ಕಾರ್ಕಳ(ವಿಶ್ವಕನ್ನಡಿಗ ನ್ಯೂಸ್): ಪ್ರಸಿದ್ಧ ವಾಗ್ಮಿ ಎಸ್.ವೈ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್ ಅವರು ಪವಿತ್ರ ರಬೀಉಲ್ ಅವ್ಬಲ್ ತಿಂಗಳಲ್ಲಿ ಪ್ರಾರಂಭಿಸಿ ನಲವತ್ತ ಐದು ಕಂತುಗಳಲ್ಲಿ ಮುಗಿಸಿದ ಬ್ಯಾರಿ ಭಾಷೆಯ ಬುರ್ದಾ ಬೈತ್ ವ್ಯಾಖ್ಯಾನದ ಯೂ ಟ್ಯೂಬ್ ಲಿಂಕ್ನ ಪ್ರಕಾಶನ ಕಾರ್ಯಕ್ರಮವು ಕಾರ್ಕಳ ಬಂಗ್ಳೆಗುಡ್ಡೆ ತ್ವೈಬಾ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.
ಪ್ರವಾದಿ ಕುಟುಂಬಾಂಗ ಸಯ್ಯಿದ್ ಅಲವಿ ಫಝಲ್ ಅಲ್ ಜಿಫ್ರಿ ತಂಙಳ್ ಮಂಬುರಂ ಅವರು ಪ್ರಕಾಶನ ನಿರ್ವಹಿಸಿದರು. ಡಾ. ಝೈನೀ ಕಾಮಿಲ್ ಭಾಷಣ ಮಾಡಿದರು.
ಕಾರ್ಕಳ ತಾಲೂಕು ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸುಲೈಮಾನ್ ಸಅದಿ ಅಲ್ ಅಫ್ಳಲಿ,ಎಸ್.ವೈ.ಎಸ್.ಜಿಲ್ಲಾಧ್ಯಕ್ಷ ಮುಹ್ಯಿದ್ದೀನ್ ಹಾಜಿ ಗುಡ್ವಿಲ್, ಕಾರ್ಯದರ್ಶಿ ಅಡ್ವಕೇಟ್ ಹಂಝತ್, ರಾಜ್ಯ ಸಮಿತಿ ಸದಸ್ಯ ಕಲ್ಕಟ್ಟ ಅಬ್ದುಲ್ ರಹ್ಮಾನ್ ರಝ್ವಿ, ತ್ವಯ್ಬಾ ಗಾರ್ಡನ್ ಪ್ರಿನ್ಸಿಪಾಲ್ ಕಿಲ್ಲೂರು ಶರೀಫ್ ಸಅದಿ ಮುಂತಾದವರು ಉಪಸ್ಥಿತರಿದ್ದರು. “ಬುಕ್ ಮಿಷನ್” ಸಂಯೋಜಕ ಝೈನುಲ್ ಆಬಿದ್ ಸಖಾಫಿ ಮಾಗುಂಡಿ ಕಾರ್ಯಕ್ರಮ ನಿರ್ವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.