ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಇಸ್ಲಾಂ ಧರ್ಮದ ಪ್ರಮಾಣ ಗ್ರಂಥ ಪವಿತ್ರ ಖುರ್ಆನ್ ನ 26 ಅಧ್ಯಾಯಗಳನ್ನು ತೆಗೆದು ಹಾಕಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಶಿಯಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ವಸೀಂ ರಿಝ್ವಿ ಹೇಳಿಕೆ ಇಸ್ಲಾಂ ಧರ್ಮ ವಿರುದ್ಧ ಹೇಳಿಕೆಯಾಗಿದ್ದು ಅವರು ಈ ಹೇಳಿಕೆ ಮೂಲಕ ಮತ್ತೊಮ್ಮೆ ಪಥಭ್ರಷ್ಟರಾಗಿದ್ದಾರೆಂದು ಹವ್ಯಾಸಿ ಪತ್ರಕರ್ತ,ಧರ್ಮಗುರು ಕೆ.ಎ.ಅಬ್ದುಲ್ ಅಝೀಝ್ ಝುಹ್ರಿ ಪುಣಚ ಹೇಳಿದ್ದಾರೆ.
ಇತರ ನೂತನವಾದಿ ಪಂಥಗಳಂತೆ ಶಿಯಾ ಪಂಥ ಕೂಡ ಇಸ್ಲಾಂ ಧರ್ಮದಿಂದ ದಾರಿ ತಪ್ಪಿದ ಪಂಥವಾಗಿದ್ದು ಇವರು ಹಿಂದಿನಿಂದಲೂ ಹೆಸರಿನಲ್ಲಿ ಮಾತ್ರ ಮುಸ್ಲಿಂ ಆಗಿ ಇಸ್ಲಾಂ ಧರ್ಮ ವಿರುದ್ಧ ಹೇಳಿಕೆ,ಚಟುವಟಿಕೆಗಳನ್ನು ನಡೆಸುತ್ತಲೇ ಬಂದಿದ್ದಾರೆ.
ಖುರ್ಆನ್ ಎಂಬುದು ಪ್ರಪಂಚದ ಸೃಷ್ಟಿಕರ್ತ ಅಲ್ಲಾಹು,ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಂ ತಂಙಳ್ ರವರಿಗೆ ಜಿಬ್ರೀಲ್ ಎಂಬ ಮಲಕ್ ಮೂಲಕ 23 ವರ್ಷಗಳ ಅವಧಿಯಲ್ಲಿ ಸಾಂದರ್ಭಿಕ ಔಚಿತ್ಯಕ್ಕನುಸಾರವಾಗಿ ಆಕಾಶ ಲೋಕದಿಂದ ಭೂಮಿಗೆ ಇಳಿಸಿದ ವಚನಗಳಾಗಿದ್ದು ಇದು ಮಾನವ ನಿರ್ಮಿತವಲ್ಲ. ಖುರ್ಆನ್ ಲೋಕಾಂತ್ಯದ ತನಕ ಯಾವುದೇ ಬದಲಾವಣೆಯಿಲ್ಲದೆ ತಾಜಾ ಶೈಲಿಯಲ್ಲಿ ನೆಲೆ ನಿಲ್ಲಲಿದೆ. ವಸ್ತು ಸ್ಥಿತಿ ಹೀಗಿರುವಾಗ ಶಿಯಾ ನಾಯಕ ವಸೀಂ ರಿಝ್ವಿ ಹೇಳಿಕೆ ಅವಿವೇಕದಿಂದ ಕೂಡಿದೆ. ಖುರ್ಆನ್ ನ ಪ್ರತಿಯೊಂದು ಸೂಕ್ತಗಳು ಕೂಡ ಮಾನವ ಸಮುದಾಯಕ್ಕೆ ಮಾರ್ಗದರ್ಶಿಯಾಗಿದ್ದು ಅಲ್ಲಾಹನದ್ದೇ ವಚನಗಳಾದ ಕಾರಣ ಇದರಲ್ಲಿ ತಪ್ಪು ಕಂಡು ಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. ಖುರ್ಆನ್ ನಲ್ಲಿರುವ ಕೆಲವೊಂದು ಪರಾಮರ್ಶೆ ಗಳು ಅಂದಿನ ಸಂದರ್ಭಕ್ಕನುಗುಣವಾಗಿ ಅಲ್ಲಾಹನಿಂದ ಅವತೀರ್ಣ ಗೊಂಡಿದೆ.
ಇಡೀ ಮಾನವ ಸಮುದಾಯಕ್ಕೆ ಸಂಪೂರ್ಣ ಮತ್ತು ಸಮಗ್ರ ಜೀವನ ವಿಧಾನವನ್ನು ಕಲಿಸಿ ಅವರನ್ನು ಮಾನವೀಯ ಮೌಲ್ಯಗಳನ್ನು ಸಂಪೂರ್ಣವಾಗಿ ಪಾಲಿಸಿ ಮಾದರೀ ಜೀವನ ನಡೆಸಲು ಕರೆ ನೀಡುವ ಖುರ್ಆನ್ ಕುರಿತು,ಇಂಥಾ ಅಜ್ಞಾನಿಗಳ ಹೇಳಿಕೆಗಳನ್ನು ವಿವೇಕವಿರುವ ಯಾರು ಕೂಡ ಗಣನೆಗೆ ತೆಗೆದುಕೊಳ್ಳಲಾರರು. ಸಲ್ಮಾನ್ ರಶ್ದಿ ಮತ್ತು ತಸ್ಲೀಮಾ ನಸ್ರೀನ್ ಇದೇ ರೀತಿ ಪ್ರವಾದಿ ನಿಂದನೆ ಮತ್ತು ಖುರ್ಆನ್ ನಿಂದನೆ ಮಾಡಿ ಪಥಭ್ರಷ್ಟರಾಗಿದ್ದರು.
ಜಗತ್ತಿನ ಯಾವುದೇ ಒಂದು ಧರ್ಮ, ಸಂಸ್ಕೃತಿಯನ್ನು ಅಪಹಾಸ್ಯ ಮಾಡುವುದು, ನಿಂದನೆ ಮಾಡುವುದನ್ನು ಸೃಷ್ಟಿಕರ್ತ ಅಲ್ಲಾಹು ಮಾನವ ಕುಲದ ಇಹಪರ ವಿಜಯಕ್ಕಾಗಿ ರೂಪಿಸಿದ ಇಸ್ಲಾಂ ಧರ್ಮ ಸಹಿಸುವುದಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.