ಕೋಲಾರ (www.vknews.com): ಲಾಕ್ ಡೌನ್ ಸಂದರ್ಭದಲ್ಲಿ ಕೋಲಾರ ನಗರದಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಕೋಲಾರ ಜಿಲ್ಲಾ ಜಯಕರ್ನಾಟಕ ವತಿಯಿಂದ ನೀರಿನ ಬಾಟೆಲ್ , ಕಾಫಿ , ಟೀ ಮತ್ತು ಬಿಸ್ಕೆಟ್ ಪ್ಯಾಕನ್ನು ನೀಡಿ ಕೃತಜ್ಞತೆ ತೋರಿದ್ದಾರೆ.
ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್ ಮಾತನಾಡಿ ಪೊಲೀಸ್ ಸಿಬ್ಬಂದಿ ಕೊರೋನಾ ತಡೆಯುವಲ್ಲಿ ತಮ್ಮ ಪ್ರಾಣಗಳನ್ನು ಲೆಕ್ಕಿಸದೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ ನಿಮಗೆ ಸಹಕಾರ ನೀಡುತ್ತೇವೆ ಎನ್ನುವ ಮಾತು ಪೊಲೀಸರಲ್ಲಿ ಉತ್ಸಾಹ ಮೂಡಿಸುತ್ತದೆ. ನಮ್ಮ ಸಂಘಟನೆಯ ಪದಾಧಿಕಾರಿಗಳು ದಿನಕ್ಕೊಬ್ಬರಂತೆ ಲಾಕ್ಡೌನೌನಿಂದ ಕೆಲಸಗಳಿಲ್ಲದೆ ನಿರ್ಗತಿಕರಾಗಿರುವ ಕುಟುಂಬಗಳಿಗೆ ಊಟವನ್ನು ನೀಡುವ ಯೋಜನೆ ಇದೆ ಎಂದರು.
ಈ ಸಂದಭದಲ್ಲಿ ಜಯ ಕರ್ನಾಟಕ ಸಂ ಏನೆಂಯ ಜಿಲ್ಲಾ ಸಂಚಾಲಕರಾದ ಕೆ.ಎಸ್.ಪ್ರಕಾಶ್, ಸಂಘಟನಾ ಕಾಂರ್ಗದರ್ಶಿ ಅಮರ್ನಾಥ್ ಸ್ವಾಮಿ ಜಿಲ್ಲಾ ಸಮಿತಿಯ ಮುಖಂಡರಾದ ನಾರಾಯಣಸ್ವಾಮಿ ಕೆ.ಎಸ್.ಆರ್.ಟಿ.ಸಿ ಮಂಜುನಾಥ್ ಸಿಂಗ್ ಮತ್ತಿತರರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.