ವಿಟ್ಲ(ವಿಶ್ವಕನ್ನಡಿಗ ನ್ಯೂಸ್): ಉಕ್ಕುಡ ಸಮೀಪದ ವ್ಯಾಪಾರಿ ದರ್ಕಾಸ್ ಅಬ್ದುಲ್ ಖಾದರ್ ರವರ ಮನೆಯ ಹೊರ ಸ್ನಾನ ಗ್ರಹದ ನೀರನ ಕೊಳವೆಯಲ್ಲಿ ಅಡಗಿ ಕುಳಿತ ಬೃಹದಾಕಾರದ ನಾಗರ ಹಾವನ್ನು ಸಮಾಜ ಸೇವಕ ಒಕ್ಕೆತ್ತೂರು ಸುಲೈಮಾನ್ ರವರು ತನ್ನ ಕೈ ಚಳಕ ಮತ್ತು ನಾಜೂಕಿನಿಂದ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಸುಮಾರು ಎಂಟುವರೆ ಅಡಿ ಉದ್ದವಿದ್ದ ಈ ಹಾವು ಕೆಲವು ದಿನಗಳಲ್ಲಿ ಪರಿಸರ ಪ್ರದೇಶದಲ್ಲಿ ಅಲ್ಲಲ್ಲಿ ಕಾಣಿಸುವುದರೊಂದಿಗೆ ಹಲವರ ನಿದ್ರೆಗೆಡಿಸಿತ್ತು. ಅಲ್ಲದೆ ಶಾಲೆಗಳಿಗೆ ರಜೆಯಾದ ಕಾರಣ ಮಕ್ಕಳು ಮನೆಯಂಗಳದಲ್ಲಿ ಆಟವಾಡುತ್ತಿರುವುದರಿಂದ ಮಕ್ಜಳ ರಕ್ಷಕರಿಗೂ ಇದೊಂದು ತಲೆನೋವೇ ಆಗಿತ್ತು.
ನಿನ್ನೆ ಬೆಳಿಗ್ಗೆ ಅಬ್ದುಲ್ ಖಾದರ್ ರವರ ಮನೆಯ ಅಂಗಳದಲ್ಲಿರು ಸ್ನಾನ ಗ್ರಹದ ಕೊಳವೆಯಲ್ಲಿ ಅಡಗಿ ಕುಳಿತ ಈ ಹಾವು ಸಂಜೆಯ ತನಕ ಆಗಾಗ್ಗೆ ತಲೆ ಹೊರಹಾಕಿ ಮನೆಯವರನ್ನು ಭೀತಿಯಲ್ಲಿ ಮುಳುಗಿಸಿತ್ತು. ಬಳಿಕ ಸಂಜೆಯ ವೇಳೆ ಊರಿನ ಯುವಕರು ಬಂದು ತೀವ್ರ ಶ್ರಮ ನಡೆಸಿದರೂ ಹೊರ ತೆಗೆಯಲು ಸಾಧ್ಯವಾಗಲಿಲ್ಲ. ನಂತರ ಇತ್ತೀಚಿನ ದಿನಗಳಲ್ಲಿ ಹಾವು ಹಿಡಿತ ಸಮಾಜ ಸೇವೆ ಮಾಡುವುದರಲ್ಲಿ ಬಹಳ ಖ್ಯಾತರಾದ ಒಕ್ಕೆತ್ತೂರು ಸುಲೈಮಾನ್ರವರು ಬಂದು ತನ್ನ ಚಾಣಾಕ್ಷತನದಿಂದ ಅದನ್ನು ಹೊರತೆಗೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಸುಲೈಮಾನ್ರವರು ಹಿಡಿದ ಆ ಹಾವನ್ನು ಕಾಡಿಗೆ ಬಿಟ್ಟು ಊರವರ ಪ್ರೀತಿ ಮೆಚ್ಚುಗೆ ಗಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.