( ವಿಶ್ವ ಕನ್ನಡಿಗ ನ್ಯೂಸ್) ಎಸ್ ವೈ ಎಸ್ ಜಿಲ್ಲಾ ವೆಸ್ಟ್ ವತಿಯಿಂದ ಇತ್ತೀಚೆಗೆ ನಿಧನರಾದ ಸುನ್ನೀ ಅಧ್ಯಾಪಕರ ಒಕ್ಕೂಟ ರಾಜ್ಯಾಧ್ಯಕ್ಷ ರಾಗಿದ್ದ ಆತೂರು ಸಅದ್ ಮುಸ್ಲಿಯಾರ್ ಅನುಸ್ಮರಣಾ ಕಾರ್ಯಕ್ರಮ ಮಂಗಳೂರಿನಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈಎಸ್ ಎಸ್ ಜಿಲ್ಲಾಧ್ಯಕ್ಷ ಸಿ.ಎಚ್ ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯ ವಹಿಸಿದರು.
ಕಾರ್ಯಕ್ರಮವನ್ನು ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೋಶಾಧಿಕಾರಿ ಬಶೀರ್ ಹಾಜಿ,ಕುಂಬ್ರ, ರಾಜ್ಯನಾಯಕರಾದ ಹನೀಫ್ ಹಾಜಿ ಉಳ್ಳಾಲ,ಉಮರ್ ಮಾಸ್ಟರ್ ಕೋಟೆಕಾರ್, ಕೆ.ಇ.ರಝ್ವಿ ಸಾಲೆತ್ತೂರು, ಜಿಲ್ಲಾ ಉಪಾಧ್ಯಕ್ಷ ಬಾವಾ ಫಕ್ರುದ್ದಿನ್ ಕೃಷ್ಣಾಪುರ ಜಿಲ್ಲಾ ನಾಯಕರಾದ ಇಸ್ಮಾಯಿಲ್ ಕಿನ್ಯ, ಬದ್ರುದ್ದೀನ್ ಅಝ್ಹರಿ, ಅಬ್ದುರ್ರಹ್ಮಾನ್ ಮದನಿ ಜೆಪ್ಪು,ಕೆ.ಎಂ ಫಾರೂಕ್ ಕೆ.ಸಿ ರೋಡ್ ಲುಕ್ಮಾನಿ ಉಸ್ತಾದ್,ಬಶೀರ್ ಮದನಿ ಕೂಳೂರು, ಅಬ್ದುಲ್ ರಝಾಕ್ ಮದನಿ,ಇಸ್ಹಾಕ್ ಝುಹ್ರಿ ,ಡಿಎನ್ ಹಮೀದ್ ಮದನಿ ಉಮರುಲ್ ಫಾರೂಕ್ ಶೇಡಿಗುರಿ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.