ರಮಝಾನ್ ವಿಶೇಷ(ವಿಶ್ವಕನ್ನಡಿಗ ನ್ಯೂಸ್): ಮುಸ್ಲಿಮರ ಪಾಲಿಗೆ ಪುಣ್ಯಗಳ ಕೊಯ್ಲು ಕಾಲವೆಂದೇ ಪ್ರಖ್ಯಾತವಾಗಿರುವ ಪಾವನ ರಮಳಾನ್ ತಿಂಗಳನ್ನು ಗೌರವ ಆದರದಿಂದ ಬರಮಾಡಿಕೊಂಡವರು ಭಾಗ್ಯವಂತರು. ಈ ಪುಣ್ಯ ತಿಂಗಳಲ್ಲಿ ಅಲ್ಲಾಹನ ಆದೇಶಗಳಿಗನುಗಣವಾಗಿ ನಡೆದುಕೊಂಡು ನಮ್ಮ ಹೆಚ್ಚಿನ ಸಮಯಗಳನ್ನು ಇಬಾದತ್ ಗಳಲ್ಲಿ ಬಳಸಿಕೊಂಡವರಂತೂ ಇಹ-ಪರ ವಿಜಯಿಗಳು. ವಿಶ್ವಗ್ರಂಥ ಪರಿಶುದ್ಧ ಖುರ್ಆನ್ ಜಗತ್ತಿಗೆ ಅವತೀರ್ಣಗೊಂಡ ಪಾವನ ಮಾಸ ರಮಳಾನ್. ಆದುದರಿಂದ ಈ ತಿಂಗಳಲ್ಲಿ ಖುರ್ಆನ್ ಪಾರಾಯಮ ಹೆಚ್ಚು ಮಹತ್ವ ಹಾಗೂ ಪಾರಾಯಣಗೈಯ್ಯುವವರಿಗೆ ಹೆಚ್ಚು ಪ್ರತಿಫಲವೂ ದೊರಕಲಿದೆ.
ಖುರ್ಆನ್ ಹಗಲಿನಲ್ಲಿ ಓದುವುದಕ್ಕಿಂತಲೂ ರಾತ್ರಿ ಓದುವುದಕ್ಕೆ ಹೆಚ್ಚು ಪ್ರತಿಫಲ. ಅರ್ಥಗೊತ್ತಿಲ್ಲದೆ ಓದಿದರೂ ಪ್ಲತಿಫಲ ಸಿಗುವುದಾದರೂ ಅರ್ಥೈಸಿ ಓದುವುದರಲ್ಲಿ ಪ್ರತಿಫಲ ದುಪ್ಪಟ್ಟಾಗಿ ಲಭಿಸುತ್ತದೆ. ವರ್ಷದಲ್ಲಿ ಕನಿಷ್ಠ ಎರಡು ಖತಂಗಳಾದರೂ ಪಾರಾಯಣಗೈಯ್ಯಲು ನಮ್ಮಿಂದ ಸಾಧ್ಯವಾಗಬೇಕು. ವರ್ಷದಲ್ಲಿ ಎರಡು ಖತಂ ಪೂರ್ತಿಗೊಳಿಸಿದವರು ಖುರ್ಆನಿನೊಂದಿಗಿನ ತಮಗಿರುವ ಬಾಧ್ಯತೆ ಪೂರೈಸಿದವರಾಗಿದ್ದಾರೆ ಎಂದು ಕೆಲವು ವಿದ್ವಾಂಸರು ಹೇಳಿದ್ದಾರೆ.
ಜೀವನದುದ್ದಕ್ಕೂ ದಿನಚರಿಯಲ್ಲಿ ನಮಗೊಂದು ಟೈಂ ಟೇಬಲ್ ಇರಬೇಕು. ರಮಳಾನ್ ನಲ್ಲಿ ಸ್ಪೆಷಲ್ ಆಗಿಯೂ ಇರಬೇಕು. ಬ್ಯುಸಿಗಳ ಮಧ್ಯೆಯೂ ಅಲ್ಲಾಹನೊಂದಿಗಿನ ನಿಕಟ ಸಂಪರ್ಕಕ್ಕೆ ಕೊರತು ಇರಕೂಡದು. ನಮ್ಮ ಟೈಂ ಶೆಡ್ಯೂಲ್ ನಲ್ಲಿ ಖುರ್ಆನ್ ಪಾರಾಯಣಕ್ಕಾಗಿ ಒಂದು ಸಮಯ ಮೀಸಲಿಡಬೇಕು. ಖುರ್ಆನ್ ಪಾರಾಯಣಗೈಯ್ಯುವುದರೊಂದಿಗೆ ಸಾಧ್ಯವಾದಷ್ಟು ಸೂರತ್ ಗಳು ಆಯತ್ ಗಳು ಹಿಫ್ಳ್ ಮಾಡುವವರಾಗಬೇಕು. ನಮ್ಮ ಹೃದಯಗಳು ಖುರ್ಆನ್ ನ ಪ್ರಕಾಶದಿಂದ ಬೆಳಗಬೇಕು. ಖುರ್ಆನ್ ನ ಪ್ರಕಾಶ ನಮ್ಮನ್ನು ಸನ್ಮಾರ್ಗದತ್ತ ಸಂಚರಿಸುತ್ತದೆ. ಖುರ್ಆನ್ ನಿಂದ ಹಿದಾಯತ್ ಪಡೆದವರೇ ಅಧಿಕರೂ. ಸಮಕಾಲೀನ ಸನ್ನಿವೇಶದಲ್ಲಿ ಇಸ್ಲಾಂ ಸ್ವೀಕರಿಸುತ್ತಿರುವವರೆಲ್ಲರೂ ಖುರ್ಆನ್ ಪಠಿಸಿ ಅರ್ಥೈಸಿದವರಾಗಿದ್ದಾರೆ.
ಖುರ್ಆನ್ ನ ಪ್ರಭೆ ಇಡೀ ಜಗತ್ತಲ್ಲೇ ಹರಡಿ ನಿಂತಿದೆ. ಖುರ್ಆನ್ ನ ಪ್ರಕಾಶದೊಂದಿಗೆ ನಾವೂ ಒಳಿತಿನ ಪಥದತ್ತ ಸಾಗಬೇಕು. ಪ್ರವಾದಿ ಮುಹಮ್ಮದುರ್ರಸೂಲುಲ್ಲಾಹಿ ﷺರವರ ಎಲ್ಲಾ ಚರ್ಯೆಗಳು ಜೀವನಲ್ಲಿ ಅಳವಡಿಸಿಕೊಂಡು ಒಂದು ಮಾದರೀ ಜೀವನ ಖುರ್ಆನ್ ನ ಬರಕತ್ ನಿಂದ ನಮ್ಮಲ್ಲಿ ಮೂಡಿಬರಬೇಕು.
ರಮಳಾನ್ ತಿಂಗಳ ಸ್ಪೆಷಲ್ ಇಬಾದತ್ ಗಳಲ್ಲಿ ಒಂದಾಗಿದೆ ತರಾವೀಹ್ ನಮಾಝ್. ರಾತ್ರಿ ವೇಳೆಯಲ್ಲಿನ ಇಪ್ಪತ್ತು ರಕಅತ್ ನಮಾಝ್ ಆಗಿದೆ ಇದು. ಹಗಲು ಸಮಯ ಅಲ್ಲಾಹನಿಗಾಗಿ ವೃತ. ರಾತ್ರಿ ಸಮಯ ಅಲ್ಲಾಹನಿಗಾಗಿ ಸುಜೂದ್. ವಿಶ್ವಾಸೀ ಹೃದಯಗಳು ಅಲ್ಲಾಹನ ಸ್ಮರಣೆಯಲ್ಲೇ ನಿರತರಾಗಿರಬೇಕು. ಒಂದೊಂದು ಇಬಾದತ್ ಗಳಿಗೂ ಗರಿಷ್ಠ ಮಟ್ಟದ ಪ್ರತಿಫಲಗಳನ್ನು ಅಲ್ಲಾಹನು ನೀಡುತ್ತಾನೆ. ದುನಿಯಾದ ಆಫರ್ ಗಳ ಹಿಂದೆ ಸಾಲಾಗಿ ನಿಲ್ಲುವ ನಾವುಗಳು ಅಲ್ಲಾಹನು ನೀಡುವ ಪ್ರತಿಫಲಗಳ ಆಫರ್ ಗಳಿಂದ ವಂಚಿತರಾಗುವವರು ಆಗಬಾರದು. ನಮ್ಮಲ್ಲಿನ ಟೈಂ ಟೇಬಲ್ ನಮ್ಮ ಜೀವನವನ್ನೇ ಬದಲಾಯಿಸುವಂದದ್ದಾಗಬೇಕು. ಈ ರಮಳಾನ್ ಇಬಾದತ್ ಗಳಲ್ಲಿ ಧನ್ಯಗೊಳಿಸಿ ಸ್ವರ್ಗ ಲಭಿಸುವವರ ಸಾಲಿನಲ್ಲಿ ನಾವೂ ಸೇರಬೇಕು. ಅಲ್ಲಾಹು ತೌಫೀಖ್ ನೀಡಲಿ امين.
DARUNNAJATH HADIYA SHAREE’ATH COLLEGE Nellihudhikeri 571253 Kodagu
✍️ ಫಸೀಲಾ ಸಿರಾಜ್ (ವಿದ್ಯಾರ್ಥಿನಿ, ದಾರುನ್ನಜಾತ್ ಹಾದಿಯಾ ನೆಲ್ಲಿಹುದಿಕೇರಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.