘಟನೆಗಳ ಅಗತ್ಯತೆ ಬಗ್ಗೆ ವಿವರಿಸಿದರು. SSF ಅಮ್ಚಿನಡ್ಕ ಯುನಿಟ್ ಅಧ್ಯಕ್ಷರಾದ ಹನೀಫ್ ಮಿಸ್ಬಾಹಿ, ಅಮ್ಚಿನಡ್ಕ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ ಖಾದರ್ C.A ಹಾಗೂ SSF, SYS ಮತ್ತು ಲಯನ್ಸ್ ಕ್ಲಬ್ ನಾಯಕರು, ಕಾರ್ಯಕರ್ತರು ಶಿಬಿರದಲ್ಲಿ ಉಪಸ್ಥಿತರಿದ್ದರು. SYS ನಾಯಕರಾದ ಅಬ್ದುಲ್ ಖಾದರ್ ಬದಿಯಡ್ಕ ಇವರು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಶ್ರೀ ದಿವ್ಯನಾಥ ಶೆಟ್ಟಿಯವರು ಆಶಕ್ತರಿಗೆ ತೆಂಗಿನ ಸಸಿಯನ್ನು ಉಚಿತವಾಗಿ ವಿತರಿಸಿದರು. ಸುಮಾರು 250 ಕ್ಕಿಂತ ಹೆಚ್ಚು ಫಲಾನುಭವಿಗಳು ಆಯುಷ್ಮಾನ್ ಕಾರ್ಡ್ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ನೋಂದಾಯಿಸಿ ಸ್ಥಳದಲ್ಲೇ ಕಾರ್ಡನ್ನು ಮುದ್ರಿಸಿ ನೀಡಲು ನಿಝಾಮ್ ಮತ್ತು ಸರಫುದ್ದೀನ್ ಸಹಕರಿಸಿದರು.
ಕಾರ್ಯಕ್ರಮದ ಯಶಸ್ವಿಗೆ ಲಯನ್ಸ್ ಕ್ಲಬ್ ಕಾವು-ಪುತ್ತೂರು ಹಾಗೂ SSF, SYS ಅಮ್ಚಿನಡ್ಕ ಶಾಖಾ ಕಾರ್ಯಕರ್ತರು ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.