(www.vknews.com) : ಜಮಾಅತ್ ಸಬಲೀಕರಣದ ಉದ್ದೇಶವನ್ನು ಪ್ರಾಯೋಗಿಕ ಗೊಳಿಸುವ ಪ್ರಯತ್ನವೊಂದು ಅಖಾಡಮಿಕ್ ಪ್ರೋಗ್ರಾಂ ಸಪೂರ್ಟ್ (APS ) ಸಂಸ್ಥೆಯ ಮೂಲಕ ವಿಟ್ಲ ಸಮೀಪದ ಮರಕ್ಕಣಿ ಬದರ್ ಹುಸೈನ್ ಜುಮ್ಮಾ ಮಸೀದಿಯಲ್ಲಿ ಆರಂಭವಾಯಿತು. ರಹ್ಮಾನಿಯಾ ಜುಮ್ಮಾ ಮಸೀದಿ ಮರಕ್ಕಣಿ, ಅಡ್ಕಸ್ಥಳ ಮಸೀದಿ, ಅಢ್ಯನಡ್ಕ ಮಸೀದಿ ಸೇರಿದಂತೆ, ಮೂರು ಜಮಾಅತ್ ವ್ಯಾಪ್ತಿಯ ವಿಧ್ಯಾರ್ಥಿಗಳನ್ನು ಮೊನಿಟರ್ ಮಾಡುವ, ಮಾರ್ಗದರ್ಶನ ಕೊಡುವ ಮತ್ತು ಅವರಿಗೆ ಸರಿಯಾದ ಗುರಿ ನಿಶ್ಚಯಿಸಿ ಪ್ರೋತ್ಸಾಹಿಸುವ ಆಪ್ಸ್ ಪೌಂಡೇಶನ್ ನ ಹತ್ತು ವರ್ಷದ ದೂರದೃಷ್ಠಿಯ ಯೋಜನೆಯ ಉದ್ಘಾಟನೆ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ಹತ್ತು ವರ್ಷದ ಗುರಿಯನ್ನು ಶಿಕ್ಷಣ ತಜ್ಞರಾದ ರಝಾಕ್ ಮಾಸ್ಟರ್ ರವರು ವಿವರಿಸಿದರು.
ಮೂರು ಜಮಾಅತ್ ಕಮೀಟಿ ಪ್ರಮುಖರು, ಸಂಘ ಸಂಸ್ಥೆ ಮತ್ತು ಸಾಮಾಜಿಕ ಸೇವಾ ಕಾರ್ಯಕರ್ತರನ್ನು ಸೇರಿಸಿ ಇಂದು ಯೋಜನೆಯ ಉದ್ದೇಶ, ಪ್ರಯತ್ನ ಮತ್ತು ಫಲಿತಾಂಶದ ಗುರಿಯನ್ನು ವಿವರಿಸಿ ಕೊಡಲಾಯಿತು. ಜಮಾಅತ್ ವ್ಯಾಪ್ತಿಯ ವಿಧ್ಯಾರ್ಥಿಗಳ ಡಾಟಾ ಸಂಗ್ರಹಿಸುವುದು, ಆನಂತರ ಅವರ ಎಸೆಸ್ ಮೆಂಟ್ ರಿಪೂರ್ಟ್ ತಯಾರಿಸುವುದು, ಅವರ ಹೆತ್ತವರ ಜವಾಬ್ದಾರಿಯನ್ನು ವಿವರಿಸುವುದು, ವಿಧ್ಯಾರ್ಥಿಗಳಿಗೆ ಹಂತಹಂತವಾಗಿ ಮಾರ್ಗದರ್ಶನ ಮತ್ತು ಸೂಚನೆಗಳನ್ನು ಕೊಡುವುದು, ಸೇರಿದಂತೆ ವಿಧ್ಯಾರ್ಥಿಗಳು ಡ್ರಾಪೌಟ್ ಆಗದಂತೆ ತಡೆದು, ಅವರ ಬೇಡಿಕೆಗೆ ಸ್ಪಂಧಿಸುವುದನ್ನು ಸಂಸ್ಥೆ ಮಾಡಲಿದೆ. ಇದು ಜಮಾಅತ್ ವ್ಯಾಪ್ತಿಯ ಎನ್. ಆರ್. ಐ ಗಳು, ಸಂಘ ಸಂಸ್ಥೆಯ ಪ್ರಮುಖರು, ಜಮಾಅತ್ ಕಮೀಟಿ ಮತ್ತು ಸಾಮಾಜಿಕ ಸೇವಾ ಕಾರ್ಯಕರ್ತರು ಸೇರಿ ನಡೆಸುವಂತ ಯೋಜನೆಯಾಗಿದ್ದು, ಭವಿಷ್ಯದ ತಲೆಮಾರನ್ನು ರೂಪಿಸುವ ಪ್ರಯತ್ನವೂ ಆಗಿದೆ.
ಇಂದಿನ ಕಾರ್ಯಕ್ರಮದಲ್ಲಿ, ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಅಭಿನಂದಿಸಿ ಅವರಿಗೆ ಪ್ರೋತ್ಸಾಹಿಸಲಾಯಿತು. ಎಸ್.ಎಸ್.ಎಲ್ ಸಿಯಲ್ಲಿ ಅನುತೀರ್ಣರಾದ ಜಮಾಅತ್ ವ್ಯಾಪ್ತಿಯ ವಿಧ್ಯಾರ್ಥಿಗಳು ಡ್ರಾಪೌಟ್ ಆಗದಂತೆ ಅಂಕಿ ಅಂಶಗಳನ್ನು ಸಂಗ್ರಹಿಸಿ, ಅವರನ್ನು ಮುಂದಿನ ದಿನಗಳಲ್ಲಿ ಪರೀಕ್ಷೆಗೆ ತರಬೇತಿಗೊಳಿಸಲು ನಿರ್ಧರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೊ, ಹೈದರ್ ಅಲಿಯವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸಾಮಾಜಿಕ ಕಾರ್ಯಕರ್ತ ಬದ್ರುದ್ದೀನ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಮುಂದಿನ ದಿನದ ಯೋಜನೆಯ ಮಾಹಿತಿ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.