ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) :- ಅಬಕಾರಿ ಮೊಕದ್ದಮೆಯಲ್ಲಿ ಜಪ್ತಾಗಿ ಪ್ರಾಧಿಕೃತ ಅಧಿಕಾರಿಗಳ ನ್ಯಾಯಾಲಯದ ಆದೇಶದಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ಕೆಎ -07 ಕ್ಯೂ -4623 ಹೀರೋ ಹೊಂಡಾ ಪ್ಯಾಷನ್ ಪ್ಲಸ್ , ಕೆಎ -08 ಯು -0760 ಹೀರೋ ಪ್ಯಾಷನ್ ಪ್ರೋ , ಕೆಎ -06 ಇಸಿ -9778 ಹೀರೋ ಹೊಂಡಾ ಸ್ಪೆಂಡರ್ ಪ್ಲಸ್ , ಕೆಎ -02 ಜೆಎಫ್ -6517 ಹೊಂಡಾ ಡಿಯೋ , ಕೆಎ -05 ಇಪಿ -6433 ಹೀರೋ ಹೊಂಡಾ ಸೈಂಡರ್ ಪ್ಲಸ್ , ಕೆಎ -05 ಕೆಎ -1813 ಸುಜುಕಿ ಆಕ್ಸೆಸ್ -125 . ಕೆಎ -08 ವಿ -5615 ಟಿವಿಎಸ್ ಎಕ್ಸ್ಎಲ್ -100 ,
ಮಾರುತಿ ಕಾರ್ ( CHASSIS NO . SD3081N757532 ) ವಾಹನಗಳನ್ನು ಜೂನ್ 21 ರಂದು ಬೆಳಿಗ್ಗೆ 11.00 ಗಂಟೆಗೆ ಅಬಕಾರಿ ನಿರೀಕ್ಷಕರ ಕಛೇರಿ , ಬಂಗಾರಪೇಟೆ ವಲಯ , ಬಂಗಾರಪೇಟೆಯಲ್ಲಿ ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲಾಗುವುದು . ಅಬಕಾರಿ ಇಲಾಖೆಯ ಸಿಬ್ಬಂದಿಗಳು ಹರಾಜಿನಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿಯಾಗಲಿ ಭಾಗವಹಿಸುವಂತಿಲ್ಲ .
ಅಬಕಾರಿ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ . ಹರಾಜಿನಲ್ಲಿ ಭಾಗವಹಿಸಲಿಚ್ಚಿಸುವವರು ಹರಾಜು ನಡೆಯುವ ದಿನಾಂಕದಂದು ಮತ್ತು ಸ್ಥಳದಲ್ಲಿ ಬೆಳಿಗ್ಗೆ 10.00 ರಿಂದ 11.00 ಗಂಟೆಯವರೆಗೆ ಹರಾಜು ನಿರ್ವಹಣಾಧಿಕಾರಿಗಳಲ್ಲಿ ಒಂದು ದ್ವಿಚಕ್ರ ವಾಹನಕ್ಕೆ 5 ಸಾವಿರ ರೂ . ಮತ್ತು ನಾಲ್ಕು ಚಕ್ರ ವಾಹನಕ್ಕೆ ಒಂದಕ್ಕೆ 10 ಸಾವಿರ ರೂ.ಗಳನ್ನು ಮುಂಗಡ ಠೇವಣಿ ಇಟ್ಟು ರಸೀದಿ ಪಡೆಯತಕ್ಕದ್ದು , ಮುಂಗಡ ಠೇವಣಿ ನೀಡಿದವರು ಮಾತ್ರ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ .
ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ವಿಳಾಸದ ಪುರಾವೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು . ಹೆಚ್ಚಿನ ಮಾಹಿತಿಗಾಗಿ ಅಬಕಾರಿ ನಿರೀಕ್ಷಕರು , ಬಂಗಾರಪೇಟೆ ವಲಯ ಅಥವಾ ಅಬಕಾರಿ ಉಪ ಅಧೀಕ್ಷಕರು , ಕೆ.ಜಿ.ಎಫ್ ಉಪ ವಿಭಾಗ ಅಥವಾ ಉಪ ಆಯುಕ್ತರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಕೋಲಾರದ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.