(www.vknews.com) : ವಿಜ್ಞಾನ ,ವಿನಯ,ಸೇವೆ ಎಂಬೀ ಘೋಷಣೆಯೊಂದಿಗೆ ಶೈಖುನಾ ಶಂಸುಲ್ ಉಲಮಾ ಖ.ಸಿ ರಹೀಸುಲ್ ಮುಹಕ್ಕಿಕೀನ್ ಕಣ್ಣಿಯತ್ತುಸ್ತಾದ್ ಖ.ಸಿ ಮೊದಲಾದ ಉಲಮಾ ,ವಲಿಯ್ಯ್ ಗಳ ಸಾನಿಧ್ಯದಲ್ಲಿ ಆಸ್ತಿತ್ವಕ್ಕೆ ಬಂದ ಎಸ್ಕೆ ಎಸ್ಸೆಸ್ಸೆಪ್ ಎಂಬ ವಿದ್ಯಾರ್ಥಿ ,ಯುವಜನ ಸಂಘಟನೆ ಹುಟ್ಟು ಪಡೆದು ಕೆಲವೇ ಕೆಲವು ವರ್ಷಗಳಲ್ಲಿ ಅದು ಗಳಿಸಿದ ಜನಪ್ರಿಯತೆ ಇದೆಯಲ್ಲಾ, ಈ ಮಟ್ಟದಲ್ಲಿ ಬಹುಶಃ ಬೇರೆ ಯಾವ ಸಂಘಟನೆಗೂ ಅದು ದಕ್ಕಿರಲಿಕ್ಕಿಲ್ಲ. ಇದು ಸಂಘಟನಾ ಕ್ಷೇತ್ರದಲ್ಲಿ ಒಂದು ವಿಸ್ಮಯವೇ ಸರಿ.
ಈ ಸಂಘಟನೆ ಜನ್ಮ ತಾಳಿದಂದಿನಿಂದ ಇಲ್ಲಿ ತನಕ ಇದರ ಕಾರ್ಯಕರ್ತ ಪಡೆ ಬಹುಜನರ ಮಧ್ಯೆ ಒಳಿತಿನ ವಾಹಕರಾಗಿ ,ಜನ ಸೇವಕರಾಗಿ,ಸೌಹಾರ್ಧತೆಯ ಪ್ರತೀಕಗಳಾಗಿ,ಜ್ಞಾನದ ಪ್ರಸಾರಕರಾಗಿ,ವಿನಯದ ಸಾಕಾರ ಮೂರ್ತಿಗಳಾಗಿ ಗುರುತಿಸಲ್ಪಡುತ್ತಿರುವುದು ನಿರಾಕರಿಸಲಾಗದ ಮತ್ತು ಅಭಿಮಾನ ಪಡಲು ಅರ್ಹವಾದಂತಹ ಸತ್ಯವಾಗಿದೆ.
ಲಕ್ಷಾಂತರ ಕಾರ್ಯಕರ್ತನ್ನು ಹೊಂದಿದ ಈ ಸಂಘಟನೆಗೆ ವಿಖಾಯ,ಕ್ಯಾಂಪಸ್ ವಿಂಗ್,ಟ್ರಂಡ್ ಮೊದಲಾದ ಹಲವು ಉಪ ಶಾಖೆಗಳಿದ್ದು ಈ ಎಲ್ಲಾ ಸಂಘಟನೆಗಳು ಧಾರ್ಮಿಕ ,ಶೈಕ್ಷಣಿಕ,ಸಾಹಿತ್ಯಿಕ,ಸೇವಾ ರಂಗದಲ್ಲಿ ಎಲ್ಲರನ್ನೂ ನಿಬ್ಬೆರಗಾಗಿಸುಂತಹ ರೀತಿಯಲ್ಲಿ ಕಾರ್ಯೋನ್ಮುಖವಾಗಿದೆ. ಇತರ ಧರ್ಮೀಯರ ಮತ್ತು ಅಧಿಕಾರಿ ವರ್ಗದವರ ಪ್ರಶಂಸೆಗೂ ಕೂಡಾ ಪಾತ್ರವಾಗಿದೆ.
ಕೇರಳದಲ್ಲಿ ಹುಟ್ಟು ಪಡೆದ ಸಂಘಟನೆಯಾದರೂ ಕೇರಳದ ಸೀಮೆ ದಾಟಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈ ಸಂಘಟನೆ ಸಕ್ರಿಯವಾಗಿದ್ದು ಯುವಜನತೆಯ ವ್ಯಕ್ತಿತ್ವ ವಿಕಸನಕ್ಕೆ ಇದು ತನ್ನದೇ ಆದ ಕೊಡುಗೆ ನೀಡುತ್ತಿದೆ. ನಮ್ಮ ಮಧ್ಯೆ ಹಲವು ನಾಯಕರ ಸೃಷ್ಟಿಗೂ ಇದು ಕಾರಣೀಭೂತವಾಗಿದೆ.
ಇದರ ಗರಡಿಯಲ್ಲಿ ಪಳಗಿದ ಯವ ಪಡೆ ಇದರಿಂದ ಗಳಿಸಿದ ತಮ್ಮ ಅನುಭವವನ್ನು ಇನ್ನು ಮುಂದಿನ ವರ್ಷಗಳಲ್ಲಿ ಇಡೀ ಕರ್ನಾಟಕದ ಜನತೆಗೆ ಧಾರೆ ಎರೆದು ಕೊಟ್ಟು ಧಾರ್ಮಿಕ ,ಸೇವಾ ಕ್ಷೇತ್ರವನ್ನು ಇನ್ನಷ್ಟು ಬಲ ಪಡಿಸುವರು ಎಂಬುದನ್ನು ನಿರೀಕ್ಷಿಸ ಬಹುದಾಗಿದೆ.
ಸ್ವಾಭಿಮಾನದ ಯುವ ಪಡೆ ತಮ್ಮ ನಾಯಕರನ್ನು ತಾವೇ ಸೃಷ್ಟಿ ಮಾಡಿದರೆ ಅದರಿಂದ ಸಂಘಟನೆಗಳು ಬಹಳಷ್ಟು ಕ್ರಿಯಾಶೀಲತೆ ಪಡೆದು ಕಾರ್ಯಕರ್ತರಿಗೆ ಹೊಸ ಹುರುಪು ದೊರಕುತ್ತದೆ.
ಈ ನಿಟ್ಟಿನಲ್ಲಿ ಕೇರಳದ ಪ್ತಖ್ಯಾತ ಸೈಯ್ಯಿದ್ ಕುಟುಂಬ ಪಾಣಕ್ಕಾಡ್ ಕೊಡಪ್ಪಣಕ್ಕಲ್ ತರವಾಡಿನ ಹಮೀದಲಿ ಶಿಹಾಬ್ ತಂಙಳ್ ಸಾರಥ್ಯದಲ್ಲಿ ಕೇರಳ ಘಟಕ ಕಾರ್ಯ ನಿರ್ವಹಿಸುತ್ತಿದ್ದರೆ ಕರ್ನಾಟಕದಲ್ಲಿ ತನ್ನ ಸಣ್ಣ ಪ್ರಾಯದಲ್ಲೇ ಪ್ರಭುದ್ದತೆಯನ್ನು ಮತ್ತು ವಿನಯ ಶೀಲತೆಯನ್ನು ಮೈಗೂಡಿಸಿ ಕೊಂಡು ಕನ್ನಡ ಭಾಷಣದಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರವಾದ ಅನೀಸ್ ಕೌಸರಿಯವರು ಇದರ ಸಾರಥ್ಯವನ್ನು ವಹಿಸಿ ಕೊಂಡು ಕಾಲಾ ಕಾಲದಲ್ಲಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ ಯುವಜನರ ಮೆಚ್ವುಗೆ ಪಾತ್ರರಾಗಿದ್ದಾರೆ.
ಇದೀಗ ಸಂಘಟನೆಯ ಕೇಂದ್ರೀಯ ನಾಯಕರ ಸಾರಥ್ಯದಲ್ಲಿ ಹತ್ತು ಹಲವು ಗುರಿಗಳೊಂದಿಗೆ ನಡೆಸಲ್ಪಡುತ್ತಿರುವ ಮುನ್ನಡೆ ಯಾತ್ರೆ ಈಗಾಗಲೇ ಕೇರಳ ರಾಜ್ಯದಲ್ಲಿ ಹೊಸ ತರಂಗವನ್ನೇ ಸೃಷ್ಟಿಸಿದೆ.
ಈ ಮುನ್ನಡೆ ಯಾತ್ರೆಯನ್ನು ನಮ್ಮ ದ ಕ ಜಿಲ್ಲೆಯ ಕಾರ್ಯಕರ್ತರು ಇದೇ ಜನವರಿ 11 ರಂದು ಅದ್ದೂರಿಯಾಗಿ ಬರಮಾಡಿ ಕೊಳ್ಲಲು ಸಿದ್ದತೆ ನಡೆಸಿದ್ದು ಒಂದು ಕಾಲದಲ್ಲಿ ಶಂಸುಲ್ ಉಲಮಾ ರ ಅ ರವರನ್ನು ಬರಮಾಡಿ ಕೊಂಡು ಉಜ್ವಲ ಸ್ವಾಗತ ಕೋರಲಾಗುತ್ತಿದ್ದ ಉಳ್ಳಾಲದ ಮಣ್ಣಿನಲ್ಲಿ ಮತ್ತು ಜಿಲ್ಲೆಯ ಸಮಸ್ತದ ರಾಜಧಾನಿ ಎಂದೇ ವಿಶ್ಲೇಷಿಸಲ್ಪಡುತ್ತಿರುವ ಪುತ್ತೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ.
ಹಾಗೇಯೇ ನೆರೆಯ ಜಿಲ್ಲೆ ಕೊಡಗಿನ ನೆಲ್ಯಹುದಿಕೇರಿಯಲ್ಲು ಕೂಡಾ ಸ್ವಾಗತ ಕಾರ್ಯಕ್ರಮ ನಡೆಯಲಿದ್ದು ಈ ಎಲ್ಲಾ ಪ್ರಮುಖ ಕಾರ್ಯಕ್ರಮ ಸಮಸ್ತದ ಅಭಿಮಾನಿಗಳಲ್ಲಿ ಹೊಸ ಚೈತನ್ಯ ವನ್ನು ತಂದು ಕೊಟ್ಟು ಸಮಸ್ತ ತನ್ನ ಚೈತ್ರ ಯಾತ್ರೆಯನ್ನು ಮುಂದುವರಿಸಲು ಸಹಕಾರಿಯಾಗಲಿದೆ.
– ಎಸ್ ಬಿ ದಾರಿಮಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.