ಕುವೈತ್(ವಿಶ್ವಕನ್ನಡಿಗ ನ್ಯೂಸ್): ಕೆಸಿಎಫ್ ಸಿಟಿ ಸೆಕ್ಟರ್ ಇದರ ಮಹಾಸಭೆ ಇಸ್ಮಾಯಿಲ್ ಅಯ್ಯಂಗೇರಿ(ಕೊಡಗು) ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಆಹ್ಲುಸುನ್ನತಿ ವಲ್ ಜಮಾತಿನ ನೈಜವಾದ ಆದರ್ಶವನ್ನು ಸಂಘದ ಕಾರ್ಯಕರ್ತರಿಗೆ inc ನಾಯಕರಾದ ಹುಸೈನ್ ಮುಸ್ಲಿಯಾರ್ ಎರುಮಾಡ್ ಭೋಧನೆ ಮಾಡಲಾಯಿತು.
ಉಸ್ತಾದರ ದುಆದ ಮೂಲಕ ಸಭೆಗೆ ಅಧಿಕೃತ ಚಾಲನೆ ನೀಡಲಾಯಿತು. ಪ್ರಾರಂಭದಲ್ಲಿ ಹೈದರ್ ಉಚ್ಚಿಲ ಸ್ವಾಗತ ಭಾಷಣವನ್ನು ನಡೆಸಿದರು. ಪ್ರ.ಕಾರ್ಯದರ್ಶಿ ಹೈದರ್ ಉಚ್ಚಿಲ ವರ್ಷದ ರಿಪೋರ್ಟ್ ಮತ್ತು ಲೆಕ್ಕ ಪತ್ರ ವಾಚಿಸಿದರು.ಪ್ರಸ್ತುತ ಪತ್ರವನ್ನು ಸಭೆ ಅಂಗೀಕರಿಸಿ , ನಂತರ ಹೊಸ ಕಮಿಟಿಯನ್ನು ಆರಿಸುವ ಮೇಲುಸ್ತುವಾರಿಯನ್ನು ರಾಷ್ಟ್ರೀಯ ಸಮಿತಿ ನಾಯಕರು ವಹಿಸಿಕೊಂಡರು.
ನೂತನ ಸಮಿತಿಯ ಅಧ್ಯಕ್ಷರಾಗಿ ಇಸ್ಮಾಯಿಲ್ ಅಯ್ಯಂಗೇರಿ (ಕೊಡಗು) ,ಉಪಾಧ್ಯಕ್ಷರಾಗಿ ,ಪ್ರಧಾನ ಕಾರ್ಯದರ್ಶಿಯಾಗಿ ಹೈದರ್ ಉಚ್ಚಿಲ , ಜೊತೆ ಕಾರ್ಯದರ್ಶಿಯಾಗಿ ,ಕೋಶಾಧಿಕಾರಿಯಾಗಿ ಜಮಾಲುದ್ದೀನ್ ಮಣಿಪುರ ಸಂಘಟನಾ ಅಧ್ಯಕ್ಷ ರಾಗಿ ಇಬ್ರಾಹಿಂ ಕಾಯರ್. ಸಹ.ಕಾರ್ಯದರ್ಶಿ. ಇಲ್ಯಾಸ್ ಮೊಂಟುಗೋಳಿ .ಶಿಕ್ಷಣ ವಿಬಾಗದ ಅಧ್ಯಕ್ಷ ರಾಗಿ ಬಶೀರ್ ಸಕಾಫಿ ಕೊಟ್ಟಮುಡಿ (ಕೊಡಗು) ಸಹ. ಕಾರ್ಯದರ್ಶಿ. ರಹಿಮ್ ಕ್ರಶ್ನಪುರ. ಸಾಂತ್ವನ ವಿಬಾಗ ಅಧ್ಯಕ್ಷ ರಾಗಿ.ಯುಸಫ್ ಮಂಚಗಲ್. ಸಹ ಕಾರ್ಯದರ್ಶಿ ಸಲಾಂ ಮಣಿಪುರ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ. ಅಬ್ಬಾಸ್ ಬಳಂಜೆ. ಸೌಕತ್ ಶಿರ್ವ. ಶರೀಫ್ ಕನ್ಯಾನ. ಅನ್ವರ್ ವಿಟ್ಲ. ಹುಸೈನ್ ತಿಂಗಳಾಡಿ. ಖಾದರ್ ಮಣಿಪುರ. ಸರಫುದ್ದಿನ್ ಕಾಪು. ಅರಿಫ್ ಕೊಳಕೆ. ರಫೀಕ್ ಜನ್ಸ್ ಲೇ .ರಶೀದ್ ಮಣಿಪುರ. ಅಜೀಜ್ ತಿಂಗಳಾಡಿ. ಅಬೂಬಕ್ಕರ್ ಎಸ್ ಕೇರೆ. ಹನೀಫ್ ಚೇರಿಯಪರಂಬು(ಕೊಡಗು).ಬಶೀರ್ ಗೋಣಿಕೊಪ್ಪ (ಕೊಡಗು) ಆರಿಸುವ ಮೂಲಕ ಹೊಸ ಕಮಿಟಿಯನ್ನು ಜಾರಿಗೆ ತರಲಾಯಿತು.
ಹೊಸ ಕಮಿಟಿಯನ್ನು ಉದ್ದೇಶಿಸಿ ಕೆ.ಸಿ.ಎಫ್ inc ಯ ಸಂಘಟನಾ ಕಾರ್ಯದರ್ಶಿ ಹುಸೈನ್ ಮುಸ್ಲಿಯಾರ್ ಮಾತನಾಡಿದರು ನಂತರ ಮೂರು ಸ್ವಲಾತಿನೊಂದಿಗೆ ಸಭೆಯೂ ಮುಕ್ತಾಯ ಗೊಂಡಿತು..
KCF ರಾಷ್ಟ್ರೀಯ ಸಮಿತಿ ಕುವೈತ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.