ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) : – ಜಿಲ್ಲೆಯ ಭೂದಾಖಲೆಗಳ ಇಲಾಖೆ ಉಪ ನಿರ್ದೇಶಕರಾಗಿ ಬಿ.ಭಾಗ್ಯಮ್ಮ ಅವರನ್ನು ಸರ್ಕಾರ ನಿಯುಕ್ತಿಗೊಳಿಸಿದ್ದು , ಬುಧವಾರ ಸಂಜೆ ಜಿಲ್ಲಾಡಳಿತ ಭವನದಲ್ಲಿನ ಇಲಾಖೆಯ ಕಚೇರಿಯಲ್ಲಿ ನಿರ್ಗಮಿತ ಉಪನಿರ್ದೇಶಕ ಇ.ಗೋಪಾಲಯ್ಯ ಅವರಿಂದ ಅಧಿಕಾರ ಸ್ವೀಕರಿಸಿದರು.
ಬಿ.ಭಾಗ್ಯಮ್ಮ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಈವರೆಗೂ ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು , ಅವರಿಗೆ ಮುಂಬಡ್ತಿ ನೀಡಿ ಕೋಲಾರ ಜಿಲ್ಲಾ ಉಪ ನಿರ್ದೇಶಕರಾಗಿ ನಿಯುಕ್ತಿಗೊಳಿಸಿ ಸರ್ಕಾರ ಆದೇಶಿಸಿದೆ. ಕೋಲಾರ ಜಿಲ್ಲಾ ಭೂದಾಖಲೆಗಳ ಇಲಾಖೆ ಉಪನಿರ್ದೇಶಕರಾಗಿದ್ದ ಇ.ಗೋಪಾಲಯ್ಯ ಅವರನ್ನು ಮೈಸೂರು ನಗರಮಾಪನ ಯೋಜನಾಧಿಕಾರಿ ಹುದ್ದೆಗೆ ವರ್ಗಾಯಿಸಲಾಗಿದೆ.
ಅಧಿಕಾರ ಸ್ವೀಕರಿಸಿದ ಬಿ.ಭಾಗ್ಯಮ್ಮ , ರೈತರ ಕುಂದುಕೊರತೆಗಳನ್ನು ಆಲಿಸಿ ಕ್ರಮವಹಿಸುವುದಾಗಿಯೂ , ಇಲಾಖೆಯಲ್ಲಿ ಸರ್ವೇ ಕೆಲಸವನ್ನು ಮತ್ತಷ್ಟು ಚುರುಕುಗೊಳಿಸಲು ಶ್ರಮಿಸುವುದಾಗಿ ತಿಳಿಸಿ ಎಲ್ಲರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು , ಭೂಮಾಪನಾ ಇಲಾಖೆ ಸಹಾಯಕ ನಿರ್ದೇಶಕ ಜೆ.ವೆರೋನಿಕ , ಅಧೀಕ್ಷಕ ಎನ್.ರಾಜಶೇಖರ್ , ಸರ್ವೇ ಸೂಪರ್ವೈಸರ್ ಜಯಲಕ್ಷ್ಮಿ , ಕೋಲಾರ ಎಡಿಎಲ್ಆರ್ ಹನುಮಂತರಾಯಪ್ಪ , ಹೊಸಕೋಟೆ ಎಡಿಎಲ್ಆರ್ ಶಿವಗಂಗಯ್ಯಬಂಗಾರಪೇಟೆ ಎಡಿಎಲ್ಆರ್ ತೋಟಾರಾಧ್ಯ , ಮಾಲೂರು ಎಡಿಎಲ್ಆರ್ ಅಶ್ವಿನಿ , ಮಾಲೂರು ಎಡಿಎಲ್ಆರ್ ಅಶ್ವಿನಿ , ಮುಳಬಾಗಿಲು ಎಡಿಎಲ್ಆರ್ ನಿವೇಧಿತಾ , ಸರ್ವೇಯರ್ಗಳಾದ ನಮತಾ , ಶೋಭಾ , ಸುಭಾಷ್ , ಮಂಜುಳಾ , ಮಂಜುನಾಥ್ , ಆನಂದನಾಯ್ಕ , ವೆಂಕಟರೆಡ್ಡಿ , ರವಿಕುಮಾರ್ , ಸುನಿಲ್.ಭಟಹಳ್ಳಿ ನಾರಾಯಣಸ್ವಾಮಿ , ಹೊಸಕೋಟೆಯ ಮೊಗಣ್ಣಗೌಡ , ರವಿ.ಮುದಕವಿ ಮತ್ತಿತರರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.