(www.vknews.in)ಕೋಲಾರ : ನಾವು ಸೇವಿಸುವ ಆಹಾರದ ಬಗ್ಗೆ ಜಾಗೃತಿ ವಹಿಸಬೇಕು, ಇಂದು ನಾವು ತಿನ್ನುತ್ತಿರುವ ಆಹಾರ ವಿಷದಿಂದ ಕೂಡಿದ್ದು ಶೇಕಡ 70 ರಿಂದ 80 ರಷ್ಟು ಕಳಪೆ, ಕಲಬೆರಕೆಯಿಂದ ಕೂಡಿದ್ದು ಮನುಷ್ಯನ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.ಕಲಬೆರಕೆ ಪ್ರತಿಯೊಂದು ಆಹಾರ ಪದಾರ್ಥಗಳಲ್ಲಿದ್ದು ಕ್ಯಾನ್ಸರ್ ಸೇರಿದಂತೆ ಹಲವಾರು ಮಾರಕ ರೋಗಗಳಿಗೆ ಮನುಷ್ಯ ಬಲಿಯಾಗುತ್ತಿದ್ದಾನೆ ಎಂದು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗಾನಂದ ಕೆಂಪರಾಜ್ ತಿಳಿಸಿದರು.
ಕರೋನ ಸಂಕಷ್ಟದ ಸಮಯದಲ್ಲಿ ಜಯಕರ್ನಾಟಕ ಸಂಘಟನೆ, ಶ್ರೀಭುವನೇಶ್ವರಿ ಕನ್ನಡ ಸಂಘದ ವತಿಯಿಂದ ನಿರ್ಗತಿಕರು,ನಿರಾಶ್ರಿತರಿಗೆ ಸೋಮವಾರ ನಗರದ ಗೌರಿಪೇಟೆಯ ಬಸವ ಮಂದಿರದಲ್ಲಿ ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸುವ ಮೂಲಕ ಆಹಾರ ಪೊಟ್ಟಣದ ಜೊತೆಗೆ ಹಣ್ಣುಗಳನ್ನು ವಿತರಿಸಿ ಮಾತನಾಡಿದರು. ಜಯಕರ್ನಾಟಕ ಸಂಘಟನೆ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಕೆ ಆರ್ ತ್ಯಾಗರಾಜ್ ಹಾಗೂ ಪದಾಧಿಕಾರಿಗಳು ನಾಡು ನುಡಿಯ ಸೇವೆ ಜೊತೆಗೆ ತಮ್ಮ ಸ್ವಂತ ಹಣದಿಂದ ಕೋವಿಡ್ ಕಷ್ಟದಲ್ಲಿರುವ ಹಸಿದವರಿಗೆ ಆಹಾರವನ್ನು ನೀಡುವ ಸಮಾಜ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು. ಸಂಘಟನೆಯು ವಿಶ್ವ ಆರೋಗ್ಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ವಿಶ್ವಸಂಸ್ಥೆ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸುತ್ತಿರುವ ಸಂಧರ್ಭದಲ್ಲಿ ಸರ್ಕಾರ ಆಹಾರ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಗಳ ಮೇಲೆ ತೀವ್ರ ನಿಗಾ ವಹಿಸುವ ಮೂಲಕ ಜನರನ್ನು ಕಾಪಾಡಲು ಮನವಿ ಮಾಡಿದರು. ನಾವು ಸಹ ಸೇವಿಸುವ ಆಹಾರ ಪದಾರ್ಥಗಳ ಮೇಲೆ ಎಚ್ಚರ ವಹಿಸಬೇಕು, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದ್ದು ಮುಖ್ಯವಾಗಿ ಫೋಷಕರು ತಮ್ಮ ಮಕ್ಕಳನ್ನು ಜಂಕ್ ಫುಡ್ ಗಳ ಸೇವನೆಯಿಂದ ಹೊರತಂದು ಪೌಷ್ಟಿಕಾಂಶ ಆಹಾರ ನೀಡುವ ಮೂಲಕ ಅವರ ಆರೋಗ್ಯ ಕಾಪಾಡಬೇಕಿದೆ ಎಂದರು.
ಕ.ರಾ.ರ.ಸಾ.ಸಂಸ್ಥೆಯ ಮುಖಂಡರಾದ ನಾರಾಯಣಸ್ವಾಮಿ ರವರು ಮಾತನಾಡಿ ಕೊರೋನದಿಂದ ಬಡವರ್ಗ, ನಿರಾಶ್ರಿತರ ಸೇವೆಗೆ ತೊಡಗಿರುವ ಕೆ.ಆರ್.ತ್ಯಾಗರಾಜ್ ಮತ್ತು ತಂಡದವರ ಸೇವೆಯನ್ನು ಪ್ರಶಂಸಿಸಿದರು. ಎಲ್ಲಾ ಸಂಘಸಂಸ್ಥೆಗಳು ಇಂತಹ ಸೇವೆಮಾಡಲು ಮುಂದಾಗಬೇಕೆಂದರು. ಜಿಲ್ಲಾ ಜಯ ಕರ್ನಾಟಕ ಸಂಘಟನೆ ಹಾಗೂ ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕೆ.ಆರ್.ತ್ಯಾಗರಾಜ್ ಮಾತನಾಡಿ ಇಂದು ವಿಶ್ವ ಆಹಾರ ಸುರಕ್ಷತಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಆಹಾರ ಸುರಕ್ಷತಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
ಜಯಕರ್ನಾಟಕ ಸಂಘಟನೆಯು ಲಾಕ್ಡೌನ್ ಸಂದರ್ಭದಲ್ಲಿ ನಿರ್ಗತಿಕರಿಗೆ ಪ್ರತಿನಿತ್ಯ ಆಹಾರ ವಿತರಿಸುತ್ತಾ ಬರುತ್ತಿದ್ದು, ನಾವು ಯಾವುದೇ ದಾನಿಗಳ ಸಹಕಾರ ಪಡೆಯುತ್ತಿಲ್ಲ ನಮ್ಮ ಸಂಘಟನೆಯ ಕಾರ್ಯಕರ್ತರು ದಿನಕ್ಕೊಬ್ಬರಂತೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಈ ದಿನದ ಊಟಕ್ಕೆ ನಮ್ಮ ಸಂಘಟನೆಯ ಕಾರ್ಯಕರ್ತರಾದ ಮೋಹಿತ್ ಸಹಕಾರವನ್ನು ನೀಡಿದ್ದಾರೆ ಇದೇರೀತಿ ಇನ್ನೂ ಮುಂದೆಯೂ ನಮ್ಮ ಕಾರ್ಯವನ್ನು ಮುಂದುವರೆಸುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ರೈಲ್ವೆ ನಿಲ್ದಾಣ, ಗಡಿಯಾರ ವೃತ್ತ, ಬಸ್ ನಿಲ್ದಾಣ ಸೇರಿದಂತೆ ನಗರದೆಲ್ಲೆಡೆ ಆಹಾರ, ಹಣ್ಣು ನೀಡಲಾಯಿತು. ಜಿಲ್ಲಾ ಕಾರ್ಯಾಧ್ಯಕ್ಷ ಎಸ್. ಸುಧಾಕರ್.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಿ ವೆಂಕಟೇಶ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಿ.ಟಿ.ಪ್ರಭಾವತಿ, ಪುಷ್ಪಲತಾ, ನಂದಿನಿ ಜಿಲ್ಲಾ ಸಂಚಾಲಕರಾದ ಕೊಂಡರಾಜನಹಳ್ಳಿ ವಿ.ಜಗಧೀಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮರ್ನಾಥ್ ಸ್ವಾಮಿ ಕೆ.ಎಸ್.ಆರ್.ಟಿ.ಸಿ ನಾರಾಯಣಸ್ವಾಮಿ ಆಟೋ ಘಟಕದ ತಾಲೂಕು ಅಧ್ಯಕ್ಷ ಮಂಜುನಾಥ ರಾವ್ ಮೋನೀಶ್ ಶೈಲೇಂದ್ರ ಟಿ ವಿಕ್ರಮಾದಿತ್ಯ ಇನ್ನಿತರರು ಭಾಗವಹಿಸಿದ್ದರು.
ವರದಿ : ಲಕ್ಕೂರು ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.