ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣಕನ್ನಡ ಜಿಲ್ಲೆಯಲ್ಲಿಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ 80 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಕಾಯಿಲೆಯಿಂದ ಬಳಲುತ್ತಿರುವ, ಐ.ಸಿ.ಯು/ ವೆಂಟಿಲೇಟರ್ ನಲ್ಲಿ ಚಿಕಿತೆ ಪಡೆಯುತ್ತಿರುವ ರೋಗಿಗಳಿಗೆ ಉಚಿತಚಿಕಿತ್ಸೆ ಲಭ್ಯವಿರುತ್ತದೆ. (ಎ.ಪಿ.ಎಲ್ ಮತ್ತು ಬಿ.ಪಿ.ಎಲ್ಕಾರ್ಡ್ ಹೊಂದಿರುವವರಿಗೆ). ಈ ರೋಗಿಗಳು ತಮ್ಮ ಹೆಸರಿನಆಧಾರ್ಕಾರ್ಡ್ ಮೂಲಪ್ರತಿಯನ್ನುದಾಖಲಾತಿ ಸಮಯದಲ್ಲಿ ಹಾಜರಿಪಡಿಸುವುದು.
ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡು ಜನರಲ್ ವಾರ್ಡ್/ಹೆಚ್.ಡಿ.ಯು ಬೆಡ್ಗಳು ಖಾಲಿ ಇಲ್ಲದಿದ್ದಲ್ಲಿರೆಫೆರಲ್ ಪತ್ರವನ್ನು ಪಡೆದುಕೊಂಡಲ್ಲಿ ಮಾತ್ರಚಿಕಿತ್ಸೆಯನ್ನುಉಚಿತವಾಗಿ ನೀಡಲಾಗುವುದು.ಸ್ಪೆಷಲ್ ವಾರ್ಡ್/ ಸೆಮಿ ಪ್ರೈವೇಟ್ ವಾರ್ಡ್ನಲ್ಲಿಚಿಕಿತ್ಸೆ ಪಡೆದುಕೊಳ್ಳುವವರಿಗೆ ಈ ಯೋಜನೆಅನ್ವಯವಾಗುವುದಿಲ್ಲ.
ಕೋವಿಡ್ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಸೌಲಭ್ಯವನ್ನು ಖಾಸಗಿ ಆಸ್ಪತ್ರೆಯಲ್ಲಿ ನೀಡಲಾಗುವುದು. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲು ರೋಗಿ/ ರೋಗಿಯ ಕಡೆಯವರು ದಾಖಲಾತಿ ಸಮಯದಲ್ಲಿ ಆಸ್ಪತ್ರೆ ಸಿಬ್ಬಂದಿ, ಆರೋಗ್ಯ ಮಿತ್ರ, ಜಿಲ್ಲಾ ಸಂಯೋಜಕರು, ಹಾಗೂ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿಜಿಲ್ಲಾ ಕುಷ್ಠ ರೋಗ ನಿವಾರಣಾ, ಜಿಲ್ಲಾಕಾರ್ಯಕ್ರಮ ವ್ಯವಸ್ಥಾಪಕರ ಕಚೇರಿಯ ದೂ. ಸಂಖ್ಯೆ: 0824-2423818 ಹಾಗೂ ಜಟoಜಞಟಿ@gmಚಿiಟ.ಛಿom ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.