ಮಂಗಳೂರು (www.vknews.com) : ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಅನ್ ಲೈನ್ ಮೂಲಕ ಸೋಮವಾರ (24/5/21) ಕರ್ನಾಟಕ ರಾಜ್ಯ ಸರ್ಕಾರದ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಸನ್ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಜೊತೆಗೆ ಕರ್ನಾಟಕ ರಾಜ್ಯದಲ್ಲಿ ಹಾಗೂ ದ. ಕ ಮತ್ತು ಉಡುಪಿ ಜಿಲ್ಲೆ ಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಂಡ ಮುಂಜಾಗ್ರತೆ ಕ್ರಮ ಹಾಗೂ ಸಮಗ್ರ ನಿರ್ವಹಣೆ ಬಗ್ಗೆ ವಿಶೇಷ ಸಂವಾದ ಕಾರ್ಯಕ್ರಮ ನಡೆಯಿತು.
ಸಾರ್ವಜನಿಕರ ಅನೇಕ ಪ್ರಶ್ನೆಗಳಿಗೆ ಸಚಿವರು ಸಮರ್ಪಕವಾಗಿ ಉತ್ತರ ನೀಡಿದರು, ರಾಜ್ಯ ದಲ್ಲಿ ಹಾಗೂ ದ. ಕ ಜಿಲ್ಲೆಯಲ್ಲಿ ಕೊರೊನಾ ವನ್ನು ಹಿಮ್ಮೆಟ್ಟಿಸಲು ತೆಗೆದು ಕೊಂಡ ಸಧ್ಯದ ನಿರ್ಧಾರ ಮತ್ತು ಪರಿಸ್ಥಿತಿಯ ಬಗ್ಗೆ ವಿವರಗಳನ್ನು ನೀಡಿದ್ದರು.
ಸರ್ಕಾರದ ಮತ್ತು ಆರೋಗ್ಯ ಇಲಾಖೆಯ ಜೊತೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದ ಸಚಿವರು. ನಿಮ್ಮ ಕೆಲವು ಪ್ರಮುಖ ಪ್ರಶ್ನೆ ಗಳನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಾರುತ್ತೆನೆ, ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ, ಚೇತನ್ ಕದ್ರಿ, ಸುನೀಲ್ ಪಣಪಿಲ, ಜಗದೀಶ್ ಬಾರಿಕೆ, ಪ್ರಿಯದರ್ಶಿನಿ ಮಂಗಳೂರು, ಪ್ರಸನ್ನ ಕುಮಾರ್ ಮೈಸೂರು, ಲತಾ ಸುದರ್ಶನ್ ಮೈಸೂರು, ವಜ್ರ ಕುಮಾರ್ ಬೆಂಗಳೂರು, ಮೊದಲಾದವರು ಉಪಸಿತರಿದ್ದರು, ವಿಜೆ ಗುರುಪ್ರಸಾದ್ ಕೋಟ್ಯಾನ್ ಹಾಗೂ ವಿಜೆ ತೇಜಸ್ ಜೆ ಬಂಗೇರ ನಿರೂಪಿಸಿದರು, ಸ್ಪೂರ್ತಿ ಜೈನ್ ಕುಣಿಗಲ್ ಹಾಗೂ ನಿರಂಜನ್ ಜೈನ್ ಕುದ್ಯಾಡಿ ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.