ಪ್ರವಾಹದೊಪಾದಿಯಲ್ಲಿ ಹಬ್ಬುತ್ತಿರುವ ಕೋರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಳು, ಯಾವುದೇ ಜಾತಿ ಮತ ವರ್ಣ ಬೇದ ನೋಡದೆ. ವಿಟ್ಲ ಪಟ್ಟಣ ಹಾಗೂ ಆಸುಪಾಸಿನಲ್ಲಿರುವ ಹತ್ತಕ್ಕಿಂತಲೂ ಮಿಕ್ಕ ಗ್ರಾಮಗಳಿಗೆ ವಾಹನಗಳಲ್ಲಿ ತೆರಳಿ. ಪಂಚಾಯತ್ ಕಚೇರಿ, ರೇಷನ್ ಅಂಗಡಿ ಹಾಲು ಉತ್ಪಾದಕರ ಸಂಘ ಹೋಟೆಲು. ಬ್ಯಾಂಕ್. ಮುಂತಾದ ಜನಸೇವಾ ಕೇಂದ್ರ ಅಕ್ಕಪಕ್ಕಗಳಲ್ಲಿರುವ ಅಂಗಡಿಗಳು.
ಹಾಗೂ ಕೋರೋಣ ಸೋಂಕಿತರ ಮನೆ ಸಹಿತ ಎಲ್ಲಾ ಕಡೆಗಳಲ್ಲಿಯೂ ಸ್ಯಾನಿಟೈಝರ್ ಸಿಂಪಡಿಸಿ. ಧ್ವನಿವರ್ಧಕ ಮೂಲಕ ಕೋವಿಡ್ ಬಗ್ಗೆ ಜನ ಜಾಗೃತಿ ಅಭಿಯಾನ ನಡೆಸುತ್ತಾ, ಕರಪತ್ರ ವಿತರಿಸಿ, ಹೋಂ ಕ್ವಾರಂಟೈನ್ ನಲ್ಲಿರುವ ಕೊರೋನಾ ಪಾಸಿಟಿವ್ ಸೊಂಕಿತಗೊಂಡು ಆತಂಕಕ್ಕೆ ಒಳಗಾಗಿರುವವರಿಗೆ ಸಾಂತ್ವಾನ ಹೇಳುತ್ತಾ, ಕೊರೋನಾ ಪಾಸಿಟಿವ್ ಕುಟುಂಬಕ್ಕೆ ಹಾಗೂ ಕಡು ಬಡತನದಲ್ಲಿರು ಅನೇಕರಿಗೆ ಅತ್ಯಗತ್ಯ ದಿನಸಿ ಸಾಮಗ್ರಿಗಳ ಕಿಟ್ಟನ್ನು ನೀಡಿ ನೋವಿಗೆ ಸ್ಪಂದಿಸುತ್ತಾ. ಪಿಪಿ ಕಿಟ್ಟು. ಹಾಗೂ ಆಕ್ಸಿಜನ್ ಸಿಲಿಂಡರ್ ಕಿಟ್. ರಕ್ತದಾನ ಹಾಗೂ ಕೋವಿಡ್ ಮರಣದ ಅಂತ್ಯಕ್ರಿಯೆ ಮುಂತಾದ ತುರ್ತ ಸೇವಾ ಚಟುವಟಿಕೆಯಲ್ಲಿ. ಸಕ್ರಿಯರಾಗುವ ಮೂಲಕ ಕೊರೋನಾ ನಿಯಂತ್ರಣ ಕಾರ್ಯದಲ್ಲಿ ವೈದ್ಯರು ಶುಶ್ರೂಷಕರು ಪೊಲೀಸ್ ಇಲಾಖೆ ಮತ್ತಿತರ ಸಿಬ್ಬಂದಿಗಳ ಮನೊಬಲ ಹೆಚ್ಚಿಸುವುದಕ್ಕಾಗಿ ನಿರಂತರವಾಗಿ ಹಗಲಿರುಳು ಶ್ರಮಿಸುತ್ತಿರುವ. ಕರ್ನಾಟಕ ಮುಸ್ಲಿಂ ಜಮಾಅತ್ ವಿಟ್ಲ ಸರ್ಕಲ್ ವತಿಯಿಂದ. ಸಹಾಯ್ ವಿಟ್ಲ ಸರ್ಕಲ್ ವ್ಯಾಪ್ತಿಯ ಕಡಂಬು ಬೆದ್ರಕಾಡು ಪರಿಸರದಲ್ಲಿ ಕೋವಿಡ್ ಪೋಸಿಟೀವ್ ಕಾರಣದಿಂದ ಹೋಂ ಕ್ವಾರಂಟೈನ್ ನಲ್ಲಿರುವ ಕಡಂಬು ಬೆದ್ರಕಾಡು ಪರಿಸರದ ಎರಡು ಕುಟುಂಬಕ್ಕೆ ಆಹಾರ ಸಾಮಗ್ರಿಗಳನ್ನು ಒದಗಿಸಿ ಅವರನ್ನು ದೂರವಾಣಿ ಮೂಲಕ ನಿರಂತರವಾಗಿ ಸಂಪರ್ಕಿಸಿ ಯಾವುದೇ ಆತಂಕಕ್ಕೊಳಗಾಗಿ ಮಾನಸಿಕ ನೆಮ್ಮದಿ ಕಳೆದುಕೊಳ್ಳದಂತೆ ಸಾಂತ್ವಾನ ಮಾತಿನ ಮೂಲಕ ಧೈರ್ಯವನ್ನು ತುಂಬುತ್ತಿರುವ ಸಹಾಯ್ ವಿಟ್ಲ ಸರ್ಕಲ್ ತುರ್ತು ಸೇವಾ ತಂಡಕ್ಕೆ ಹೃದಯತುಂಬಿದ ಕೃತಜ್ಞತೆಗಳು. ನೀವು ನಡೆಸುತ್ತಿರುವಂತಹ ಕಾರುಣ್ಯ ಚಟುವಟಿಕೆಗಳು ಶ್ಲಾಘನೀಯವಾಗಿದೆ ಹಾಗೂ ಅಭಿನಂದನಾರ್ಹವಾಗಿದೆ.
ಅಲ್ಲಾಹು ಎಲ್ಲರ ಬದುಕಿನಲ್ಲಿ ಹೊಸ ಆಶಾಕಿರಣವನ್ನು ಮೂಡಿಸಲಿ. ಉತ್ತಮ ಆರೋಗ್ಯ, ಶಾಂತಿ ಮತ್ತು ನೆಮ್ಮದಿ ಎಲ್ಲರದಾಗಲಿ ಎಂದು ಪ್ರಾರ್ಥಿಸುತ್ತೇನೆ.
✍️ D.A ಮುಹಮ್ಮದ್ ಅಶ್ರಫ್ ಕೊಡಂಗಾಯಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.