ಲಕ್ಕೂರು (ವಿಶ್ವ ಕನ್ನಡಿಗ ನ್ಯೂಸ್): ಚಿಕ್ಕತಿರುಪತಿ ಗ್ರಾಮದಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಟಿ.ಕೆ.ಅಶ್ವಥ್ ನಾರಾಯಣಗೌಡ ರವರಿಗೆ ಅವರ ಸ್ವಗೃಹ ಚಿಕ್ಕತಿರುಪತಿಯಲ್ಲಿ ಮಾಲೂರಿನ ಸಮಾಜ ಸೇವಕರಾದ ಜಿ.ಇ.ರಾಮೇಗೌಡ ಹಾಗೂ ತಂಡದವರು ಅಭಿನಂದಿಸಿ ಹಾರೈಸಲಾಯಿತು.
ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಮಾಲೂರಿನ ಸಮಾಜ ಸೇವಕ ಜಿ.ಇ.ರಾಮೇಗೌಡ ರವರು ಮಾತನಾಡಿ “ನಮ್ಮ ಎಲ್ಲಾರ ಜೀವನದ ವಿಕಾಸನ ಹಾಗೂ ಅಭಿವೃದ್ದಿಗೆ ಶಿಕ್ಷಣ ನಮಗೆ ಪ್ರಬಲ ಅಸ್ತ್ರವಾಗಿ ನಿಲ್ಲುತ್ತೆ, ಆ ಹಾದಿಯಲ್ಲಿ ನಮಗೆ ಅಕ್ಷರ ಕಲಿಸಿದ ಗುರುಗಳ ಪಾತ್ರ ಬಹಳ ಮಹತ್ತರವಾದದ್ದು, ಈ ನಾಡಿನಲ್ಲಿ ಮಕ್ಕಳನ್ನು ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ಗುರುಗಳ ಕಾರ್ಯ ಬಹು ಎತ್ತರವಾದದ್ದು, ಈ ರೀತಿಯ ಉತ್ತಮ ಕಾರ್ಯವನ್ನು ಟಿ.ಕೆ ಅಶ್ವಥ್ ನಾರಾಯಣ ಗೌಡ ರವರು ಹಲವಾರು ಸರ್ಕಾರಿ ಶಾಲೆಗಳಲ್ಲಿ ಸರಿಸುಮಾರು 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ ಅವರಿಗೆ ನಾವು ಅಭಾರಿ” ಎಂದರು.
ಯುವ ಮುಖಂಡರಾದ ಮಾಲೂರಿನ ರಾಘವೇಂದ್ರ ರವರು ಮಾತನಾಡಿ “ಸಾವಿರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಇವರ ಪಾತ್ರ ಮಹತ್ತರವಾದದ್ದು ಹಾಗೇ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ, ನೌಕರರ ಸಂಘದ ಗೌರವ ಅಧ್ಯಕ್ಷರಾಗಿ ಇವರ ಸೇವೆ ನೌಕರರ ಸಂಘದ ಅಭಿವೃದ್ದಿಗೆ ಸಾಕಷ್ಟು ಶ್ರಮಿಸುವ ಮೂಲಕ ಪ್ರಬುದ್ದತೆ ಮೆರೆದಿದ್ದಾರೆ. ಇವರ ಜೀವನ ಸಂತೋಷಕರವಾಗಿ ಸಾಗಲಿ, ಉತ್ತಮ ಆರೋಗ್ಯ ನೀಡಲಿ” ಎಂದು ಹಾರೈಸಿದರು.
ಮುಖ್ಯ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಟಿ.ಕೆ.ಅಶ್ವಥ್ ನಾರಾಯಣಗೌಡ ರವರು ಮಾತನಾಡಿ “ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಹಲವು ಸಮಾನ ಮನಸ್ಕರು, ನೌಕರರು, ವಿದ್ಯಾರ್ಥಿಗಳು ಬಂದು ಅಭಿನಂದನೆ ಸಲ್ಲಿಸಿ ಅವರ ಹಾಡುತ್ತಿರುವ ಮಾತುಗಳು ನನ್ನ ಶಿಕ್ಷಕ ವೃತ್ತಿಯ ಸಾರ್ಥಕತೆಯ ಅವಿಸ್ಮರಣೀಯ ಕ್ಷಣಗಳು ಎಂದರೆ ತಪ್ಪಗಲಾರದು, ನನ್ನಯ ಈ ಸೇವೆಗೆ ಸಹಕರಿಸಿದ ಎಲ್ಲಾ ಸರ್ಕಾರಿ ನೌಕರರಿಗೆ, ವೃತ್ತಿ ಭಾಂದವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದರು.
ಅಭಿನಂದನಾ ಸಮಾರಂಭದಲ್ಲಿ ಮಾಲೂರಿನ ಸಮಾಜ ಸೇವಕ ಜಿ.ಇ.ರಾಮೇಗೌಡ, ಮುಖಂಡರಾದ ರಾಘವೇಂದ್ರ, ದೊಮ್ಮಲೂರು ದೇವರಾಜ್, ಎಸ್.ಎಲ್.ವಿ ವಿದ್ಯಾಸಂಸ್ಥೆಯ ಮುಖ್ಯಸ್ಥರು ಹಾಗೂ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.