ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಜಿಲ್ಲೆಯಾದ್ಯಂತ ನಾಳೆ ದಿನಾಂಕ ಹನ್ನೊಂದರಂದು ಸಂಭಾವ್ಯ ಚಂದ್ರದರ್ಷನ ವಾದರೆ ಮುಂದಿನ ದಿನ ಮುಸ್ಲಿಮರು ಈದ್ ಹಬ್ಬ ಆಚರಿಸಲು ಮತ್ತು ಆ ದಿನಕ್ಕೆ ಅಗತ್ಯವಿರುವ ವಿಶೇಷ ಆಹಾರ ಸಮಾಗ್ರಿ,ಧಾನ್ಯ, ಸಿಹತಿನಿಸುಗಳು,ಹಾಲು,ಮಾಂಸ ಇತ್ಯಾದಿಗಳನ್ನು ಖರೀದಿಸಲು, ಲಾಕ್ ಡೌನ್ ವಿನಾಯಿತಿ ಅವಧಿಯನ್ನು ಕನಿಷ್ಟ ಎರಡು ಘಂಟೆ ಹೆಚ್ಚುವರಿಯಾಗಿ, ಪೂರ್ವಾಹ್ನ ಘಂಟೆ 12.00 ರ ತನಕ ಪೂರೈಸಬೇಕು ಎಂದು ವಿನಂತಿಸುತ್ತೇವೆ.
ಅವಧಿ ಕಡಿಮೆಯಾದರೆ ಜನದಟ್ಟಣೆ ಅಧಿಕವವಾಗಿ ಸೋಂಕು ಸೃಷ್ಟಿ ಸಾಧ್ಯತೆ ಹೆಚ್ಚು.ಆದುದರಿಂದ ಅಧಿಕ ಅವಧಿ ನೀಡಿದರೆ ಉತ್ತಮ. ಕೋವಿಡ್ ಸಂಧಿಗ್ಧತೆ ಯಿಂದಾಗಿ ಮುಸ್ಲಿಮ್ ಸಮುದಾಯದ ಜನರಿಗೆ ಕಳೆದ ವರ್ಷವೂ ಮುಕ್ತ ರಂಝಾನ್ ಮತ್ತು ಈದ್ ಆಚರಣೆ ಲಬ್ಯವಾಗದೆ, ಈ ವರ್ಷವೂ ಕೂಡಾ ರಂಝಾನ್ ಮತ್ತು ಈದ್ ಆಚರಣೆಯ ವಿಧ ವ್ಯತ್ಯಯವಾಗಿದೆ.ಆದುದರಿಂದ,ಉಸ್ತುವಾರಿ ಸಚಿವರು, ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಪರಿಸ್ಥಿತಿಯನ್ನು ಅರ್ಥೈಸಿ ಎರಡು ಘಂಟೆ ಅಧಿಕ ಅವಧಿಯನ್ನು ಅಗತ್ಯ ದಿನಸಿ ಖರೀದಿಗೆ ನೀಡಬೇಕಾಗಿ ವಿನಂತಿ.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.