ಕುಂದಾಪುರ (ವಿಶ್ವ ಕನ್ನಡಿಗ ನ್ಯೂಸ್ ): ಕೋವಿಡ್ ನಿಂದ ಪೂರ್ಣ ಸೀಲ್ ಡೌನ್ ಆದ ಹನೆಹಳ್ಳಿ ಗ್ರಾಮ ತಾಲೂಕಿನ ಪಂಚಾಯತ್ ವ್ಯಾಪ್ತಿಯಲ್ಲಿ ಉತ್ಸಾಹಿ ಯುವಕರಿಂದ ಸ್ವಚ್ಛತಾ ಕಾರ್ಯ ನಡೆಯಿತು .ಪಂಚಾಯತ್ ವ್ಯಾಪ್ತಿಯ ನೀಲಾವರ ಸೇತುವೆಯ ಬಳಿ ಅಳವಡಿಸಿರುವ ತಡೆಗೋಡೆ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಕಳೆ ಗಿಡಗಳನ್ನು ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಮರಕಾಲ ಅವರ ನೇತೃತ್ವದಲ್ಲಿ ಸ್ಥಳೀಯ ಉತ್ಸಾಹಿ ಯುವಕರು ಜೊತೆಗೂಡಿ ಸ್ವಚ್ಛ ಗೊಳಿಸಿ,ಗಿಡನೆಡುವುದರ ಮೂಲಕ ಗ್ರಾಮದ ಸ್ವಚ್ಛತೆ ಹಾಗೂ ಹಸಿರಿನ ಮಹತ್ವವನ್ನು ಈ ಮೂಲಕ ಗ್ರಾಮದ ಜನತೆಗೆ ತಿಳಿಸಿ ಇತರರಿಗೆ ಮಾದರಿಯಾದರು. ಈ ಸಂದರ್ಭದಲ್ಲಿ ಹನೆಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಅರುಂಧತಿ ಏಸುಮನೆ, ಕಾರ್ಯದರ್ಶಿ ಉಮೇಶ್ ಕಲ್ಯಾಣಪುರ, ಪಂಚಾಯತ್ ಅಧ್ಯಕ್ಷರಾದ ಶ್ರೀಚಂದ್ರ ಶೇಖರ್ ಶೆಟ್ಟಿ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.