ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ರಸ್ತೆಗಳು ಇಂದು ಎಲ್ಲೆಡೆಯಲ್ಲಿಯೂ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಅಗೆದು ಹಾಕಿರುವುದು ಸಾಮಾನ್ಯ ಸಂಗತಿಯಾಗಿದ್ದರೂ, ಅಂತಹವುಗಳು ನಿಧಾನವಾಗಿಯಾದರೂ ಸಹಜ ಸ್ಥಿತಿಗೆ ಮರಳುತ್ತವೆ, ಆದರೆ ನಗರದ ಪಾಂಡೇಶ್ವರದಲ್ಲಿನ ಸೌಹಾರ್ಧ ರಸ್ತೆಯಲ್ಲಿರುವ ಪೈ ಸೇಲ್ಸ್ ಕಾರ್ಪೊರೇಷನ್ (ಹಳೆ ಅಮೃತ್ ಟಾಕೀಸ್) ಬಳಿಯ ರಸ್ತೆಗೆ ಕೇಳುವವರೇ ಇಲ್ಲವೆಂಬಂತಹ ಪರಿಸ್ಥಿತಿಯಾಗಿದೆಯೆಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಇಲ್ಲಿನ ರಸ್ತೆಯ ಬದಿಯನ್ನು ಕೇಬಲ್ ಹಾಕುವ ನೆಪದಲ್ಲಿ ಅಗೆದು ತಿಂಗಳುಗಳೇ ಸಂದಿವೆ. ಆದರೂ ಅಲ್ಲಿ ಅಗೆದು ರಾಶಿ ಹಾಕಿದ ಮಣ್ಣನ್ನಾಗಲೀ ಅಲ್ಲಿ ಅಳಿದುಳಿದ ಕೇಬಲ್ ಹಾಗೂ ಇನ್ನಿತರ ಸಾಮಗ್ರಿಗಳನ್ನಾಗಲೀ ತೆರವುಗೊಳಿಸಲು ಅಗೆದು ಹಾಕಿದವರು ನಾಪತ್ತೆಯಾಗಿದ್ದು, ಇದರ ಜವಾಬ್ದಾರಿ ಹೊತ್ತವರು ಯಾರೂ ಇಲ್ಲವಾಗಿದ್ದರೆಯೇ ಅಥವಾ ಇವೆಲ್ಲವೂ ಮನಪಾದ, ಅಧಿಕಾರಿಗಳು ಕಾಣುವುದಿಲ್ಲವೇ, ಒಂದೊಮ್ಮೆ ಇದು ಮೆಸ್ಕಾಂ ಇಲಾಖೆಯವರು ಸರಿಪಡಿಸಬೇಕಾದ ಕೆಲಸವಾಗಿದ್ದಲ್ಲಿ ಯಾಕಾಗಿ ಅದಕ್ಕಾಗಿ ಮನಪಾ ಅವರಲ್ಲಿ ಧ್ವನಿ, ಎತ್ತುತ್ತಿಲ್ಲ ಮನಪಾ ಇವೆಲ್ಲವನ್ನೂ ಕಂಡೊಡನೆ ಕ್ರಿಯಾಶೀಲರಾಗಿ ಸಮಸ್ಯೆ ಬಗೆಹರಿಸುವಲ್ಲಿ ತೊಡಗಿಸಿಕೊಳ್ಳಲು ಹೋಗದೆ, ಇತ್ಯಾದಿಗಳನ್ನು ಕಂಡು ಕಾಣದಂತೆ ನಟಿಸುವುದು ಎಷ್ಟು ಸರಿಯೆಂದು ಪ್ರಶ್ನಿಸಿದರು. ಅದಲ್ಲದೆ, ಇಲ್ಲಿಯೇ ನಮ್ಮ ಮನಪಾದ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ ರವರ ಕಚೇರಿ ಇರುವುದಲ್ಲದೆ ಹಾಲಿ ಮೇಯರ್ ರವರ ವಾರ್ಡ್ ಕೂಡಾ ಸನಿಹದಲ್ಲೇ ಇರುವುದು ಇನ್ನಷ್ಟು ಗಮನಾರ್ಹವೆಂದ ಅವರು ವಸ್ತುಸ್ಥಿತಿ ಹೀಗಿದ್ದೂ ಯಾಕೆ ಹೀಗೆ ಇಷ್ಟೊಂದು ಅಸಮರ್ಪಕ ನಿರ್ವಹಣೆಗೆ ಯಾರೂ ಹೊಣೆಗಾರಿಕೆಯನ್ನು ಹೊಂದಿಲ್ಲವೇ ಎಂದವರು ತಮ್ಮ ವಿಷಾದವನ್ನು ವ್ಯಕ್ತಪಡಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.