ಶ್ರೀನಿವಾಸಪುರ (www.vknews.com):- ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳಬೇಕು ಗ್ರಾಮಸ್ಥರಿಗೆ ಕೊರೊನಾ ಕುರಿತು ಅಗತ್ಯವಾದ ತಿಳುವಳಿಕೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕೋವಿಡ್ ಸೋಂಕಿತರ ಬಳಕೆಗೆ ೫ ಘನೀಕೃತ ಆಮ್ಲಜನಕ ಅಡಕಗಳನ್ನು ನೀಡಿ ಮಾತನಾಡಿ , ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ನೀಗುವ ಉದ್ದೇಶದಿಂದ ಈ ಅಡಕಗಳನ್ನು ನೀಡಲಾಗುತ್ತಿದೆ . ಅವುಗಳನ್ನು ಅರ್ಹ ಕೋವಿಡ್ ರೋಗಿಗಳಿಗೆ ಬಳಸಿ ಅವರ ಜೀವ ರಕ್ಷಿಸಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ಕಾರ್ಯಪಡೆಯನ್ನು ನೇಮಿಸಲಾಗಿದೆ . ಈ ಪಡೆಯ ಮುಖ್ಯಸ್ಥರು ಹಾಗು ಸದಸ್ಯರು ತಮ್ಮ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಕೋಡ್ ಸಂಬಂಧ ಅಂಕಿ ಅಂಸ ಸಂಗ್ರಹಿಸಬೇಕು. ಮನೆಗಳಲ್ಲಿಯೇ ಉಳಿದು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅಗತ್ಯವಾದ ಔಷಧಗಳನ್ನು ಸಮಯಕ್ಕೆ ಸರಿಯಾಗಿ ನೀಡಬೇಕು ಎಂದು ಹೇಳಿದರು.
ತಾಲ್ಲೂಕಿನ ಕೊರೊನಾ ರೋಗಿಗಳ ಉಪಯೋಗಕ್ಕಾಗಿ , ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ರೂ .೨೫ ಲಕ್ಷ ವೆಚ್ಚದಲ್ಲಿ ಆಮ್ಲಜನಕ ಸೌಲಭ್ಯ ಹೊಂದಿರುವ ಆಂಬುಲೆನ್ಸ್ ನೀಡಲಾಗುದು ಎಂದು ಹೇಳಿದರು . ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಖಾಸಗಿ ಶಾಲೆಗಳ ಶಿಕ್ಷಕರಿಗೆ ಸರ್ಕಾರ ರೂ .೫ ಸಾವಿರ ಪರಿಹಾರ ಪ್ರಕಟಿಸಿದೆ . ಆದರೆ ಆ ಹಣ ಸಾಕಾಗುವುದಿಲ್ಲ , ಕನಿಷ್ಟ ರೂ .೧೦ ಸಾವಿರ ಪರಿಹಾರ ನೀಡಬೇಕು ಎಂದು ಮನಸು ಮನವಿ ಮಾಡಿದರು .
ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ ಕೆ ಎನ್. ವೇಣುಗೋಪಾಲ್ , ತಾಲ್ಲೂಕು ಘಟಕದ ಅಧ್ಯಕ್ಷ ಎ.ಅಶೋಕರೆಡ್ಡಿ , ಮುಖಂಡ ಕೆ.ಕೆ.ಮಂಜು , ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ , ತಾಲೂಕು ವೈದ್ಯಾಧಿಕಾರಿ ಡಾ . ಎಂ.ಸಿ.ವಿಜಯ , ಆಸ್ಪತ್ರೆ ಆಕಳಿ ತಾಧಿಕಾರಿ ಡಾ . ಜಿ.ಎಸ್.ಶ್ರೀನಿವಾಸ್ , ಪೊಲೀಸ್ ಇನ್ಪೆಕರ್ .ರವಿಕುಮಾರ್ , ಹಿರಿಯ ಕಂದಾಯ ನಿರೀಕ್ಷಕ ಬಿ.ಎ.ಮುನಿರೆಡ್ಡಿ , ಹರೀಶ್ . ನಾಗರಾಜ್ , ಮಹಮದ್ ಅಲಿ , ಕೆ.ಎ.ಸಿ.ರೆಡ್ಡಿ ಇದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.