ಬೆಳ್ತಂಗಡಿ: (ವಿಶ್ವ ಕನ್ನಡಿಗ ನ್ಯೂಸ್) ಮರ್ಹೂಂ ಇಸ್ಮಾಯಿಲ್ ಸ್ಮರಣಾರ್ಥ ಹಮ್ಮಿಕೊಂಡ ರಕ್ತದಾನ ಶಿಬಿರ ಎಸ್ಸೆಸ್ಸೆಫ್ ಅಳಕ್ಕೆ ಶಾಖೆ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಲೇಡಿಗೋಶನ್ ಆಸ್ಪತ್ರೆ ಹಾಗೂ ಎಸ್ಸೆಸ್ಸೆಫ್ ಬ್ಲಡ್ ಸೈಬೋ ಸಹಭಾಗಿತ್ವದಲ್ಲಿ ಮಾ.13ರಂದು ಅಳಕ್ಕೆ ಸಿರಾಜುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು.
ಜಮಾಅತ್ ಖತೀಬ್ ಡಿ.ಎಂ ಅಬ್ದುರ್ರಹ್ಮಾನ್ ಸಖಾಫಿ ದುಆ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಮುಹಮ್ಮದ್ ಮಿಸ್ಬಾಹಿ ಮರ್ದಾಳ ಉದ್ಘಾಟನೆಗೈದರು. ಡಾ. ಪ್ರವೀಣ್ ಪ್ರಾಸ್ತಾವಿಕ ಭಾಷಣ ಮಾಡಿದರು. ಡಿ.ಎಂ ಅಬ್ದುರ್ರಹ್ಮಾನ್ ಸಖಾಫಿ ನಾವೂರು ಅನುಸ್ಮರಣಾ ಭಾಷಣ ಮಾಡಿದ ಬಳಿಕ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಿರಾಜುಲ್ ಇಸ್ಲಾಂ ಮದ್ರಸ ಸದರ್ ಮುಅಲ್ಲಿಮ್ ಮುಸ್ತಫಾ ಹಿಮಮಿ ಪರಪ್ಪು, ಕುಪ್ಪೆಟ್ಟಿ ರೇಂಜ್ ಪ್ರಧಾನ ಕಾರ್ಯದರ್ಶಿ ನೌಷಾದ್ ಸಅದಿ, ನೆಕ್ಕಿಲ್ ಮುಅಲ್ಲಿಂ ಅಬ್ದುರ್ರಝಾಖ್ ಮದನಿ, ಬೋವು ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಎಮ್, ಉಪ್ಪಿನಂಗಡಿ ಎಸ್.ಎಂ.ಎ ರೀಜಿನಲ್ ಕೋಶಾಧಿಕಾರಿ ಆದಂ ಕೆ, ಎಸ್ಸೆಸ್ಸೆಫ್ ಮೂರುಗೋಳಿ ಸೆಕ್ಟರ್ ಅಧ್ಯಕ್ಷ ಫಿರೋಝ್ ಮುಈನಿ ಅಸ್ಸಅದಿ, ಎಸ್ಸೆಸ್ಸೆಫ್ ಅಳಕ್ಕೆ ಶಾಖಾಧ್ಯಕ್ಷ ನಝೀರ್ ಇಂಡಿಯನ್, ಪ್ರಧಾನ ಕಾರ್ಯದರ್ಶಿ ಉಬೈದ್, ಕೋಶಾಧಿಕಾರಿ ಫಾರೂಖ್ ಎನ್, ಸೆಕ್ಟರ್ ಕಾರ್ಯದರ್ಶಿ ಶಾಹುಲ್ ಪಿ.ಕೆ, ಉಪ್ಪಿನಂಗಡಿ ಡಿವಿಷನ್ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಪದ್ಮುಂಜ, ಡಿವಿಷನ್ ಪಬ್ಲಿಕೇಷನ್ ಕನ್ವೀನರ್ ಉಬೈದುಲ್ಲಾ ಬೋವು, ಸೆಕ್ಟರ್ ಉಪಾಧ್ಯಕ್ಷ ಲತೀಫ್ ಸಅದಿ, ಕ್ಯಾಂಪಸ್ ಕಾರ್ಯದರ್ಶಿ ಫಯಾಝ್ ತುರ್ಕಳಿಕೆ , ಸೆಕ್ಟರ್ ಮಿಡಿಯಾ ಕಾರ್ಯದರ್ಶಿ ನಾಸಿರ್ ಅಳಕ್ಕೆ, ಡಿಷಿಷನ್ ಪಬ್ಲಕೇಷನ್ ಚೆಯರ್ಮಾನ್ ಇಬ್ರಾಹಿಂ ಸಅದಿ ಕಳಂಜಿಬೈಲ್ ಹಾಗೂ ಇನ್ನಿತರ ಎಸ್.ವೈ.ಎಸ್., ಎಸ್ಸೆಸ್ಸೆಫ್, ಎಸ್.ಬಿ.ಎಸ್.ನ ಕಾರ್ಯಕರ್ತರು ಉಪಸ್ಥಿತರಿದ್ದರು.
ಶಿಬಿರದಲ್ಲಿ 120 ಯುನಿಟ್ ರಕ್ತ ಸಂಗ್ರಹವಾಯಿತು. ಕಾರ್ಯಕ್ರಮವನ್ನು ಡಿವಿಷನ್ ನಾಯಕ ಇಸ್ಹಾಖ್ ಮದನಿ ಸ್ವಾಗತಿಸಿ, ಸಾಬಿತ್ ಸಅದಿ ಅಳಕ್ಕೆ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.