ಆರ್. ಎಂ. ಮಂಜುನಾಥ ಗೌಡ
ಸರ್ಕಾರದ ಸಹಾಯಧನ ಪಡೆಯಲು ಉಚಿತವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಕೇಂದ್ರಕ್ಕೆ ಚಾಲನೆ ನೀಡಿದ ಆರ್.ಎಂ. ಮಂಜುನಾಥ ಗೌಡ
(ವಿಶ್ವ ಕನ್ನಡಿಗ ನ್ಯೂಸ್ )ತೀರ್ಥಹಳ್ಳಿ : ಪಟ್ಟಣದ ಪ್ರವಾಸಿ ವಾಹನಗಳ ನಿಲ್ದಾಣ, ಅರಣ್ಯ ಇಲಾಖೆಯ ಕಛೇರಿ ಎದುರು ಸರ್ಕಾರದ ಸಹಾಯಧನ ಪಡೆಯಲು ಉಚಿತವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಭಾರತೀಯ ಯುವ ಕಾಂಗ್ರೆಸ್ ಸಂಘಟನೆ ಕೇಂದ್ರವನ್ನು ಸ್ಥಾಪಿಸಿದ್ದು, ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥ ಗೌಡರು ಜೂ. 6 ರಂದು ಚಾಲನೆ ನೀಡಿದರು.ಸರ್ಕಾರ ಕೋವಿಡ್ ಹಿನ್ನಲೆಯಲ್ಲಿ ವಿವಿಧ ಸ್ತರದ ವರ್ಗಗಳಿಗೆ ಸಹಾಯಧನವನ್ನು ಘೋಷಿಸಿದ್ದು, ಸರಿಯಾದ ಅರ್ಜಿ ನಮೂನೆಯನ್ನು ಸಲ್ಲಿಸುವಲ್ಲಿ ವಿಫಲವಾಗುವ ಹಿನ್ನಲೆಯಲ್ಲಿ ಅನೇಕ ವರ್ಗಗಳು ಅದರ ಸದುಪಯೋಗವನ್ನು ಪಡೆಯುವಲ್ಲಿ ವಿಫಲವಾಗುತ್ತಿವೆ. ಸರ್ಕಾರ ಘೋಷಿಸಿರುವ ಅನುದಾನವನ್ನು ಅರ್ಜಿ ಸಲ್ಲಿಸಲು ವಿಫಲವಾಗುವ ಹಿನ್ನಲೆಯಲ್ಲಿ ಸರಿಸುಮಾರು 50% ಗೂ ಹೆಚ್ಚು ಮಂದಿ ಪರಿಹಾರ ಹಣದಿಂದ ವಂಚಿತರಾಗುತ್ತಾರೆ. ಅರ್ಜಿ ತುಂಬಿಸಲು ಕಂಡ ಕಂಡಲ್ಲಿ ಅಲೆದು ಹೈರಾಣಾದವರ ಸಂಖ್ಯೆಯೂ ಅಧಿಕವಿರುತ್ತದೆ. ಅದನ್ನು ಮನಗಂಡ ಯುವ ಕಾಂಗ್ರೆಸ್ ಸರ್ಕಾರದ ಸಹಾಯಧನ ಸರಿಯಾಗಿ ತಲುಪಲು ಉಚಿತವಾಗಿ ಆನ್ಲೈನ್ಮೂಲಕ ಅರ್ಜಿ ಸಲ್ಲಿಸುವ ಕೇಂದ್ರವನ್ನು ಪಟ್ಟಣದ ಮುಖ್ಯ ಬಸ್ನಿಲ್ದಾಾಣದ ಸಮೀಪದ ಅರಣ್ಯ ಇಲಾಖೆಯ ಕಛೇರಿ ಎದುರು ಇರುವ ಪ್ರವಾಸಿ ವಾಹನಗಳ ನಿಲ್ದಾಣದಲ್ಲಿ ಕೇಂದ್ರವನ್ನು ತೆರೆದಿದ್ದು, ಕಾಂಗ್ರೆಸ್ ಮಖಂಡ ಆರ್.ಎಂ. ಮಂಜುನಾಥಗೌಡರು ರಿಕ್ಷಾ ಚಾಲಕರು ಹಾಗೂ ವಾಹನ ಚಾಲಕರಿಗೆ ಪರಿಹಾರ ಧನದ ಅರ್ಜಿ ನಮೂನೆಯ ರಶೀದಿಯನ್ನು ನೀಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ್ ಶೆಟ್ಟಿ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಮುಡುಬ ರಾಘವೇಂದ್ರ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ರಾಘವೇಂದ್ರ ಶೆಟ್ಟಿ, ಗ್ರಾಾ.ಪಂ. ಸದಸ್ಯ ನಾಗರಾಜ ಪೂಜಾರಿ, ಪ್ರಶಾಂತ್ ಪ್ರಭು, ಪ್ರದೀಪ್ಕುಮಾರ್, ಸತೀಶ್ ಶೆಟ್ಟಿ. ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.