(ವಿಶ್ವ ಕನ್ನಡಿಗ ನ್ಯೂಸ್) ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈ ಎಸ್) ರಾಜ್ಯ ಸಮಿತಿ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡ “ಇಜ್ತಿನಾಬ್-90” ಎಂಬ ಅಭಿಯಾನದ ಉದ್ಘಾಟನಾ ಸಮಾರಂಭವು ಬಂಟ್ವಾಳ ಆಲಡ್ಕ ದಲ್ಲಿರುವ ಎಸ್. ಎಸ್. ಆಡಿಟೋರಿಯಂನಲ್ಲಿ ಎಸ್ ವೈ ಎಸ್ ರಾಜ್ಯಾಧ್ಯಕ್ಷ ಬಹು ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಅಭಿಯಾನವನ್ನು ಉದ್ಘಾಟಿಸಿದರು “ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿ” ಎಂಬ ಘೋಷಣೆಯೊಂದಿಗೆ ಇಜ್ತಿನಾಬ್-90 ಎಂಬ ಹೆಸರಲ್ಲಿ ಜಾಗೃತಿ ಸಭೆಗಳು 2021 ಮಾರ್ಚ್ 13 ರಿಂದ ಜೂನ್ 11 ರ ತನಕ 90 ದಿನಗಳ ಕಾರ್ಯಕ್ರಮ ರಾಜ್ಯದ ಸರ್ವ ಸೆಂಟರ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರ ಉದ್ಘಾಟನಾ ಸಮಾರಂಭದಲ್ಲಿ ‘ನೂತನವಾದ’ ಎಂಬ ವಿಷಯದಲ್ಲಿ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ತೋಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ, ‘ರಾಜಕೀಯ ಅರಾಜಕತೆ’ ಎಂಬ ವಿಷಯದಲ್ಲಿ ಸುನ್ನೀ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ‘ಮಾದಕ ದ್ರವ್ಯಗಳು ಮತ್ತು ಮದುವೆ ಕಾರ್ಯಗಳ ಅನಾಚಾರಗಳು’ ಎಂಬ ವಿಷಯದಲ್ಲಿ ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ವಿಚಾರ ಮಂಡಿಸಿದರು.
ಅಸ್ಸಯ್ಯಿದ್ ಜಮಲುಲ್ಲೈಲು ತಂಙಳ್ ಮಾರ್ನಳ್ಲಿ ಹಾಸನ,ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ,ಡಿ.ಕೆ ಉಮರ್ ಸಖಾಫಿ ಕಂಬಳಬೆಟ್ಟು, ಗುಡ್ವಿಲ್ ಮೊಯ್ದಿನ್ ಹಾಜಿ ಉಡುಪಿ, ಯೂಸುಫ್ ಹಾಜಿ ಚಿಕ್ಕಮಗಳೂರು, ಬಶೀರ್ ಮದನಿ ಬೆಂಗಳೂರು, ಅಬ್ದುಲ್ ಹಫೀಳ್ ಸಅದಿ ಕೊಡಗು,ಸಿ ಎಚ್ ಮುಹಮ್ಮದ್ ಅಲಿ ಸಖಾಫಿ ಅಶ್ಆರಿಯ್ಯ, ಅಬೂಬಕ್ಕರ್ ಸ ಅದಿ ಮಜೂರು,,ಕೆ ಪಿ ಅಬೂಬಕ್ಕರ್ ಚಿಕ್ಕಮಗಳೂರು ಹಾಗೂ ಜಿಲ್ಲಾ, ಸೆಂಟರ್ ಸಮಿತಿಗಳ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ದಅವಾ ಕಾರ್ಯದರ್ಶಿ ಗಳು ಈ ಕ್ಯಾಂಪ್ ನಲ್ಲಿ ಭಾಗವಹಿಸಿದ್ದರು.
ಈವೆಂಟ್ ಕಾರ್ಯದರ್ಶಿ ಅಶ್ರಫ್ ಕಿನಾರ ಸ್ವಾಗತಿಸಿ ವಂದಿಸಿದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.